ಕಾರ್ತಿಕ ಹುಣ್ಣಿಮೆಯಂದು ಗಂಗಾ ಸ್ನಾನ ಮಾಡುವುದು ತುಂಬಾ ಶುಭ ಮತ್ತು ಫಲಪ್ರದವೆಂದು ಪರಿಗಣಿಸಲಾಗಿದೆ. ಆದರೆ ಕಾರ್ತಿಕ ಹುಣ್ಣಿಮೆಯಂದು ನೀವು ಕೆಲವೊಂದು ಕೆಲಸಗಳನ್ನು ಮಾಡಬಾರದು. ಇದರಿಂದ ಲಕ್ಷ್ಮೀ ದೇವಿ ನಿಮ್ಮ ಮೇಲೆ ಕೋಪಗೊಳ್ಳುತ್ತಾಳೆ ಎಚ್ಚರದಿಂದಿರಿ.
ನವೆಂಬರ್ 5 ರಂದು, ಕಾರ್ತಿಕ ಹುಣ್ಣಿಮೆಯನ್ನು ಆಚರಿಸಲಾಗುತ್ತದೆ, ಇದನ್ನು ಗಂಗಾ ಸ್ನಾನ ಮತ್ತು ದೇವ ದೀಪಾವಳಿಯೊಂದಿಗೆ ಆಚರಿಸಲಾಗುತ್ತದೆ. ಕಾರ್ತಿಕ ಹುಣ್ಣಿಮೆಯನ್ನು ಹಿಂದೂ ಧರ್ಮದಲ್ಲಿ ಬಹಳ ವಿಶೇಷ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನದ ಕೆಲವು ಮಹತ್ವದ ಬಗ್ಗೆ ತಿಳಿಯೋಣ.
26
ಈ ಕೆಲಸಗಳನ್ನು ತಪ್ಪಿಸಿ
ದೇಶಾದ್ಯಂತ ಕಾರ್ತಿಕ ಹುಣ್ಣಿಮೆಯನ್ನು ಬಹಳ ಭಕ್ತಿಯಿಂದ ಆಚರಿಸಲಾಗುತ್ತದೆ ಮತ್ತು ಈ ದಿನದಂದು ಉಪವಾಸವನ್ನು ಸಹ ಆಚರಿಸಲಾಗುತ್ತದೆ. ಈ ದಿನದಂದು ದೇವರುಗಳು ಭೂಮಿಗೆ ಇಳಿದು ಆಶೀರ್ವಾದ ನೀಡುತ್ತಾರೆ, ಆದ್ದರಿಂದ ದೇವರನ್ನು ಅಥವಾ ಲಕ್ಷ್ಮಿ ದೇವಿಯನ್ನ್ನು ಕೋಪಗೊಳಿಸುವಂತಹ ಯಾವುದೇ ಕೆಲಸವನ್ನು ಮಾಡೋದನ್ನು ಇವತ್ತು ತಪ್ಪಿಸಬೇಕು. ಕಾರ್ತಿಕ ಹುಣ್ಣಿಮೆಯಂದು ನೀವು ತಪ್ಪಿಸಬೇಕಾದ ವಿಷಯಗಳನ್ನು ತಿಳಿಯೋಣ.
36
ನಿಮ್ಮ ಮನೆಯಲ್ಲಿ ಕತ್ತಲೆಯನ್ನು ದೂರವಿಡಿ
ದೇವ ದೀಪಾವಳಿಯು ಕಾರ್ತಿಕ ಹುಣ್ಣಿಮೆಯಂದು ಬರುತ್ತದೆ ಮತ್ತು ಲಕ್ಷ್ಮಿ ದೇವಿಯೂ ಈ ದಿನ ಭೂಮಿಯ ಮೇಲೆ ಬಂದಿಳಿಯುತ್ತಾಳೆ ಎನ್ನುವ ನಂಬಿಕೆ ಇದೆ. ಆದ್ದರಿಂದ, ಸಂಜೆಯ ಸಮಯದಲ್ಲಿ ನಿಮ್ಮ ಮನೆಯಲ್ಲಿ ಕತ್ತಲೆಯನ್ನು ತಪ್ಪಿಸಿ. ಎಲ್ಲೆಡೆ ಬೆಳಕು ಇರುವಂತೆ ನೋಡಿಕೊಳ್ಳಿ.
ಈ ದಿನ ದಾನ ನೀಡದೆ ಯಾರನ್ನೂ ಕಳುಹಿಸಬೇಡಿ. ಕಾರ್ತಿಕ ಹುಣ್ಣಿಮೆಯಂದು, ಬಡವರು ಅಥವಾ ನಿರ್ಗತಿಕರು ನಿಮ್ಮ ಮನೆ ಬಾಗಿಲಿಗೆ ಬಂದರೆ, ಅವರನ್ನು ಖಾಲಿ ಕೈಯಲ್ಲಿ ಹಿಂದಕ್ಕೆ ಕಳುಹಿಸಬೇಡಿ. ಬದಲಾಗಿ, ಅವರಿಗೆ ಏನಾದರೂ ನೀಡಿ. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ನೀವು ಆಹಾರ ಅಥವಾ ಹಣವನ್ನು ನೀಡಬಹುದು.
56
ತುಳಸಿಯನ್ನು ಕೀಳಬೇಡಿ
ಲಕ್ಷ್ಮಿ ದೇವಿಯು ತುಳಸಿಯಲ್ಲಿ ವಾಸಿಸುತ್ತಾಳೆ ಎಂದು ಹೇಳಲಾಗುತ್ತದೆ, ಆದ್ದರಿಂದ ಕಾರ್ತಿಕ ಹುಣ್ಣಿಮೆಯಂದು ತುಳಸಿಯನ್ನು ವಿವಿಧ ವಿಧಿವಿಧಾನಗಳೊಂದಿಗೆ ಪೂಜಿಸಲಾಗುತ್ತದೆ. ಆದ್ದರಿಂದ, ಈ ದಿನದಂದು ತುಳಸಿ ಎಲೆಗಳನ್ನು ತಪ್ಪಿಯೂ ಕೀಳಬೇಡಿ. ಹಾಗೆ ಮಾಡುವುದರಿಂದ ಲಕ್ಷ್ಮಿ ದೇವಿಗೆ ಕೋಪ ಬರುತ್ತದೆ.
66
ತಾಮಸಿಕ ಆಹಾರದಿಂದ ದೂರವಿರಿ
ಮಾಂಸಾಹಾರ, ಮಧು, ಆಲ್ಕೋಹಾಲ್ ಸೇರಿ ಯಾವುದೇ ತಾಮಸಿಕ ಆಹಾರವನ್ನು ಇವತ್ತು ಸೇವಿಸಬೇಡಿ. ಬದಲಾಗಿ ಸಾತ್ವಿಕ ಆಹಾರವನ್ನು ಸೇವಿಸಿ. ಇದರಿಂದ ಆರೋಗ್ಯದ ಜೊತೆ ದೇವರ ಆಶೀರ್ವಾದವೂ ಸಿಗುತ್ತದೆ.