ಈ ರಾಶಿಯವರಿಗೆ ಹನುಮಾನ್‌ ಮತ್ತು ಶನಿಯ ಅನುಗ್ರಹ ಇದೆ; ಇವರು ಎಲ್ಲಾ ತೊಂದರೆಗಳಿಂದ ಮುಕ್ತ..!

First Published Jul 29, 2023, 2:18 PM IST

ಜ್ಯೋತಿಷ್ಯದಲ್ಲಿ 12ರಾಶಿ ಚಕ್ರ ಚಿಹ್ನೆಗಳ ವಿವರಣೆ ಇದೆ. ಪ್ರತಿಯೊಂದು ರಾಶಿಯ ಅಧಿಪತಿ ಗ್ರಹವಾಗಿದ್ದು, ಆ ರಾಶಿಯ ಮೇಲೆ ಸಂಪೂರ್ಣ ಪ್ರಭಾವ ಬೀರುತ್ತದೆ.

ಹನುಮಾನ್‌ ಮತ್ತು ಶನಿದೇವರ ಪ್ರಭಾವ

ಜ್ಯೋತಿಷ್ಯದಲ್ಲಿ 12ರಾಶಿ ಚಕ್ರ ಚಿಹ್ನೆಗಳ ವಿವರಣೆ ಇದೆ. ಪ್ರತಿಯೊಂದು ರಾಶಿಯ ಅಧಿಪತಿ ಗ್ರಹವಾಗಿದ್ದು, ಆ ರಾಶಿಯ ಮೇಲೆ ಸಂಪೂರ್ಣ ಪ್ರಭಾವ ಬೀರುತ್ತದೆ. ಜ್ಯೋತಿಷ್ಯ ಶಾಸ್ತ್ರದ ನಂಬಿಕೆಗಳ ಪ್ರಕಾರ  ಕೆಲವು ರಾಶಿಚಕ್ರ ಚಿಹ್ನೆಗಳ ಮೇಲೆ ಹನುಮಾನ್‌ ಮತ್ತು ಶನಿದೇವರ ಪ್ರಭಾವ ಇರುತ್ತದೆ.

ಮೇಷ ರಾಶಿಯವರಿಗೆ ಪ್ರಬಲ ಇಚ್ಛಾಶಕ್ತಿ

ಜ್ಯೋತಿಷ್ಯ ನಂಬಿಕೆಗಳ ಪ್ರಕಾರ ಮೇಷ ರಾಶಿಯ ಜನರನ್ನು ಹನುಮಾನ್‌ ಮತ್ತು ಶನಿ ದೇವರು ಆಶೀರ್ವದಿಸುತ್ತಾರೆ. ಮೇಷ ರಾಶಿಯ ಜನರ ಇಚ್ಛಾಶಕ್ತಿ ತುಂಬಾ ಪ್ರಬಲವಾಗಿರುತ್ತದೆ. ಮೇಷ ರಾಸಿಯವರು ಹನುಮಾನ್‌ ವಿಶೇಷ ಅನುಗ್ರಹವನ್ನು ಪಡೆಯಲು ಪ್ರತಿದಿನ ಭಗವಾನ್‌ ಶ್ರೀರಾಮನನ್ನು ಹೆಸರನ್ನು ಪಠಿಸ ಬೇಕು. ಈ ರಾಶಿಚಕ್ರದವರು ಹೆಚ್ಚು ಇಚ್ಛಾಶಕ್ತಿ ಮತ್ತು ಏಕಾಗ್ರತೆಯ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇವರು ಬುದ್ಧಿವಂತರು.

ಸಿಂಹ ರಾಶಿಯವರಿಗೆ ಉತ್ತಮ ಆರ್ಥಿಕತೆ

ಜ್ಯೋತಿಷ್ಯ ನಂಬಿಕೆಗಳ ಪ್ರಕಾರ ಹನುಮಾನ್‌ ಮತ್ತು ಶನಿದೇವರ ಆಶೀರ್ವಾದದಿಂದಾಗಿ ಸಿಂಹ ರಾಶಿಯ ತೊಂದರೆ ದೂರವಾಗುತ್ತದೆ. ಈ ರಾಶಿಯ ಜನರ ಆರ್ಥಿಕತೆ ಉತ್ತಮವಾಗಿರುತ್ತದೆ. ಹನುಮಂತನ ಕೃಪೆಯಿಂದ ಉದ್ಯೋಗ ಮತ್ತು ವ್ಯಾಪಾರದಲ್ಲಿ ಪ್ರಗತಿ ಕಂಡುಬರುತ್ತದೆ. 

ವೃಶ್ಚಿಕ ರಾಶಿಯವರು ಅದೃಷ್ಟವಂತರು

ಹನುಮಂತ ಮತ್ತು ಶನಿ ವೃಶ್ಚಿಕ ರಾಶಿಯ ಜನರಿಗೆ ತಮ್ಮ ಆಶೀರ್ವಾದವನ್ನು ನೀಡುತ್ತಾರೆ. ಇವರಿಗೆ ಕೆಲಸದಲ್ಲಿ ಯಾವುದೇ ಅಡೆತಡೆ ಇಲ್ಲ. ಇವರು ಹನುಮಂತನ ಕೃಪೆಯಿಂದ ಅತ್ಯಂತ ಅದೃಷ್ಟವಂತರು. ಹಾಗೇ ಯಶಸ್ಸು ಸಿಗುತ್ತದೆ. ಇವರಿಗೆ ಹಣದ ಕೊರತೆ ಕಡಿಮೆ.

ಕುಂಭ ರಾಶಿಯವರಿಗೆ ಸಮಾಜದಲ್ಲಿ ಗೌರವ

ಜ್ಯೋತಿಷ್ಯದ ನಂಬಿಕೆ ಪ್ರಕಾರ ಹುನುಮಂತನ ಕೃಪೆಯಿಂದ ಕುಂಭ ರಾಶಿಯವರು ತಮ್ಮ ಕೆಲಸದಲ್ಲಿ ಶೀಘ್ರವಾಗಿ ಯಶಸ್ಸನ್ನು ಪಡೆಯುತ್ತಾರೆ. ಕುಂಭ ರಾಶಿಯ ಮೇಲೆ ಹನುಮಂತನ ವಿಶೇಷ ಕೃಪೆ ಉಳಿದಿದೆ. ಕುಂಭ ರಾಶಿಯವರಿಗೆ ಹಣದ ಕೊರತೆ ಇಲ್ಲ. ಈ ರಾಶಿಚಕ್ರದ ಜನರು ತಮ್ಮ ವೃತ್ತಿ ಜೀವನದಲ್ಲಿ ಎತ್ತರ ಮಟ್ಟಕ್ಕೆ ಹೋಗುತ್ತಾರೆ. ಸಮಾಜದಲ್ಲಿ ಗೌರವವಿದೆ.

click me!