ಬೆಳಗ್ಗೆ ಸುಮಾರು 4 ಗಂಟೆಯಿಂದಲೇ ದೇವಳಕ್ಕೆ ಸಾವಿರಾರು ಭಕ್ತಾಧಿಗಳ ಆಗಮನವಾಗುತ್ತಿದ್ದು, ಭಕ್ತಾಧಿಗಳ ಭಾರೀ ಸಂಖ್ಯೆಯ ಹಿನ್ನೆಲೆ ಕ್ವಿಂಟಾಲ್ಗಟ್ಟಲೇ ಪಂಚಕಜ್ಜಾಯ ತಯಾರಿ ಮಾಡಲಾಗಿದೆ. ಅಲ್ಲದೇ, ಬೆಳಗ್ಗೆಯಿಂದ ಸಂಜೆಯವರೆಗೆ ಇಡಗುಂಜಿ ಕ್ಷೇತ್ರದಲ್ಲಿ 200 ಗಣಹೋಮ ನಡೆಯಲಿದ್ದು, ಸುಮಾರು 30ರಿಂದ 40,000 ತೆಂಗಿನಕಾಯಿ ವಿನಾಯಕನಿಗೆ ಅರ್ಪಣೆ ಮಾಡಲಾಗುತ್ತಿದೆ.