ಅಕ್ಟೋಬರ್ 31 ರಂದು ದೀಪಾವಳಿ ಹಬ್ಬ ಆಚರಿಸಲಾಗುತ್ತದೆ. ಈ ದಿನದಂದು ಮನೆಮನೆಯಲ್ಲಿ ಲಕ್ಷ್ಮಿ ಪೂಜೆ ಮಾಡಲಾಗುತ್ತದೆ. ದೀಪಾವಳಿಯಂದು ಲಕ್ಷ್ಮಿ ಪೂಜೆ ಸಾಯಂಕಾಲ 5.36 ರಿಂದ ರಾತ್ರಿ 8.11 ರವರೆಗೆ ಇದೆ.
210
ಪ್ರತಿ ವರ್ಷ ಈ ದಿನದಂದು ಲಕ್ಷ್ಮಿ ಪೂಜೆ ಮಾಡಲಾಗುತ್ತದೆ. ದೀಪಾವಳಿಯಂದು ಲಕ್ಷ್ಮಿ ದೇವಿಯನ್ನು ಒಲಿಸಿಕೊಂಡರೆ ಹಣದ ಸಮಸ್ಯೆ ದೂರ ಆಗುತ್ತದೆ ಎಂಬ ನಂಬಿಕೆ ಇದೆ.
310
ಹಣದ ಸಮಸ್ಯೆ ಅನೇಕರ ಜೀವನದಲ್ಲಿ ಇರುತ್ತದೆ. ಒಳ್ಳೆಯ ಆದಾಯ ಇದ್ದರೂ ಕೂಡ ಅನೇಕರು ಉಳಿತಾಯ ಮಾಡಲು ಸಾಧ್ಯವಾಗುವುದಿಲ್ಲ. ಅನಾವಶ್ಯಕ ಖರ್ಚು ಕೂಡ ಹೆಚ್ಚಾಗಿರುತ್ತದೆ.
410
ಹಣದ ಸಮಸ್ಯೆ ದೂರ ಮಾಡಲು ದೀಪಾವಳಿಯಂದು ಈ ಸರಳ ಉಪಾಯ ಮಾಡಿ. ಇದರಿಂದ ನಿಮ್ಮ ಎಲ್ಲಾ ಸಮಸ್ಯೆಗಳು ದೂರ ಆಗುತ್ತವೆ. ಏನು ಮಾಡಬೇಕು ಎಂದು ತಿಳಿದುಕೊಳ್ಳಿ.
510
ದೀಪಾವಳಿಯಂದು ಧನವರ್ಷಾ ಯಂತ್ರ ಮಾಡಿ ಲಕ್ಷ್ಮಿ ದೇವಿಯ ಮುಂದೆ ಇಟ್ಟು ಪೂಜಿಸಿ. ಇದರಿಂದ ನಿಮ್ಮ ಅದೃಷ್ಟ ಬದಲಾಗುತ್ತದೆ. ಏನು ಮಾಡಬೇಕು ಎಂದು ತಿಳಿದುಕೊಳ್ಳಿ.
610
ಒಂದು ಕೆಂಪು ಅಥವಾ ಹಳದಿ ಬಣ್ಣದ ಚೀಲ ತೆಗೆದುಕೊಳ್ಳಿ. ಅದರಲ್ಲಿ ಐದು ಕವಡೆ, ಗೋಮತಿ ಚಕ್ರ, ಸುಪಾರಿ, ಪದ್ಮ ಬೀಜ, ಒಂದು ರೂಪಾಯಿ ನಾಣ್ಯ, ಲವಂಗ, ಏಲಕ್ಕಿ, ಚಕ್ಕೆ, ಸ್ವಲ್ಪ ಅರಿಶಿನ, ಸಾಸಿವೆ, ಬಿಳಿ ಬಟಾಣಿ ಮತ್ತು ಹಳದಿ ಬಟಾಣಿ ಹಾಕಿ.
710
ಈ ಚೀಲವನ್ನು ಲಕ್ಷ್ಮಿ ದೇವಿಯ ಮುಂದೆ ಇಡಿ. ದೇವಿಯ ಪಾದಗಳ ಬಳಿ ತುಪ್ಪದ ದೀಪ ಹಚ್ಚಬೇಕು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.
810
ದೀಪಾವಳಿ ಪೂಜೆ ಸಮಯದಲ್ಲಿ ಈ ಚೀಲವನ್ನು ಪೂಜಿಸಿ. ನಂತರ ಅದನ್ನು ನಿಮ್ಮ ಬಳಿ ಇಟ್ಟುಕೊಳ್ಳಿ. ಹೀಗೆ ಮಾಡೋದರಿಂದ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ.
910
ಇದನ್ನು ನಿಮ್ಮ ಹಣದ ಪೆಟ್ಟಿಗೆ ಅಥವಾ ಬೀರುವಿನಲ್ಲಿ ಇಟ್ಟುಕೊಳ್ಳಿ. ನಿಮ್ಮ ಹಣ ಹೆಚ್ಚಾಗುತ್ತದೆ. ಈ ರೀತಿ ಮಾಡೋದರಿಂದ ಭವಿಷ್ಯದಲ್ಲಿ ಉಳಿತಾಯದ ಪ್ರಮಾಣ ಏರಿಕೆಯಾಗುತ್ತದೆ.
1010
ಈ ವರ್ಷ ದೀಪಾವಳಿಯಂದು ಈ ಸರಳ ಉಪಾಯ ಮಾಡಿ. ಇದರಿಂದ ನಿಮ್ಮ ಹಣದ ಸಮಸ್ಯೆಗಳು ದೂರ ಆಗುತ್ತವೆ. ಹಾಗೆ ಲಕ್ಷ್ಮೀದೇವಿಯನ್ನು ಭಕ್ತಿಪೂರ್ವಕವಾಗಿ ಪೂಜಿಸಬೇಕು.