Snake Dream Meaning: ನಿಮ್ಮ ಕನಸಿನಲ್ಲಿ ಎಂದಾದರೂ ಹಾವು ಕಾಣಿಸಿಕೊಂಡಿದೆಯಾ?, ಕನಸಲ್ಲಿ ಹಾವು ಬರುವುದರ ಹಿಂದೆ ಒಂದು ವಿಶೇಷ ಅರ್ಥವಿದೆ ಅನ್ನೋದು ನಿಮಗೆ ಗೊತ್ತಾ? ಹಾಗಾದರೆ ಹಾವು ಹೇಗೆ ಕಂಡರೆ ಶುಭ? ಸ್ವಪ್ನ ಶಾಸ್ತ್ರ ಏನು ಹೇಳುತ್ತೆ ತಿಳಿಯೋಣ ಬನ್ನಿ.
ರಾತ್ರಿ ಮಲಗಿದ್ದಾಗ ಪ್ರತಿಯೊಬ್ಬರಿಗೂ ಕನಸು ಬೀಳುವುದು ಸಹಜ. ಕೆಲವರು ಬೆಳಿಗ್ಗೆ ಏಳುವಷ್ಟರಲ್ಲಿ ಆ ಕನಸುಗಳನ್ನು ಮರೆತುಬಿಡುತ್ತಾರೆ. ಆದರೆ, ಕೆಲವು ಕನಸುಗಳನ್ನು ಮರೆಯಲು ಪ್ರಯತ್ನಿಸಿದರೂ ಸಾಧ್ಯವಾಗುವುದಿಲ್ಲ. ಆ ಕನಸುಗಳು ಪದೇ ಪದೇ ನೆನಪಾಗುತ್ತಲೇ ಇರುತ್ತವೆ. ಅದರಲ್ಲೂ ಕನಸಿನಲ್ಲಿ ನಾವು ನೋಡುವುದರ ಮೇಲೆ ಅದರ ಪ್ರಭಾವ ಹೆಚ್ಚಾಗಿರುತ್ತದೆ. ಹಾಗಾದರೆ, ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಅದರ ಅರ್ಥವೇನು? ಸ್ವಪ್ನ ಶಾಸ್ತ್ರ ಏನು ಹೇಳುತ್ತದೆ ಎಂಬುದನ್ನು ಈಗ ತಿಳಿಯೋಣ.
23
ಅಟ್ಟಿಸಿಕೊಂಡು ಬಂದರೆ ಅಥವಾ ಕಚ್ಚಲು ಪ್ರಯತ್ನಿಸಿದರೆ
ಕನಸಿನಲ್ಲಿ ಹಾವು ಕಾಣಿಸಿಕೊಳ್ಳುವುದು ಅನೇಕರಿಗೆ ಆಗುವ ಅನುಭವ. ಸ್ವಪ್ನ ಶಾಸ್ತ್ರ ಮತ್ತು ಮನೋವಿಜ್ಞಾನದ ಪ್ರಕಾರ, ಇದಕ್ಕೆ ಬೇರೆ ಬೇರೆ ಅರ್ಥಗಳಿವೆ. ಅಷ್ಟೇ ಅಲ್ಲ, ಹಾವು ನಮಗೆ ಹೇಗೆ ಕಾಣಿಸಿಕೊಳ್ಳುತ್ತದೆ ಎಂಬುದರ ಮೇಲೆ ಅದರ ಅರ್ಥ ಬದಲಾಗುತ್ತದೆ. ಅಂದರೆ, ಹಾವು ಕನಸಿನಲ್ಲಿ ಕಾಣಿಸಿಕೊಂಡು ನಿಮಗೆ ಏನೂ ಮಾಡದೆ ಹೋದರೆ, ಅದು ಅದೃಷ್ಟದ ಸಂಕೇತ. ಶೀಘ್ರದಲ್ಲೇ ನಿಮಗೆ ಯಾವುದಾದರೂ ರೂಪದಲ್ಲಿ ಅದೃಷ್ಟ ಬರಲಿದೆ, ವಿಶೇಷವಾಗಿ ಧನಲಾಭವಾಗುವ ಸಾಧ್ಯತೆಗಳಿವೆ. ಒಂದು ವೇಳೆ ಹಾವು ನಿಮ್ಮನ್ನು ಅಟ್ಟಿಸಿಕೊಂಡು ಬಂದರೆ ಅಥವಾ ಕಚ್ಚಲು ಪ್ರಯತ್ನಿಸಿದರೆ, ನಿಜ ಜೀವನದಲ್ಲಿ ನಿಮಗೆ ಶತ್ರುಗಳಿಂದ ತೊಂದರೆ ಅಥವಾ ಆತಂಕ ಎದುರಾಗಲಿದೆ ಎಂದರ್ಥ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜಾತಕದಲ್ಲಿ ರಾಹು ಅಥವಾ ಕೇತು ದೋಷಗಳಿದ್ದಾಗ ಅಥವಾ ಕಾಲಸರ್ಪ ದೋಷವಿದ್ದಾಗ ಕನಸಿನಲ್ಲಿ ಹಾವುಗಳು ಬರುತ್ತವೆ. ಅಂತಹ ದೋಷಗಳಿದ್ದರೆ, ದೋಷ ನಿವಾರಣಾ ಪೂಜೆ ಮಾಡಿಸಿದರೆ ಸಾಕು.
33
ಹೊಸ ವ್ಯವಹಾರದ ಆರಂಭ ಸೂಚಿಸುತ್ತೆ
ಹಾವು ಮರ ಹತ್ತುತ್ತಿರುವಂತೆ ಕನಸು ಬಿದ್ದರೆ, ನಿಮ್ಮ ವೃತ್ತಿ ಅಥವಾ ವ್ಯವಹಾರದಲ್ಲಿ ಉನ್ನತ ಮಟ್ಟವನ್ನು ತಲುಪುತ್ತೀರಿ ಎಂದರ್ಥ. ನೀವು ಯಾವುದಾದರೂ ವಿಷಯದ ಬಗ್ಗೆ ತೀವ್ರವಾಗಿ ಭಯಪಡುತ್ತಿರುವಾಗ ಅಥವಾ ಮಾನಸಿಕ ಒತ್ತಡದಲ್ಲಿದ್ದಾಗಲೂ ಕನಸಿನಲ್ಲಿ ಹಾವು ಬರಬಹುದು. ಅದು ನಿಮ್ಮ ಮನಸ್ಸಿನಲ್ಲಿ ಅಡಗಿರುವ ಭಾವನೆಗಳ ಪ್ರತಿರೂಪ. ಹಾವು ತನ್ನ ಪೊರೆ ಕಳಚುತ್ತಿರುವಂತೆ ಕನಸು ಬಿದ್ದರೆ, ನಿಮ್ಮ ಜೀವನದಲ್ಲಿ ಹಳೆಯ ಹಂತವೊಂದು ಮುಗಿದು ಹೊಸ ಬದಲಾವಣೆ ಬರಲಿದೆ ಎಂದು ಸೂಚಿಸುತ್ತದೆ. ಇನ್ನು, ಕಪ್ಪು ಹಾವು ಅನಾರೋಗ್ಯ ಅಥವಾ ಹಠಾತ್ ಸಮಸ್ಯೆಗಳನ್ನು, ಬಿಳಿ ಹಾವು ಅತ್ಯಂತ ಶುಭ, ಆಧ್ಯಾತ್ಮಿಕ ಪ್ರಗತಿ ಮತ್ತು ಅದೃಷ್ಟವನ್ನು, ಬಂಗಾರದ/ಹಳದಿ ಹಾವು ಧನಪ್ರಾಪ್ತಿ ಮತ್ತು ಸಂಪತ್ತಿನ ಹೆಚ್ಚಳವನ್ನು, ಹಾಗೂ ಹಸಿರು ಹಾವು ಹೊಸ ಸಂಬಂಧ ಅಥವಾ ಹೊಸ ವ್ಯವಹಾರದ ಆರಂಭವನ್ನು ಸೂಚಿಸುತ್ತದೆ. ಒಂದು ವೇಳೆ ಹಾವಿನ ಕನಸು ಕಂಡು ನೀವು ಭಯಪಟ್ಟರೆ, ಮರುದಿನ ಶಿವನಿಗೆ ಅಥವಾ ಸುಬ್ರಹ್ಮಣ್ಯ ಸ್ವಾಮಿಗೆ ಅಭಿಷೇಕ ಮಾಡಿಸಿ. ಹಾಲು, ಹಣ್ಣುಗಳನ್ನು ದಾನ ಮಾಡಿ. 'ಓಂ ನಮಃ ಶಿವಾಯ' ಮಂತ್ರವನ್ನು ಜಪಿಸುವುದರಿಂದ ಮಾನಸಿಕ ಶಾಂತಿ ಸಿಗುತ್ತದೆ.