ಹಿಂದೂ ಧರ್ಮದಲ್ಲಿ ನಿರ್ಜನ ಏಕಾದಶಿ ವಿಶೇಷ ಮಹತ್ವ ಪಡೆದಿದೆ. ನಿರ್ಜಲ ಏಕಾದಶಿ, ಎಲ್ಲಾ ಏಕಾದಶಿಗಳಲ್ಲಿ ಅತ್ಯಂತ ಮುಖ್ಯವಾದ ಏಕಾದಶಿ. ಪ್ರತಿ ವರ್ಷ ಜ್ಯೇಷ್ಠ ಮಾಸದ ಶುಕ್ಲ ಪಕ್ಷದ ಏಕಾದಶಿ ತಿಥಿ ಬರುತ್ತದೆ. ಈ ವರ್ಷ ಜೂನ್ 25 ಅಂದ್ರೆ ನಾಳೆ ಗುರುವಾರ ನಿರ್ಜಲ ಏಕಾದಶಿ ಆಚರಿಸಲಾಗ್ತಿದೆ. ಈ ದಿನ ವ್ರತ ಮಾಡುವವರು ನೀರನ್ನೂ ಸೇವನೆ ಮಾಡದೆ ವ್ರತ ಮಾಡ್ತಾರೆ. ಈ ದಿನ ತುಳಸಿ ದೇವಿಗೆ ಪೂಜೆ ನಡೆಯುತ್ತದೆ. ಹಿಂದೂ ಧರ್ಮದಲ್ಲಿ, ತುಳಸಿ ಕೇವಲ ಸಸ್ಯವಲ್ಲ. ಅದು ದೇವರ ರೂಪ, ವಿಷ್ಣುಪ್ರಿಯಾ ಎಂದು ನಂಬಲಾಗಿದೆ. ಧರ್ಮಗ್ರಂಥಗಳಲ್ಲಿ, ತುಳಸಿಯನ್ನು ಸಸ್ಯಗಳ ರಾಣಿ ಮತ್ತು ಸಂತೋಷ ಮತ್ತು ಸಮೃದ್ಧಿಯ ಸಂಕೇತ ಎಂದು ಕರೆಯಲಾಗುತ್ತದೆ. ನಿರ್ಜಲ ಏಕಾದಶಿಯಂದು ನೀವು ತುಳಸಿಯಿಂದ ವಿಶೇಷ ಆಶೀರ್ವಾದವನ್ನು ಪಡೆಯಲು ಬಯಸಿದರೆ, ಪೂಜೆಯ ಸಮಯದಲ್ಲಿ ಕೆಲ ವಸ್ತುಗಳನ್ನು ಅಗತ್ಯವಾಗಿ ಅರ್ಪಿಸಬೇಕು.