ಗಂಡಸರೇ…. ಪತ್ನಿ ಬಳಿ ಕೇಳದೆ ಈ ಕೆಲಸವನ್ನು ತಪ್ಪಿಯೂ ಮಾಡ್ಬೇಡಿ!

Published : Apr 30, 2025, 09:33 PM ISTUpdated : May 02, 2025, 03:10 PM IST

ಹಿಂದೂ ಧಾರ್ಮಿಕ ಗ್ರಂಥಗಳ ಪ್ರಕಾರ, ಗಂಡನು ಯಾವುದೇ ಕೆಲಸ ಮಾಡುವ ಮೊದಲು ತನ್ನ ಹೆಂಡತಿಯ ಸಲಹೆಯನ್ನು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ, ಮನೆಯಿಂದ ಸಂತೋಷ ಮತ್ತು ಸಮೃದ್ಧಿ ಮಾಯವಾಗುತ್ತದೆ.  

PREV
16
ಗಂಡಸರೇ…. ಪತ್ನಿ ಬಳಿ ಕೇಳದೆ ಈ ಕೆಲಸವನ್ನು ತಪ್ಪಿಯೂ ಮಾಡ್ಬೇಡಿ!

ಸನಾತನ ಧರ್ಮದಲ್ಲಿ,  (Sandatana Dharma) ಹುಟ್ಟಿನಿಂದ ಮರಣದವರೆಗೆ 16 ಸಂಸ್ಕಾರಗಳನ್ನು ಉಲ್ಲೇಖಿಸಲಾಗಿದೆ ಮತ್ತು ಅವುಗಳಲ್ಲಿ ಪ್ರಮುಖವಾದ ಸಂಸ್ಕಾರವೆಂದರೆ ಮದುವೆ. ಧಾರ್ಮಿಕ ಗ್ರಂಥಗಳಲ್ಲಿ, ಮದುವೆಯನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ.  ಯಾಕಂದ್ರೆ ಇಬ್ಬರು ವ್ಯಕ್ತಿಗಳು ಮದುವೆಯಾದಾಗ, ಅವರು ಜೀವನದಲ್ಲಿ ಒಬ್ಬರಿಗೊಬ್ಬರು ಪೂರಕರಾಗಿ ಬದುಕುತ್ತಾರೆ . ಗಂಡ ಮತ್ತು ಹೆಂಡತಿ ಪ್ರತಿಯೊಂದು ಸಂತೋಷ ಮತ್ತು ದುಃಖದಲ್ಲಿ ಪರಸ್ಪರ ಬೆಂಬಲಿಸುತ್ತಾರೆ ಮತ್ತು ಪರಸ್ಪರರಿಲ್ಲದೆ ಅಪೂರ್ಣವೆಂದು ಪರಿಗಣಿಸಲಾಗುತ್ತದೆ.
 

26

ಆದರೆ ಕಾಲಕ್ರಮೇಣ ಬದಲಾಗುತ್ತಿರುವ ಸಂಬಂಧಗಳೊಂದಿಗೆ, ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧದಲ್ಲಿ (relationship between husband and wife) ಅನೇಕ ಬದಲಾವಣೆಗಳು ಕಂಡುಬರುತ್ತವೆ. ಹಲವು ಬಾರಿ ಗಂಡ ಮತ್ತು ಹೆಂಡತಿ ಪರಸ್ಪರ ಅನೇಕ ವಿಷಯಗಳನ್ನು ಹಂಚಿಕೊಳ್ಳುವುದಿಲ್ಲ ಅಥವಾ ಅವರು ಯಾವುದೇ ನಿರ್ಧಾರವನ್ನು ಒಟ್ಟಿಗೆ ತೆಗೆದುಕೊಳ್ಳುವುದಿಲ್ಲ. ಆದರೆ ಧಾರ್ಮಿಕ ಗ್ರಂಥಗಳ ಪ್ರಕಾರ, ಗಂಡನು ಕೆಲವೊಂದು ಕೆಲಸ ಮಾಡುವ ಮೊದಲು ಹೆಂಡತಿಯಿಂದ ಅನುಮತಿ ಪಡೆಯಬೇಕು. ಅಂತಹ ಕೆಲಸಗಳು ಯಾವುವು ನೋಡೋಣ. 
 

36

ನಿಮ್ಮ ಹೆಂಡತಿಯ ಅನುಮತಿಯಿಲ್ಲದೆ ಈ ಎರಡು ಕೆಲಸಗಳನ್ನು ಮಾಡಬೇಡಿ
ದಾನ:
ಧಾರ್ಮಿಕ ಗ್ರಂಥಗಳಲ್ಲಿ, ದಾನವನ್ನು (donate) ಬಹಳ ಮುಖ್ಯ ಮತ್ತು ಫಲಪ್ರದವೆಂದು ಪರಿಗಣಿಸಲಾಗುತ್ತದೆ. ಆದರೆ ಪುರುಷನು ತನ್ನ ಹೆಂಡತಿಯ ಅನುಮತಿ ಮತ್ತು ಸಲಹೆಯನ್ನು ಪಡೆದ ನಂತರ ದಾನ ಮಾಡಿದಾಗ ಮಾತ್ರ ಅದು ಫಲಪ್ರದವಾಗುತ್ತದೆ. ಹೆಂಡತಿಗೆ ಹೇಳದೆ ದಾನ ಮಾಡುವುದರಿಂದ ಯಾವುದೇ ಪ್ರಯೋಜನ ಸಿಗೋದಿಲ್ಲ. ಅಂತಹ ದಾನವು ನಿಮಗೆ ಸಮೃದ್ಧಿಯ ಬದಲು ಆರ್ಥಿಕ ನಷ್ಟವನ್ನುಂಟು (financial problem) ಮಾಡುತ್ತದೆ. ಇದನ್ನು ಶ್ರೀಕೃಷ್ಣ ಮತ್ತು ಸುದಾಮನ ಕಥೆಯಲ್ಲಿಯೂ ಉಲ್ಲೇಖಿಸಲಾಗಿದೆ.

46

ವಹಿವಾಟುಗಳು: 
ಶಾಸ್ತ್ರಗಳ ಪ್ರಕಾರ, ಯಾವುದೇ ವಹಿವಾಟು ನಡೆಸುವ ಮೊದಲು ಪತಿಯು ತನ್ನ ಹೆಂಡತಿಯ ಅನುಮತಿ ಮತ್ತು ಸಲಹೆಯನ್ನು ಪಡೆಯಬೇಕು. ಏಕೆಂದರೆ ಹೆಂಡತಿ ಎಂದಿಗೂ ತನ್ನ ಗಂಡನಿಗೆ ತಪ್ಪು ಸಲಹೆ ನೀಡುವುದಿಲ್ಲ ಅಥವಾ ಅವನಿಗೆ ಯಾವುದೇ ಆರ್ಥಿಕ ನಷ್ಟವನ್ನು ಅನುಭವಿಸಲು ಬಿಡುವುದಿಲ್ಲ. ಆದ್ದರಿಂದ, ಯಾವುದೇ ವಹಿವಾಟು ನಡೆಸುವ ಮೊದಲು, ನಿಮ್ಮ ಹೆಂಡತಿಯ ಅನುಮತಿಯನ್ನು ಪಡೆಯಿರಿ.

56

ದಾನಕ್ಕೆ ಸಂಬಂಧಿಸಿದ ಪೌರಾಣಿಕ ಕಥೆ
ಪುರಾಣದ ಪ್ರಕಾರ, ಶ್ರೀಕೃಷ್ಣ ಮತ್ತು ಸುದಾಮರು (Shrikrishna and Sudama) ಬಾಲ್ಯದಲ್ಲಿ ಆಪ್ತ ಸ್ನೇಹಿತರಾಗಿದ್ದರು ಮತ್ತು ಇಬ್ಬರೂ ಸಾಂದೀಪನಿ ಆಶ್ರಮದಲ್ಲಿ ಶಿಕ್ಷಣ ಪಡೆದರು. ನಂತರ ಕೃಷ್ಣ ದ್ವಾರಕದ ರಾಜನಾದನು ಮತ್ತು ಸುದಾಮ ಬಡ ಬ್ರಾಹ್ಮಣನಂತೆ ಬದುಕಲು ಪ್ರಾರಂಭಿಸಿದನು. ಒಮ್ಮೆ ಸುದಾಮನು ಅಸಮಾಧಾನಗೊಂಡಿದ್ದನ್ನು ನೋಡಿ, ಅವನ ಹೆಂಡತಿ ಸುಶೀಲಾ ಅವನಿಗೆ ಶ್ರೀ ಕೃಷ್ಣನನ್ನು ಭೇಟಿಯಾಗಲು ಸಲಹೆ ನೀಡಿದಳು. ನಂತರ ಸುದಾಮನು ಶ್ರೀ ಕೃಷ್ಣನಿಗೆ ಉಡುಗೊರೆಯಾಗಿ ಅವಲಕ್ಕಿಯ ಗಂಟಿನೊಂಡಿಗೆದ್ವಾರಕೆಯನ್ನು ತಲುಪಿದನು.

66

ದ್ವಾರಕೆಯಲ್ಲಿ, ದ್ವಾರಪಾಲಕರು ಸುದಾಮನನ್ನು ಶ್ರೀ ಕೃಷ್ಣನನ್ನು ಭೇಟಿಯಾಗಲು ಬಿಡಲಿಲ್ಲ ಮತ್ತು ಶ್ರೀ ಕೃಷ್ಣನು ಈ ವಿಷಯ ತಿಳಿದಾಗ, ಅವನು ಬರಿಗಾಲಿನಲ್ಲಿ ಓಡಿ ಬಂದನು. ಸುದಾಮನು ತನಗಾಗಿ ಏನು ತಂದಿದ್ದಾನೆಂದು ಕೇಳಿದನು, ನಂತರ ಸುದಾಮ ಹಿಂಜರಿಯುತ್ತಾ ಅವನಿಗೆ ಒಂದು ಕಟ್ಟು ಅವಲಕ್ಕಿಯನ್ನು ಕೊಟ್ಟನು. ಶ್ರೀ ಕೃಷ್ಣನು ಒಂದು ಹಿಡಿ ಅವಲಕ್ಕಿಯನ್ನು ತೆಗೆದುಕೊಂಡು ಸುದಾಮನಿಗೆ ಸ್ವರ್ಗ ಮತ್ತು ಭೂಮಿಯ ಸಂಪತ್ತನ್ನು ಕೊಟ್ಟನು. ಶ್ರೀಕೃಷ್ಣ ವೈಕುಂಠವನ್ನು ಕೊಡಲು ಹೊರಟಿದ್ದಾಗ ದೇವಿ ರುಕ್ಮಿಣಿ ಅವನನ್ನು ತಡೆದನು. ಆಗ ಶ್ರೀ ಕೃಷ್ಣನು ಇಂದಿನಿಂದ ಯಾವುದೇ ಪುರುಷನು ತನ್ನ ಹೆಂಡತಿಯ ಅನುಮತಿಯಿಲ್ಲದೆ ದಾನ ನೀಡಬಾರದು ಎಂದನಂತೆ. ಹಾಗಾಗಿಯೇ ನೀವು ಸಹ ದಾನ ನೀಡುವುದಾದರೆ ಪತ್ನಿಯ ಬಳಿ ಕೇಳಿಯೇ ನೀಡಿ. 
 

Read more Photos on
click me!

Recommended Stories