
ಧಾರ್ಮಿಕ ನಂಬಿಕೆಗಳ ಕಾರಣದಿಂದ, ಮಾನವ ದೇವರನ್ನು ಮೆಚ್ಚಿಸುವ ಎಲ್ಲಾ ಕೆಲಸಗಳನ್ನು ಮಾಡಲು ಬಯಸುತ್ತಾನೆ. ಜೊತೆಗೆ ಜೀವನ ಸಂತೋಷ, ಆರೋಗ್ಯಕರ ಮತ್ತು ಹಣದಿಂದ ತುಂಬಿರಲಿ ಎಂದು ಬಯಸ್ತಾನೆ. ಒಬ್ಬ ವ್ಯಕ್ತಿ ತನ್ನ ಕುಟುಂಬದಿಂದ ದುಃಖ ದೂರವಿರಿಸಲು, ದೇಹ ಆರೋಗ್ಯಕರವಾಗಿರಲು ಮತ್ತು ಮನಸ್ಸು ಸಂತೋಷವಾಗಿರಲು ಹಲವಾರು ಕೆಲಸಗಳನ್ನು ಮಾಡುತ್ತಾರೆ. ಇಲ್ಲಿ ಕೆಲವೊಂದು ಸಲಹೆ ನೀಡಲಾಗಿದೆ. ನೀವು ಅವುಗಳನ್ನು ಅನುಸರಿಸಿದರೆ ಲಕ್ಷ್ಮೀ ದೇವಿ(Goddess Lakshmi) ನಿಮ್ಮನ್ನು ಆಶೀರ್ವಾದಿಸುತ್ತಾಳೆ. ಇದರಿಂದ ಜೀವನದ ಎಲ್ಲಾ ಕಷ್ಟಗಳು ಸಹ ದೂರವಾಗುತ್ತೆ.
ಜಾಯಿಕಾಯಿಯನ್ನು ಪ್ರತಿ ಹಿಂದೂ ಕುಟುಂಬದಲ್ಲಿ ಪೂಜಾ ಪಾಠಗಳಲ್ಲಿ ಬಳಸಲಾಗುತ್ತೆ. ಜಾಯಿಕಾಯಿಯನ್ನು ವಿಶೇಷವಾಗಿ ಲಕ್ಷ್ಮಿ ಪೂಜೆಯಲ್ಲಿ ಸೇರಿಸಬೇಕು. ನೀವು ಲಕ್ಷ್ಮಿಯನ್ನು ಪೂಜಿಸುವಾಗಲೆಲ್ಲಾ, ಜಾಯಿಕಾಯಿಯನ್ನು ಅಕ್ಷತೆ, ಹೂವು ಮತ್ತು ಕುಂಕುಮದೊಂದಿಗೆ(Kumkum) ಪೂಜೆಯಲ್ಲಿ ಇರಿಸಿ. ಪೂಜೆ ಮುಗಿದ ನಂತರ, ಅದನ್ನು ಮನೆಯ ಪೂಜಾ ಸ್ಥಳದಲ್ಲಿ ಇಡಿ, ಅದೃಷ್ಟ ನಿಮ್ಮದಾಗುತ್ತೆ.
ಧಾರ್ಮಿಕ ನಂಬಿಕೆಗಳಲ್ಲಿ ತುಳಸಿಯನ್ನು ತುಳಸಿ ಮಾತಾ ಎಂದು ಕರೆಯಲಾಗುತ್ತೆ. ತುಳಸಿಯನ್ನು ಭಗವಾನ್ ವಿಷ್ಣುವಿನ ಪ್ರೀತಿಪಾತ್ರರೆಂದು ಸಹ ಪರಿಗಣಿಸಲಾಗುತ್ತೆ. ತುಳಸಿಗೆ ನೀರನ್ನು ಅರ್ಪಿಸುವಾಗ ಅಥವಾ ತುಳಸಿಯನ್ನು ಪೂಜಿಸುವಾಗ ಭಗವಾನ್ ವಿಷ್ಣು ಸಂತೋಷವಾಗಿರುತ್ತಾನೆ ಮತ್ತು ಭಗವಾನ್ ವಿಷ್ಣು ಸಂತೋಷವಾಗಿದ್ದರೆ ತಾಯಿ ಲಕ್ಷ್ಮಿಯನ್ನು ಮೆಚ್ಚಿಸೋದು ಸುಲಭವಾಗುತ್ತೆ ಎಂಬ ನಂಬಿಕೆಯಿದೆ.
ನೀವು ಮಾನಸಿಕ ಮತ್ತು ದೈಹಿಕ ಸಮಸ್ಯೆಗಳಿಂದ (Physical health) ಬಳಲುತ್ತಿದ್ದರೆ ಮತ್ತು ಚೇತರಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಬೆಳಗ್ಗೆ ಮತ್ತು ಸಂಜೆ ಮನೆಯ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ತುಳಸಿ ಗಿಡವನ್ನು ನೆಡುವ ಮೂಲಕ ಅದನ್ನು ಪೂಜಿಸಬೇಕು. ಇದರಿಂದ ನೀವು ಹೆಚ್ಚಿನ ಸಂತೋಷ ಪಡೆಯಲು ಸಾಧ್ಯವಾಗುತ್ತೆ.
ಬೆಳಗ್ಗೆ, ಸ್ನಾನ ಇತ್ಯಾದಿಗಳನ್ನು ಮಾಡಿ ಮತ್ತು ತುಳಸಿ ಸಸ್ಯದ ಮುಂದೆ ದೀಪವನ್ನು ಬೆಳಗಿಸಿ. ಸಂಜೆ, ಈ ತುಳಸಿ ಗಿಡದ ಮುಂದೆ ನಿಯಮಿತವಾಗಿ ದೀಪವನ್ನು(Deepam) ಬೆಳಗಿಸಿ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ತುಳಸಿ ಗಿಡ ನೆಡುವ ಮೂಲಕ, ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆಸುತ್ತೆ ಮತ್ತು ಮನೆಯ ಸದಸ್ಯರು ಆರೋಗ್ಯವಾಗಿರುತ್ತಾರೆ. ಇಷ್ಟೇ ಅಲ್ಲ, ತುಳಸಿ ಸಸ್ಯವಿರುವ ಮನೆಯಲ್ಲಿ, ವಾಸ್ತು ದೋಷದ ಪರಿಣಾಮವೂ ಕಡಿಮೆಯಾಗುತ್ತೆ.
ಧರ್ಮಗ್ರಂಥಗಳು ಮತ್ತು ಧರ್ಮಾಚಾರ್ಯರು ಹನುಮಂತ ಕಲಿಯುಗದ ದೇವರು ಎಂದು ಹೇಳುತ್ತವೆ. ಜನರು ಹನುಮಂತನನ್ನು ಪೂಜಿಸುವ ಮೂಲಕ, ವ್ಯಕ್ತಿಯ ಪ್ರತಿಯೊಂದು ಆಸೆಯೂ ಈಡೇರುತ್ತೆ ಎಂದು ಹೇಳುತ್ತಾರೆ. ಹನುಮಂತನನ್ನು ಮೆಚ್ಚಿಸಲು ಹನುಮಾನ್ ಚಾಲೀಸಾ ಪಠಿಸಿರಿ.
ಲಕ್ಷ್ಮಿ ದೇವಿಯನ್ನು ಸಂಪತ್ತಿನ ದೇವತೆ ಎಂದು ಪೂಜಿಸಲಾಗುತ್ತೆ. ಆರ್ಥಿಕವಾಗಿ ದುರ್ಬಲರಾಗಿರುವವರು ಲಕ್ಷ್ಮಿ ದೇವಿಯನ್ನು ಪೂಜಿಸಬೇಕು. ಶುಕ್ರವಾರ ಉಪವಾಸದ ಜೊತೆಗೆ, ಬೆಳಗ್ಗೆ ಮತ್ತು ಸಂಜೆ ತಾಯಿ ಲಕ್ಷ್ಮಿ ಆರತಿ ಮಾಡಿ. ಹನುಮಂತನನ್ನು ಮೆಚ್ಚಿಸಲು ಹನುಮಾನ್ ಚಾಲೀಸಾವನ್ನು(Hanuman chalisa) ಜೋರಾಗಿ ಪಠಿಸುವಂತೆಯೇ, ಲಕ್ಷ್ಮಿ ಮಾತೆಯನ್ನು ಮೆಚ್ಚಿಸಲು ಅವರ ಆರತಿ ಮಂತ್ರವನ್ನು ಜೋರಾಗಿ ಹೇಳಬೇಕು ಎಂದು ವಿದ್ವಾಂಸರು ಹೇಳುತ್ತಾರೆ.
ದೇವರನ್ನು ನಿಜವಾದ ಮನಸ್ಸಿನಿಂದ ಪೂಜಿಸುವ ಮತ್ತು ಅದರ ಬಗ್ಗೆ ಧ್ಯಾನಿಸುವ ವ್ಯಕ್ತಿಯು ದುಃಖಗಳನ್ನು(sad) ತೊಡೆದುಹಾಕುತ್ತಾನೆ ಎಂದು ನಂಬಲಾಗಿದೆ. ಹಣವನ್ನು ಹೆಚ್ಚಿಸಲು ಮಾತ್ರವಲ್ಲ, ಜೀವನದಲ್ಲಿ ಸಂತೋಷ, ಉಲ್ಲಾಸ, ಆಸ್ತಿ ಮತ್ತು ಮಾನಸಿಕ ಸಂತೃಪ್ತಿಗಾಗಿ, ನಾವು ನಮ್ಮ ಆರಾಧ್ಯ ದೇವರನ್ನು ನಿಯಮಿತವಾಗಿ ಪೂಜಿಸಬೇಕು.
ನೀವು ಸಾಕಷ್ಟು ಹಣವನ್ನು ಸಂಪಾದಿಸುತ್ತಿದ್ದರೆ ಮತ್ತು ಇನ್ನೂ ಹಣದ ಕೊರತೆಯಿದ್ದರೆ, ಆರ್ಥಿಕ ಸಮಸ್ಯೆಯಿಂದ ಹೆಣಗಾಡುತ್ತಿದ್ದರೆ, ಹಣ ಇರಿಸಲಾದ ಬೀರುವನ್ನು ಮನೆಯ ಉತ್ತರ ದಿಕ್ಕಿನಲ್ಲಿ ಅಥವಾ ಪೂರ್ವ ದಿಕ್ಕಿನಲ್ಲಿ ಅದರ ಬಾಗಿಲು ತೆರೆಯುವ ವಿಧಾನಕ್ಕೆ ಅನುಗುಣವಾಗಿ ಮನೆಯ ಉತ್ತರ ದಿಕ್ಕಿನಲ್ಲಿ ಅಥವಾ ಪೂರ್ವ ದಿಕ್ಕಿನಲ್ಲಿ ಇರಿಸಿ. ಇದನ್ನು ಮಾಡೋದ್ರಿಂದ, ತಾಯಿ ಲಕ್ಷ್ಮಿ ಸಂತೋಷವಾಗ್ತಾಳೆ ಮತ್ತು ನೀವು ಹಣವನ್ನು ಉಳಿಸಲು ಪ್ರಾರಂಭಿಸುತ್ತೀರಿ.
ಮನೆಯಲ್ಲಿ ಆಗಾಗ್ಗೆ ವಿವಾದ, ಜಗಳ ಉಂಟಾಗುತ್ತಿದ್ರೆ, ಇದರಿಂದ ನೀವು ಮಾನಸಿಕವಾಗಿ ತೊಂದರೆಗೀಡಾಗುತ್ತೀರಿ, ಹೀಗೆ ಆದರೆ ಮನೆಯ ಪೂರ್ವ ದಿಕ್ಕಿನಲ್ಲಿ ಮಣ್ಣಿನ ಮಡಕೆಯಲ್ಲಿ ನೀರನ್ನು ತುಂಬಿಸಿಡಿ. ಇದನ್ನು ಮಾಡೋದ್ರಿಂದ, ಸಕಾರಾತ್ಮಕ ಶಕ್ತಿ ಮನೆಯಲ್ಲಿ ನೆಲೆಸುತ್ತೆ ಮತ್ತು ಸಂತೋಷ ಮತ್ತು ಶಾಂತಿ ಮನೆಯಲ್ಲಿ ಉಳಿಯುತ್ತೆ.
ನಿಮ್ಮ ವ್ಯವಹಾರವು ಸರಿಯಾಗಿ ನಡೆಯದಿದ್ದರೆ ಮತ್ತು ನಿರಂತರವಾಗಿ ನಷ್ಟ ಅನುಭವಿಸುತ್ತಿದ್ದರೆ, ರಾತ್ರಿ ಮಲಗುವಾಗ ಹಾಸಿಗೆ ಬಳಿ ತಾಮ್ರದ ಪಾತ್ರೆಯಲ್ಲಿ ಬಾರ್ಲಿ ಇರಿಸಿ ಮತ್ತು ಬೆಳಿಗ್ಗೆ ಎದ್ದ ತಕ್ಷಣ ಹಸುವಿಗೆ(Cow) ತಿನ್ನಲು ಏನಾದರೂ ನೀಡಿ. ಇದನ್ನು ಕನಿಷ್ಠ 30 ದಿನಗಳವರೆಗೆ ನಿರಂತರವಾಗಿ ಮಾಡಿ. ಇದು ಕ್ರಮೇಣ ನಿಮ್ಮ ವ್ಯವಹಾರವನ್ನು ಸುಧಾರಿಸಲು ಪ್ರಾರಂಭಿಸುತ್ತೆ.
1. ಮನೆಯನ್ನು ಸ್ವಚ್ಛವಾಗಿಡಿ.
2. ಬೆಳಗ್ಗೆ ಮತ್ತು ಸಂಜೆ ಮನೆಯಲ್ಲಿ ವಿಷ್ಣುವಿನ ಆರತಿಯನ್ನು ಮಾಡಿ.
3. ಹಸುವಿಗೆ ಮತ್ತು ಪಕ್ಷಿಗಳಿಗೆ ಪ್ರತಿದಿನ ತಿನ್ನಲು ಏನಾದ್ರು ನೀಡಿ.
4. ನಿಮ್ಮ ಕುಟುಂಬಕ್ಕೆ(Family) ಸಮಯ ನೀಡಿ. ಇದನ್ನು ಮಾಡೋದ್ರಿಂದ, ನೀವು ಪ್ರಯೋಜನಗಳನ್ನು ಪಡೆಯಲು ಪ್ರಾರಂಭಿಸುತ್ತೀರಿ ಮತ್ತು ಕುಟುಂಬದಲ್ಲಿ ಸಂತೋಷವು ಹೆಚ್ಚಾಗುತ್ತೆ.