ಇದರ ನಂತರ, ಸರಯೂ ಭಗವಾನ್ ಶಿವನ ಪಾದಗಳಿಗೆ ಬಿದ್ದು, ಪ್ರಭು, ಇದರಲ್ಲಿ ನನ್ನ ತಪ್ಪೇನು ಎಂದು ಕೇಳಿದಳಂತೆ. ಇದು ಜಗದ ನಿಯಮ. ನಾನೇನು ಮಾಡಕಾಗತ್ತೆ? ಎಂದು ಸರಯೂ ಬೇಡಿಕೊಂಡಳಂತೆ. ಮಾತಾ ಸರಯೂ ಬೇಡಿದಾಗ, ಶಿವನ ಕೋಪ ಕಡಿಮೆಯಾಗಿ , ಪರಿಸ್ಥಿತಿ ಅರ್ಥವಾಯಿತು, ಶಿವ ತಾಯಿ ಸರಯೂಗೆ, ನಾನು ನನ್ನ ಶಾಪವನ್ನು ಹಿಂದೆಗೆದುಕೊಳ್ಳಲು ಸಾಧ್ಯವಿಲ್ಲ, ಆದರೆ, ನಿನ್ನ ನೀರಿನ್ನು ಪೂಜೆಗೆ ಬಳಸಲಾಗುವುದಿಲ್ಲ, ಆದರೆ ನಿನ್ನ ನೀರಿನಲ್ಲಿ ಸ್ನಾನ ಮಾಡುವುದರಿಂದ ಜನರ ಪಾಪಗಳು ತೊಳೆದು ಹೋಗುತ್ತವೆ ಎಂದು ಹೇಳಿ ವರ ನೀಡಿದನಂತೆ, ಹಾಗೆ ಸರಯೂ ನದಿ ಇಂದಿಗೂ ಪವಿತ್ರ ನದಿಯಾಗಿ (sacred river) ಜನರ ಪಾಪ ನಿವಾರಣೆ ಮಾಡುತ್ತಾಳೆ.