ಹಿಂದೂ ಸಂಪ್ರದಾಯದಲ್ಲಿ ಹೊಸ್ತಿಲು ಪೂಜೆಗೆ ಅತ್ಯಂತ ಮಹತ್ವವೇಕೆ?

First Published Nov 7, 2020, 5:24 PM IST

ಹಿಂದೂ ಸಂಪ್ರದಾಯದ ಪ್ರಕಾರ ಹೊಸ್ತಿಲನ್ನು ದೇವರೆಂದು ಪೂಜಿಸುತ್ತೇವೆ. ಇದರಲ್ಲಿ ಶ್ರೀಮಹಾಲಕ್ಷ್ಮಿ ನೆಲೆಸಿರುತ್ತಾಳೆ ಎನ್ನುವ ಪ್ರತೀತಿ ಇದೆ . ಹಾಗಾಗಿ ಹೊಸ್ತಿಲು ಪೂಜೆಯ ಸಂಪ್ರದಾಯ ಬಂದಿದೆ . ಮಾಧ್ವ ಸಂಪ್ರದಾಯದಲ್ಲೂ ಇದರ ಕುರಿತು ಉಲ್ಲೇಖವಿದೆ . ಇದನ್ನು ಮುತ್ತೈದೆಯರು  ಮಾಡಿದರೆ ಸಕಲ ಸೌಭಾಗ್ಯ, ನೆಮ್ಮದಿ ಸಿಗುತ್ತದೆ ಎಂದು ಹೇಳುತ್ತಾರೆ.  ಇದನ್ನು ಹೇಗೆ ಮಾಡುವುದು , ಯಾವ ಹೊತ್ತಿನಲ್ಲಿ ಮಾಡುವುದು ಎಂಬ ವಿಷಯವನ್ನು ಮಾಧ್ವ ಸಂಪ್ರದಾಯದಲ್ಲಿ ತಿಳಿಸಿದ್ದಾರೆ .

ಹೊಸ್ತಿಲಪೂಜೆಯನ್ನು ಕೇವಲ ಹಬ್ಬ ಹರಿದಿನಗಳಲ್ಲಿ ಮಾಡದೇ ದಿನನಿತ್ಯ ಮಾಡಬೇಕು . ಮುತ್ತೈದೆಯರು ಬೆಳಗ್ಗಿನ ಜಾವಾ ಎದ್ದು ಸ್ನಾನಾದಿ ನಿತ್ಯ ಕರ್ಮಗಳನ್ನು ಮುಗಿಸಿ ದೇವರಿಗೆ ದೀಪ ವಿಟ್ಟು , ದೇವರಕೋಣೆಯ ಹೊಸ್ತಿಲು ಮತ್ತು ಮುಖ್ಯ ದ್ವಾರದ ಹೊಸ್ತಿಲನ್ನು ಚೆನ್ನಾಗಿ ತೊಳೆಯಬೇಕು.
undefined
ನಂತರ ಶೇಡಿಯಲ್ಲಿ ಗೆರೆಗಳನ್ನು ಎಳೆದು ಅದಕ್ಕೆ ಅರಶಿನ , ಕುಂಕುಮ ಮತ್ತು ಹೂವನ್ನು ಹೊಸ್ತಿಲಲ್ಲಿ ಇಡಬೇಕು. ನೀರಿನ ತಂಬಿಗೆ ಇಟ್ಟು ನಮಸ್ಕರಿಸಬೇಕು . ಹೊಸ್ತಿಲು ಬರೆಯುವಾಗ ಇಪ್ಪತ್ತನಾಲ್ಕು ಗೆರೆಗಳಿರಬೇಕು ಎಂದು ಪೇಜಾವ ಶ್ರೀ ಗಳು ತಿಳಿಸಿದ್ದಾರೆ .
undefined
ಹೊಸ್ತಿಲನ್ನು ಬರೆಯುವಾಗ ಹೇಳುವ ಮಂತ್ರಗಳು ಇಲ್ಲಿವೆ .ಓಂಕಾರ ರೂಪಿಣೀ ದೇವಿ ವೀಣಾ ಪುಸ್ತಕ ಧಾರಿಣಿ, ಸೌಭಾಗ್ಯಮ್ ದೇಹಿಮೆ ನಿತ್ಯಂ ದಾರಿದ್ರ್ಯನ ಪ್ರಯಚ್ಛಮೇ.ಕಾತ್ಯಾಯನಿ ಮಹಾಮಾಯೆ ಮಹಾಯೋಗಿನ್ಯಾಧೀಶ್ವರಿ ; ನಂದಗೋಪ ಸುತಂ ದೇವಿ ಪತಿಂ ಮೇ ಕುರುತೇ ನಮಃ .ದುರ್ಗೆತಿ ಭದ್ರ ಕಾಳೀತಿ ವಿಜಯ ವೈಷ್ಣವೀ ತತ; ಕುಮುದ ಚಂಡಿಕಾ ಕೃಷ್ಣ ಮಾಧವಿ ಕನ್ಯ ಕೇತಿಚ ಮಾಯಾ ನಾರಾಯಣಿ ಶಾನ ಶಾರದೆ ತ್ರೈಮಬಿಕೇತಿಚಾ
undefined
ಸಂಜೆಯ ಹೊತ್ತಿನಲ್ಲಿ ಹೊಸ್ತಿಲು ಬರೆಯುವ ವಿಧಾನ ; ಸಂಜೆಯ ಹೊತ್ತಿನ ಪೂಜೆಯ ಆರತಿಯನ್ನು ದೇವರಿಗೆ ಸಮರ್ಪಿಸಿದ ಹಾಲಿನ ತಟ್ಟೆಯ ಜೊತೆ ಹೊಸ್ತಿಲಿನಲ್ಲಿ ಇಟ್ಟು ಸ್ವಲ್ಪ ಹಾಲನ್ನು ಹೊಸ್ತಿಲಿಗೆ ಹಾಕಿ ನಮಸ್ಕರಿಸಿ . ನಂತರ ತುಳಸಿಗೆ ದೀಪವಿಡುವುದು .
undefined
ಹೊಸ್ತಿಲ ಪೂಜೆ ಮಾಡುವ ಸಂದರ್ಭದಲ್ಲಿ ಹೇಳುವ ಹಾಡು :ಹೊಸ್ತಿಲ ಹೊಸ್ತಿಲೆ ಹೊನ್ನದ ಹೊಸ್ತಿಲೆ , ಚಿನ್ನದ ತಟ್ಟೆಯಲ್ಲಿ ನೀರು ತರುವೆ , ಬೆಳ್ಳಿಯ ತಟ್ಟೆಯಲ್ಲಿ ಹೂ ಕೊಡುವೆ , ಗೌರಿ ದೇವಿಯ ಸೊಸೆಯಾಗುವೆ , ಲಕ್ಷ್ಮಿ ದೇವಿಯ ಮಗಳಾಗುವೆ , ನಿನ್ನಂತ ಓಲೆ ಭಾಗ್ಯ ಕೊಡಿಸು ತಾಯೆ .
undefined
ಈ ಮಂತ್ರವನ್ನು ಕೂಡ ಹೇಳಬಹುದು : ದ್ವಾರಾದೇವಿ ನಮಸ್ತುಭ್ಯಮ್ ದ್ವಾರಕೇಶ್ವರ ಭಾಮಿನಿ , ಪತಿ ದ್ವಾರ ಹರಿ ಗುರು ಭಕ್ತಿಮ್ ಪುತ್ರಸ್ತ ದೇಹಿಮೇ .
undefined
ಹೀಗೆ ಹೊಸ್ತಿಲು ಬರೆಯುವ ವಿಧಾನಗಳಲ್ಲಿ ಇದು ಒಂದು. ಇನ್ನು ಕೆಲವು ವಿಧಾನಗಳಿವೆ ಅವು ದೇಶ, ಕಾಲ ಪರಿಸ್ಥಿತಿಗಳಿಗೆ ಅನುಗುಣವಾಗಿ ಹೊಸ್ತಿಲು ಪೂಜೆ ಮಾಡುತ್ತಾರೆ .
undefined
ಏನೇ ಇರಲಿ ಹೇಗೆ ಇರಲಿ ಮುಖ್ಯವಾಗಿ ಹೊಸ್ತಿಲು ಪೂಜೆ ಮಾಡವುದು ಎಂದರೆ ಲಕ್ಷ್ಮಿಯನ್ನು ಪೂಜಿಸುವುದು , ಪ್ರಾರ್ಥಿಸುವುದು. ಇಲ್ಲಿನ ಮುಖ್ಯ ಉದ್ದೇಶ ಹೊಸ್ತಿಲು ಪೂಜೆ ಮಾಡುವುದರಿಂದ ಯಮ ಅಥವಾ ಮೃತ್ಯು ಹೊಸ್ತಿಲು ದಾಟಿ ಒಳಪ್ರವೇಶಿಸುವುದಿಲ್ಲವೆಂದು ಶಾಸ್ತ್ರದಲ್ಲಿ ತಿಳಿಸಿದೆ.
undefined
click me!