ಸ್ವಪ್ನ ಶಾಸ್ತ್ರ: ಕನಸಿನಲ್ಲಿ ಗಣಪತಿಯ ಇಂತಹ ಚಿತ್ರ ನೋಡಿದರೆ ಏನಾಗುತ್ತೆ?

First Published Sep 17, 2021, 5:56 PM IST

ಕನಸು ಕಾಣದ ಜೀವವೇ ಇರಲಾರದು, ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯ ಕನಸು ಕಾಣುತ್ತಾರೆ. ರಾತ್ರಿ ಮಲಗುವಾಗ ನಾವು ಅನೇಕ ಕನಸುಗಳನ್ನು ಹೆಚ್ಚಾಗಿ ನೋಡುತ್ತೇವೆ. ಈ ಕನಸುಗಳಲ್ಲಿ ಕೆಲವನ್ನು ನಾವು ನೆನಪಿಸಿಕೊಳ್ಳುತ್ತೇವೆ ಮತ್ತು ಉಳಿದವುಗಳನ್ನು ನಾವು ಮರೆತುಬಿಡುತ್ತೇವೆ. 

ನಿದ್ರೆಯಲ್ಲಿ ಕಾಣುವ ಈ ಕನಸುಗಳಿಗೆ ಸ್ವಲ್ಪ ಅರ್ಥವಿದೆ. ಆದಾಗ್ಯೂ, ಮಾಹಿತಿಯ ಕೊರತೆಯ ಕಾರಣವು ಕಂಡ ಕನಸು ಏನನ್ನು ಅರ್ಥೈಸಬಹುದು ಎಂದು ತಿಳಿಯುವುದಿಲ್ಲ. ಕೆಲವು ಕನಸುಗಳ ಅರ್ಥ ತಿಳಿದುಕೊಂಡರೆ ನಮ್ಮನ್ನು ಆಶ್ಚರ್ಯಪಡುವಂತೆ ಮಾಡುತ್ತದೆ. ಕೆಲವು ಕನಸುಗಳು ವಿಶೇಷ ಅರ್ಥವನ್ನು ಹೊಂದಿದೆ. 

ನಮಗೆ ಕನಸುಗಳ ಅರ್ಥ ತಿಳಿದಿಲ್ಲ
ಸ್ವಪ್ನ ಶಾಸ್ತ್ರಗಳ ಪ್ರಕಾರ  ಪ್ರತಿಯೊಂದು ಕನಸಿಗೂ ಅದರದೇ ಆದ ಅರ್ಥವಿದೆ. ಯಾವ ಜನರಿಗೆ ತಮಗೆ ಬಿದ್ದ ಕನಸಿನ ಅರ್ಥವಾಗುವುದಿಲ್ಲವೋ, ಅದೇ ಕನಸು ಪದೇ ಪದೇ ಕಾಣುತ್ತಿದ್ದರೆ, ಅದರ ಅರ್ಥವೇನೆಂದು ಮನಸ್ಸಿನಲ್ಲಿ ಪ್ರಸಾರವಾಗುತ್ತಲೇ ಇರುತ್ತದೆ. 

ಗಣೇಶನ ಕನಸು ಶುಭಕರವಾಗಿದೆ
ಅನೇಕರು ಹೆಚ್ಚಾಗಿ ಕನಸುಗಳಲ್ಲಿ ದೇವರು ಮತ್ತು ದೇವತೆಗಳನ್ನು ನೋಡುತ್ತಾರೆ. ಕನಸಿನಲ್ಲಿ ದೇವತೆಗಳನ್ನು ನೋಡುವುದು ಶುಭಕರ. ಇದು ಧರ್ಮದ ಬಗ್ಗೆ ನಿಮ್ಮ ಭಾವನೆಗಳನ್ನು ಪ್ರತಿಬಿಂಬಿಸುತ್ತದೆ. ಕನಸಿನಲ್ಲಿ ಗಣೇಶನನ್ನು ಸುಖಭಂಗಿಯಲ್ಲಿ ನೋಡಿದರೆ ಆಗ ಜೀವನದಲ್ಲಿ ದೀರ್ಘಕಾಲದಿಂದ ಸೃಷ್ಟಿಯಾಗಿರುವ ಸಮಸ್ಯೆಗಳಿಂದ ಮುಕ್ತಿ ಹೊಂದುತ್ತೀರಿ. 

ಸ್ವಪ್ನ ಶಾಸ್ತ್ರಗಳ ಪ್ರಕಾರ ಕನಸಿನಲ್ಲಿ ಸಾಕ್ಷಾತ್ ಗಣಪತಿ ಕಾಣಿಸಿಕೊಂಡರೆ ಅನೇಕ ಸಾಧ್ಯತೆಗಳನ್ನು ಸೃಷ್ಟಿಸುತ್ತದೆ. ಇದು ಭವಿಷ್ಯ ಉಜ್ವಲವಾಗಿದೆ ಎಂಬುದರ ಸಂಕೇತವಾಗಿರಬಹುದು. ಗಣಪತಿ ದೇವರು ಮುದ್ರಾ ಆಶೀರ್ವಾದವನ್ನು ಕಂಡರೆ, ಕೆಲಸದಲ್ಲಿನ ಅಡೆತಡೆಗಳಿಂದ ಪರಿಹಾರವಾಗಲಿದೆ ಎಂದರ್ಥ. 

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು
ಕೆಲವೊಮ್ಮೆ  ಗಣೇಶ ದೇವರು ಕನಸಿನಲ್ಲಿ ದೇವಾಲಯದಲ್ಲಿ ಮುಳುಗಿರುವುದನ್ನು ನೋಡುತ್ತೇವೆ. ಯಾಕೆ ಈ ರೀತಿ ಕನಸು ಬಿದ್ದಿದೆ ಎಂದುಕೊಳ್ಳಬೇಡಿ. ಇದಕ್ಕೂ ಒಂದು ಅರ್ಥವಿದೆ. ಅಂದರೆ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುತ್ತಿದ್ದರೆ, ಅದರಲ್ಲಿ ಯಶಸ್ಸನ್ನು ಪಡೆಯಲಿದ್ದೀರಿ ಎಂದು ಸೂಚಿಸುತ್ತದೆ. 
 

ಕನಸಿನಲ್ಲಿ ಗಣಪತಿ ಇಲಿಯ ಮೇಲೆ ಕುಳಿತಿರುವಂತೆ ಕಂಡುಬಂದರೆ ತುಂಬಾನೇ ಶುಭ ಎಂದು ಪರಿಗಣಿಸಲಾಗುತ್ತದೆ,  ಅದು ವ್ಯವಹಾರದಲ್ಲಿನ ತೊಂದರೆಗಳನ್ನು ನಿವಾರಿಸುವ ಸಂಕೇತವೆಂದು ಪರಿಗಣಿಸಲಾಗುತ್ತದೆ. ಜೊತೆಗೆ ಕೆಲಸಗಳಲ್ಲಿ ಯಶಸ್ಸನ್ನು ಸಿಗುವಂತೆ ಮಾಡುತ್ತದೆ. 

ಮುರಿದ ಪ್ರತಿಮೆಯನ್ನು ನೋಡಿದರೆ ಜಾಗರೂಕರಾಗಿರಬೇಕು
ಕನಸಿನಲ್ಲಿ  ಭಗ್ನಗಣೇಶನ ವಿಗ್ರಹವನ್ನು ಅಂದರೆ ಮುರಿದು ಹೋದ ವಿಗ್ರಹ ಕಂಡರೆ ಸ್ವಲ್ಪ ಜಾಗರೂಕರಾಗಿರಬೇಕು. ಇದು ಮುಂದಿನ ದಿನಗಳಲ್ಲಿ ಗಂಭೀರ ಸಮಸ್ಯೆಯ ಸಂಕೇತವಾಗಿದೆ. ಆದುದರಿಂದ ಎಚ್ಚೆತ್ತುಕೊಳ್ಳುವುದು ಉತ್ತಮ. 

ಕನಸಿನಲ್ಲಿ ಮುರಿದ ಗಣೇಶನ ದರ್ಶನಗಳನ್ನು ಪಡೆದರೆ,  ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಡಬಹುದು. ಇಂತಹ ಕನಸು ಕಂಡು ಬಂದರೆ ಅಂತಹ ಸಂದರ್ಭದಲ್ಲಿ ಗಣಪತಿಯನ್ನು ಪೂಜಿಸುವ ಮೂಲಕ ಅವರನ್ನು ಮೆಚ್ಚಿಸಬಹುದು. ಯಾವುದೇ ಕಾರ್ಯಕ್ಕೂ ಮೊದಲು ಗಣಪತಿಯನ್ನು ಪೂಜಿಸಿ ಕಾರ್ಯ ಆರಂಭಿಸಿ. 
 

click me!