ನಾಗರ ಪಂಚಮಿಯಂದು ರಾಶಿಗಳ ಅನುಸಾರ ಈ ಕೆಲಸ ಮಾಡಿ!

First Published Aug 5, 2023, 2:39 PM IST

ಹಿಂದೂ ಕ್ಯಾಲೆಂಡರ್ ಪ್ರಕಾರ, ಶ್ರಾವಣ ತಿಂಗಳ ಕೃಷ್ಣ ಪಕ್ಷದ ಐದನೇ ದಿನದಂದು ನಾಗ ಪಂಚಮಿಯನ್ನು ಆಚರಿಸುವ ಸಂಪ್ರದಾಯವಿದೆ. ಈ ದಿನ, ಎಲ್ಲಾ ಸರ್ಪ ದೇವತೆಗಳನ್ನು ವಿಶೇಷವಾಗಿ ಪೂಜಿಸಲಾಗುತ್ತದೆ ಮತ್ತು ನಾಗನಿಗೆ ಹಾಲಿನ ಅಭಿಷೇಕ ಮಾಡಲಾಗುತ್ತೆ. ಈ ಬಾರಿ ಆಗಸ್ಟ್ 21 ರ ಸೋಮವಾರ ನಾಗರ ಪಂಚಮಿಯನ್ನು ಆಚರಿಸಲಾಗುತ್ತದೆ. 
 

ಶ್ರಾವಣ ತಿಂಗಳನ್ನು (Savan Month) ಹಿಂದೂ ಧರ್ಮದಲ್ಲಿ ಅತ್ಯಂತ ಮಂಗಳಕರ ಮತ್ತು ಪವಿತ್ರವೆಂದು ಪರಿಗಣಿಸಲಾಗಿದೆ. ಏಕೆಂದರೆ ಈ ಇಡೀ ತಿಂಗಳು ಶಿವನಿಗೆ ಸಮರ್ಪಿತವಾಗಿದೆ. ಅದೇ ಸಮಯದಲ್ಲಿ, ನಾಗರ ಪಂಚಮಿ ಕೂಡ ಈ ತಿಂಗಳ ಪ್ರಮುಖ ಹಬ್ಬವಾಗಿದೆ. ನಾಗರ ಪಂಚಮಿಯ ದಿನದಂದು, ಶಿವ ಮತ್ತು ನಾಗ ದೇವತೆಯನ್ನು ಪೂಜೆ ಮಾಡಲಾಗುತ್ತೆ. ಈ ಹಬ್ಬ ಮಾಡೋದರಿಂದ ಎಲ್ಲಾ ಪಾಪಗಳನ್ನು ತೊಡೆದುಹಾಕಬಹುದು ಮತ್ತು ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ಪಡೆಯಬಹುದು. ಇದರೊಂದಿಗೆ, ನೀವು ರಾಹು, ಕೇತು ಮತ್ತು ಕಾಲಸರ್ಪ ದೋಷದ ಕೆಟ್ಟ ಪರಿಣಾಮಗಳನ್ನು ತೊಡೆದುಹಾಕಬಹುದು.
 

ನಾಗರ ಪಂಚಮಿ (Nag Panchami) ಹಬ್ಬದಂದು ಕೆಲವೊಂದು ಕೆಲಸಗಳನ್ನು ಮಾಡುವುದರಿಂದ ಶುಭವಾಗುತ್ತೆ ಎನ್ನಲಾಗುತ್ತದೆ. ರಾಶಿಚಕ್ರದ ಪ್ರಕಾರ, ಶುಭ ಫಲಿತಾಂಶಗಳನ್ನು ಪಡೆಯಲು ನಾಗ ಪಂಚಮಿಯ ಪೂಜೆಯಲ್ಲಿ ವ್ಯಕ್ತಿಯು ಯಾವ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳೋಣ. 
 

Latest Videos


ಮೇಷ ರಾಶಿ: ರಾಹು ಗ್ರಹಕ್ಕೆ ಸಂಬಂಧಿಸಿದ ದೋಷಗಳನ್ನು ತೊಡೆದುಹಾಕಲು ಮೇಷ ರಾಶಿಯ ಜನರು ರುದ್ರಾಷ್ಟಾಧೀಶವನ್ನು ಪಠಿಸುವುದು ತುಂಬಾ ಶುಭವೆಂದು ಪರಿಗಣಿಸಲಾಗಿದೆ. 

ವೃಷಭ ರಾಶಿ: ವೃಷಭ ರಾಶಿಯವರು ನಾಗರ ಪಂಚಮಿಯ ದಿನದಂದು ಹರಿಯುವ ನೀರಿನಲ್ಲಿ ತಾಮ್ರದ ತುಂಡನ್ನು ಎಸೆಯಬೇಕು ಅಥವಾ ಮುಳುಗಿಸಬೇಕು. ಇದು ನಿಮ್ಮ ಅದೃಷ್ಟವನ್ನು ಹೆಚ್ಚಿಸಬಹುದು. 

ಮಿಥುನ ರಾಶಿ: ಮಿಥುನ ರಾಶಿಯವರು ನಾಗರ ಪಂಚಮಿಯ ದಿನದಂದು ಅಗತ್ಯವಿರುವವರಿಗೆ ಹೆಸರು ಬೇಳೆಯನ್ನು ದಾನ ಮಾಡಬೇಕು. ಹೀಗೆ ಮಾಡೋದರಿಂದ, ಜಾತಕದಲ್ಲಿರುವ ರಾಹು ಶಾಂತವಾಗುತ್ತದೆ. 

ಕರ್ಕಾಟಕ ರಾಶಿ: ನಾಗರ ಪಂಚಮಿಯ ದಿನದಂದು, ಕರ್ಕಾಟಕ ರಾಶಿಯವರು ಹರಿಯುವ ನೀರಿನಲ್ಲಿ ತೆಂಗಿನಕಾಯಿಯನ್ನು (coconut) ಬಿಡಬೇಕು ಮತ್ತು ಶಿವನ ದೇವಸ್ಥಾನಕ್ಕೆ ಹೋಗಿ ಸರ್ಪಾಕಾರದ ಪ್ರತಿಮೆಯನ್ನು ಅರ್ಪಿಸಬೇಕು. 
 

ಸಿಂಹ ರಾಶಿ: ಸಿಂಹ ರಾಶಿಯವರು ನಾಗರ ಪಂಚಮಿಯ ದಿನದಂದು ಅಗತ್ಯವಿರುವವರಿಗೆ ಒಣ ತೆಂಗಿನಕಾಯಿಯನ್ನು ದಾನ ಮಾಡಬೇಕು. ಇದರೊಂದಿಗೆ, ನಿಮ್ಮ ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತವೆ. 

ಕನ್ಯಾ ರಾಶಿ: ಕನ್ಯಾ ರಾಶಿಯವರು ನಾಗರ ಪಂಚಮಿಯ ದಿನದಂದು ಅನಾರೋಗ್ಯದಿಂದ (health issues) ಬಳಲುತ್ತಿರುವ ವ್ಯಕ್ತಿಗೆ ಸಹಾಯ ಮಾಡಬೇಕು. ಇದು ಆರೋಗ್ಯಕ್ಕೆ ಸಂಬಂಧಿಸಿದ ನಿಮ್ಮ ಎಲ್ಲಾ ಸಮಸ್ಯೆಗಳನ್ನು ತೆಗೆದುಹಾಕುತ್ತದೆ. 

ತುಲಾ ರಾಶಿ: ತುಲಾ ರಾಶಿಯವರು ನಾಗರ ಪಂಚಮಿಯ ದಿನದಂದು ಮನೆಯಲ್ಲಿ ಶಿವ ಚಾಲೀಸಾವನ್ನು ಪಠಿಸಬೇಕು. ಇದು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. 

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರು ನಾಗರ ಪಂಚಮಿಯ ದಿನದಂದು ಗಣೇಶನನ್ನು ಪೂಜಿಸಬೇಕು ಮತ್ತು ಹಳದಿ ಹೂವುಗಳು ಮತ್ತು ಲಡ್ಡುಗಳನ್ನು ಅರ್ಪಿಸಬೇಕು. ಇದರಿಂದ ಎಲ್ಲವೂ ಶುಭವಾಗುತ್ತೆ. 
 

ಧನು ರಾಶಿ: ಧನು ರಾಶಿಯವರು ನಾಗರ ಪಂಚಮಿಯ ದಿನದಂದು ಹಿಟ್ಟು ಮತ್ತು ಸಕ್ಕರೆಯ ಮಿಶ್ರಣವನ್ನು ತಯಾರಿಸಿ ಶಿವನಿಗೆ ಅರ್ಪಿಸಿ ನಂತರ ಅದನ್ನು ಬಡವರಿಗೆ ವಿತರಿಸಬೇಕು.

ಮಕರ ರಾಶಿ: ಮಕರ ರಾಶಿಯವರು ನಾಗರ ಪಂಚಮಿಯ ದಿನದಂದು ಭಂಡಾರವನ್ನು ಆಯೋಜಿಸಬೇಕು ಮತ್ತು ಶಿವಲಿಂಗಕ್ಕೆ ಕಪ್ಪು ಎಳ್ಳಿನ (black sesame seeds) ಬೀಜಗಳನ್ನು ಅರ್ಪಿಸಬೇಕು. 

ಕುಂಭ ರಾಶಿ: ಕುಂಭ ರಾಶಿಯವರು ನಾಗರಚಮಿಯ ದಿನದಂದು ಹರಿಯುವ ನೀರಿನಲ್ಲಿ ಕಲ್ಲಿದ್ದಲನ್ನು ಹರಿಯಬಬಿಡಬೇಕು. 'ಓಂ ನಾಗದೇವತಾಯ ನಮಃ' ಎಂಬ ಮಂತ್ರವನ್ನು ಪಠಿಸಬೇಕು. 

ಮೀನ ರಾಶಿ: ಮೀನ ರಾಶಿಯವರು ನಾಗರ ಪಂಚಮಿಯ ದಿನದಂದು ಓಂ ನಮಃ ಶಿವಾಯ (Om Namah Shivaya) ಮಂತ್ರವನ್ನು ಪಠಿಸಬೇಕು ಮತ್ತು ರುದ್ರಾಭಿಷೇಕ ಮಾಡಬೇಕು.
 

click me!