ವೈವಾಹಿಕ ಜೀವನದಲ್ಲಿ ಸಮೃದ್ಧಿಗಾಗಿ ತುಳಸಿ ಹಬ್ಬದ ದಿನ ಇದನ್ನ ಮಾಡಿ

First Published Nov 1, 2022, 2:40 PM IST

ಹಿಂದೂ ಧರ್ಮದಲ್ಲಿ, ತುಳಸಿ ವಿವಾಹ ಅಥವಾ ತುಳಸಿ ಪೂಜೆಯನ್ನು ಬಹಳ ಆಡಂಬರ ಮತ್ತು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ದಿನದಂದು, ತುಳಸಿ ದೇವಿ ಶಾಲಿಗ್ರಾಮವನ್ನು ಮದುವೆಯಾಗುತ್ತಾಳೆ ಎನ್ನುವ ನಂಬಿಕೆ ಇದೆ. ಈ ಮದುವೆಯ ವಿಶೇಷತೆ ಬಗ್ಗೆ ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ, ಇದು ವ್ಯಕ್ತಿಗೆ ವಿಶೇಷ ಪ್ರಯೋಜನಗಳನ್ನು ನೀಡುತ್ತದೆ. ತುಳಸಿ ಬಗ್ಗೆ ಅಂತಹ ವಿಶೇಷತೆಗಳ ಬಗ್ಗೆ ತಿಳಿಯೋಣ.

ತುಳಸಿ ವಿವಾಹ (tulsi vivah) ಹಬ್ಬ ಅಥವಾ ತುಳಸಿ ಪೂಜೆಯನ್ನು ಹಿಂದೂ ಧರ್ಮದಲ್ಲಿ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಪ್ರತಿ ವರ್ಷ, ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿ ದಿನದಂದು ಈ ಹಬ್ಬವನ್ನು ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ತುಳಸಿ ವಿವಾಹದ ದಿನದಂದು, ಭಗವಾನ್ ಶಾಲಿಗ್ರಾಮವು ತಾಯಿ ತುಳಸಿಯನ್ನು ಮದುವೆಯಾಗುತ್ತಾನೆ. ಈ ವರ್ಷ, ಈ ಹಬ್ಬವನ್ನು ನವೆಂಬರ್ 5, 2022 ರಂದು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. 

ಈ ಹಬ್ಬಕ್ಕೆ ಒಂದು ದಿನ ಮೊದಲು, ಭಗವಾನ್ ವಿಷ್ಣುವು ನಾಲ್ಕು ತಿಂಗಳ ನಂತರ ಯೋಗ ನಿದ್ರೆಯಿಂದ ಎಚ್ಚರಗೊಳ್ಳುತ್ತಾನೆ. ಧರ್ಮಗ್ರಂಥಗಳಲ್ಲಿ, ಈ ದಿನದ ಸಂದರ್ಭದಲ್ಲಿ ಕೆಲವು ವಿಶೇಷ ಪರಿಹಾರಗಳನ್ನು ನೀಡಲಾಗಿದೆ, ಇವುಗಳನ್ನು ಪಾಲಿಸೋದ್ರಿಂದ ವ್ಯಕ್ತಿಯ ವೈವಾಹಿಕ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. 
 

ಅಲ್ಲದೆ, ಈ ಧರ್ಮಗ್ರಂಥದಲ್ಲಿ ತಿಳಿಸಿರುವಂತೆ ತುಳಸಿ ಪೂಜೆ ದಿನ ನೀವು ಕೆಲವೊಂದು ನಿಯಮಗಳನ್ನು ಪಾಲಿಸೋದ್ರಿಂದ ಭಗವಾನ್ ವಿಷ್ಣು ಮತ್ತು ತಾಯಿ ಲಕ್ಷ್ಮಿಯ (goddess Lakshmi) ಅನುಗ್ರಹವು ಯಾವಾಗಲೂ ಕುಟುಂಬದ ಮೇಲೆ ಉಳಿಯುತ್ತದೆ. ಅವುಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ -

ತುಳಸಿ ವಿವಾಹ 
ವೈವಾಹಿಕ ಜೀವನದಲ್ಲಿ (married life) ಸಮಸ್ಯೆಗಳನ್ನು ಎದುರಿಸುತ್ತಿರುವವರು. ತುಳಸಿ ಮದುವೆಯ ದಿನದಂದು ಅವರು ಕೆಲವು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇದಕ್ಕಾಗಿ, ಗಂಡ ಮತ್ತು ಹೆಂಡತಿ ಪವಿತ್ರ ನದಿಯಲ್ಲಿ ಸ್ನಾನ ಮಾಡಬೇಕು. ಇದು ಸಾಧ್ಯವಾಗದಿದ್ದರೆ, ಗಂಗಾ ನೀರು ಅಥವಾ ಪವಿತ್ರ ನದಿಯ ನೀರನ್ನು ಮನೆಯಲ್ಲಿನ ನೀರಿನಲ್ಲಿ ಬೆರೆಸಿ ಸ್ನಾನ ಮಾಡಿ. ಇದನ್ನು ಮಾಡುವುದರಿಂದ, ಗಂಡ ಮತ್ತು ಹೆಂಡತಿ ಇಬ್ಬರೂ ಪ್ರಯೋಜನ ಪಡೆಯುತ್ತಾರೆ.

ಸ್ನಾನದೊಂದಿಗೆ, ನೀವು ಮನೆಯಲ್ಲಿ ಕುಳಿತು ಈ ಸುಲಭ ಪರಿಹಾರವನ್ನು ಸಹ ಮಾಡಬಹುದು. ಇದಕ್ಕಾಗಿ, ತುಳಸಿ ಎಲೆಗಳನ್ನು ಶುದ್ಧವಾದ ನೀರಿನಲ್ಲಿ ಹಾಕಿ ಮತ್ತು ಅದನ್ನು ಸ್ವಲ್ಪ ಸಮಯದವರೆಗೆ ಇರಿಸಿದ ನಂತರ, ಆ ನೀರನ್ನು ಮನೆಯಾದ್ಯಂತ ಸಿಂಪಡಿಸಿ. ಇದನ್ನು ಮಾಡುವುದರಿಂದ, ಸಕಾರಾತ್ಮಕ ಶಕ್ತಿಯು (positive energy) ಮನೆಯಲ್ಲಿ ಹರಡುತ್ತದೆ ಮತ್ತು ವೈವಾಹಿಕ ಜೀವನದಲ್ಲಿ ಪ್ರೀತಿ ಹೆಚ್ಚಾಗುತ್ತದೆ.

ಏಕಾದಶಿ ಅಥವಾ ದ್ವಾದಶಿಯಂದು ತುಳಸಿ ಎಲೆಗಳನ್ನು ಮುರಿಯದಂತೆ ವಿಶೇಷ ಕಾಳಜಿ ವಹಿಸಿ. ಬದಲಾಗಿ, ಈ ಪರಿಹಾರಕ್ಕಾಗಿ, ತುಳಸಿ ಎಲೆಗಳನ್ನು 2-3 ದಿನಗಳ ಮುಂಚಿತವಾಗಿ ಸಂಗ್ರಹಿಸಿ ಅಥವಾ ಬಿದ್ದ ಎಲೆಗಳನ್ನು ಬಳಸಿ. ಏಕಾದಶಿ ಅಥವಾ ದ್ವಾದಶಿಯಂದು ತಪ್ಪಿಯೂ ತುಳಸಿ ಎಲೆ ತೆಗೆಯಬಾರದು ಅನ್ನೋದು ನಿಮಗೆ ನೆನಪಿರಲಿ.

ಈ ದಿನದಂದು, ತಾಯಿ ತುಳಸಿಗೆ ಕೆಂಪು ಬಟ್ಟೆಗಳು ಮತ್ತು ಹದಿನಾರು ಶೃಂಗಾರಗಳನ್ನು ಅರ್ಪಿಸುವುದರಿಂದ ವ್ಯಕ್ತಿಗೆ ವಿಶೇಷ ಪ್ರಯೋಜನ ಸಿಗುತ್ತೆ. ಅಲ್ಲದೆ, ಈ ದಿನದಂದು, ಗಂಡ ಮತ್ತು ಹೆಂಡತಿ ಒಟ್ಟಿಗೆ ತುಳಸಿ ವಿವಾಹದಲ್ಲಿ ಭಾಗವಹಿಸಬೇಕು. ಇದು ವೈವಾಹಿಕ ಜೀವನದಲ್ಲಿ ಬರುವ ಎಲ್ಲಾ ಸಮಸ್ಯೆಗಳನ್ನು ತೆಗೆದುಹಾಕುತ್ತದೆ.

click me!