ದೀಪಾವಳಿ: ಇವುಗಳಲ್ಲೊಂದು ಕೆಲಸ ಮಾಡಿದ್ರೆ ಸಾಕು ಅದೃಷ್ಟ ಒಲಿಯುತ್ತೆ!

First Published Nov 14, 2020, 2:13 PM IST

ದೇಶದೆಲ್ಲೆಡೆ ಸಂಭ್ರಮದ ದೀಪಾವಳಿ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಜ್ಯೋತಿಷ್ಯ ಶಾಸ್ತ್ರದ ಅನುಸಾರ ಈ ದಿನದಲ್ಲಿ ದಾನ, ಹವನ, ಪೂಜೆ, ಮಾಡಿದರೆ ಶೀಘ್ರವೇ ಪ್ರಾಪ್ತಿ ಸಿಗುತ್ತದೆ ಎನ್ನಲಾಗುತ್ತದೆ. ಜೀವನದಲ್ಲಿ ಸುಖ ಸಮೃದ್ಧಿ ನಿಮ್ಮದಾಗಲೂ ದೀಪಾವಳಿ ದಿನ ಏನು ಮಾಡಬೇಕು ನೋಡೋಣ... 
 

ಲಕ್ಷ್ಮಿ ದೇವಿಯ ಚರಣ ಚಿಹ್ನೆ : ದೀಪಾವಳಿ ದಿನ ಲಕ್ಷಿ ದೇವಿಯ ಬೆಳ್ಳಿಯ ಚರಣ ಚಿಹ್ನೆಯನ್ನು ಮನೆಗೆ ತರಬೇಕು. ಇದನ್ನು ಮನೆಯ ತಿಜೋರಿಯಲ್ಲಿ ಇಡಬೇಕು.
undefined
ಶ್ರೀ ಯಂತ್ರ : ಶ್ರೀಯಂತ್ರವನ್ನು ಲಕ್ಷ್ಮಿ ದೇವಿಯ ಪ್ರತೀಕ ಎಂದು ನಂಬಲಾಗುತ್ತದೆ. ಇದನ್ನು ದೀಪಾವಳಿ ದಿನ ಖರೀದಿಸಿ ಮನೆಯ ಮಂದಿರದಲ್ಲಿ ಸ್ಥಾಪಿಸಬೇಕು.
undefined
ಕುಬೇರ ದೇವನ ಮೂರ್ತಿ : ಕುಬೇರನನ್ನು ಧನದ ಅಧಿಪತಿ ಎನ್ನಲಾಗುತ್ತದೆ. ಜೊತೆಗೆ ಇವರನ್ನು ದೇವತೆಗಳ ಕೋಶಾಧ್ಯಕ್ಷ ಎನ್ನಲಾಗುತ್ತದೆ. ದೀಪಾವಳಿ ದಿನ ಕುಬೇರನ ಮೂರ್ತಿಯನ್ನು ಮನೆಗೆ ತಂದರೆ ಉತ್ತಮ.
undefined
ದಕ್ಷಿಣಾವರ್ತಿ ಶಂಖ : ಭಗವಾನ್ ವಿಷ್ಣು ಮತ್ತು ಲಕ್ಷ್ಮಿ ದೇವಿಯ ಪೂಜೆಯ ಸಮಯದಲ್ಲಿ ದಕ್ಷಿಣಾವರ್ತಿ ಶಂಖಕ್ಕೆ ಮಹತ್ವದ ಸ್ಥಾನವಿದೆ.
undefined
ಮುತ್ತಿನ ಶಂಖ : ಇದು ತುಂಬಾ ವಿಶೇಷವಾದ ಶಂಖವಾಗಿದೆ. ಇದು ನೋಡಲು ತುಂಬಾನೇ ಸುಂದರವಾಗಿದೆ. ಇದನ್ನು ಮನೆಯಲ್ಲಿಡುವುದು ಶುಭ ಎನ್ನಲಾಗುತ್ತದೆ.
undefined
ಪಾದರಸದಿಂದ ಮಾಡಿದ ಲಕ್ಷ್ಮಿ ಮೂರ್ತಿ : ಲಕ್ಷ್ಮಿ ಪೂಜೆ ದಿನ ಇದನ್ನು ಮನೆಗೆ ತಂದರೆ ಉತ್ತಮ.
undefined
ಕವಡೆ : ಲಕ್ಷಿ ದೇವಿ ಸಮುದ್ರದಲ್ಲಿ ಪ್ರತ್ಯಕ್ಷಳಾಗಿದ್ದಳು, ಕವಡೆ ಸಹ ಸಮುದ್ರದಲ್ಲೇ ದೊರೆಯುತ್ತದೆ. ಆದುದರಿಂದ ಲಕ್ಷ್ಮಿ ಪೂಜೆ ದಿನ ಹಳದಿ ಕವಡೆ ದೇವಿ ಬಳಿ ಇಡಲಾಗುತ್ತದೆ.
undefined
ಕಮಲದ ಬೀಜ : ಲಕ್ಷ್ಮಿ ದೇವಿಗೆ ಕಮಲದ ಹೂವು ಎಂದರೆ ತುಂಬಾನೇ ಪ್ರೀತಿ. ದೇವಿಗೆ ಕಮಲದ ಬೀಜದ ಮಾಲೆ ಮಾಡಿ ಜಪ ಮಾಡಿದರೆ ಉತ್ತಮ.
undefined
ಸಣ್ಣ ತೆಂಗಿನಕಾಯಿ : ಸಾಮಾನ್ಯ ತೆಂಗಿನಕಾಯಿಗಿಂತ ಸಣ್ಣ ತೆಂಗಿನಕಾಯಿ ಇರುತ್ತದೆ. ಇದಕ್ಕೆ ಶ್ರೀಫಲ ಎನ್ನಲಾಗುತ್ತದೆ. ಅಂದರೆ ಇದನ್ನು ಲಕ್ಷ್ಮಿ ದೇವಿಯ ಫಲ ಎನ್ನಲಾಗುತ್ತದೆ.
undefined
ದೇವಿ ಲಕ್ಷ್ಮಿಯ ಫೋಟೋ : ದೀಪಾವಳಿ ದಿನ ಭಗವಾನ್ ವಿಷ್ಣುವಿನ ಸಮೀಪ ಕುಳಿತಿರುವ ಲಕ್ಷ್ಮಿ ದೇವಿಯ ಫೋಟೋವನ್ನು ಮನೆಗೆ ತನ್ನಿ. ಇಂತಹ ಫೋಟೋಗಳನ್ನು ಪೂಜೆ ಮಾಡುವುದು ಉತ್ತಮ.
undefined
click me!