30 ವರ್ಷಗಳ ನಂತರ ಕುಂಭ ರಾಶಿಯಲ್ಲಿ ಶನಿ… ಶುಭ, ಅಶುಭ ತಿಳಿಯಿರಿ

First Published Jan 19, 2023, 12:36 PM IST

ಮಂಗಳವಾರ, ಜನವರಿ 17, 2023 ರಂದು, ಶನಿ ದೇವರು ಕುಂಭ ರಾಶಿಯನ್ನು ಪ್ರವೇಶಿಸಿದ್ದಾನೆ. ಶನಿಯು 2025 ರವರೆಗೆ ತನ್ನ ರಾಶಿಯಾದ ಕುಂಭ ರಾಶಿಯಲ್ಲಿ ಕುಳಿತುಕೊಳ್ಳುತ್ತಾನೆ ಅಂದ್ರೆ ಈ ರಾಶಿಗೆ ಶನಿ ದೆಸೆ ಆರಂಭವಾಗಲಿದೆ..ಹಾಗಾಗಿ ಅದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿ ತಿಳಿಯಿರಿ. 

ಜನವರಿ 17 ರಂದು ಶನಿ (Shani) ದೇವರು ತನ್ನ ರಾಶಿಯಾದ ಕುಂಭ ರಾಶಿಯನ್ನು ಪ್ರವೇಶಿಸಿದ ಕೂಡಲೇ, ಅದರ ಫಲಿತಾಂಶ ಸಹ ತೋರಿಸಲು ಪ್ರಾರಂಭಿಸುತ್ತವೆ. 12 ರಾಶಿಗಳಲ್ಲಿ, ಕೆಲವು ಅರ್ಧ ಮತ್ತು ಕೆಲವು ರಾಶಿಗಳು ಪೂರ್ತಿಯಾಗಿ ಆಕ್ರಮಣ ಮಾಡಲು ಪ್ರಾರಂಭಿಸುತ್ತವೆ. ಇದರೊಂದಿಗೆ, ಅನೇಕ ರಾಶಿಗಳ ಮೇಲೆ ಸಾಡೇ ಸಾತ್ ಪ್ರಭಾವವೂ ಕೊನೆಗೊಳ್ಳುತ್ತೆ. ರಾಶಿಚಕ್ರದ ಬದಲಾವಣೆಯು ಮೇಷ, ವೃಷಭ ಮತ್ತು ಧನು ರಾಶಿಯ ಜನರಿಗೆ ಪ್ರಯೋಜನಕಾರಿಯಾಗಲಿದೆ. ಕುಂಭ ರಾಶಿಯವರು ಸ್ವಾವಲಂಬಿಗಳು, ಆದ್ದರಿಂದ ಅವರು ಪ್ರಯೋಜನಗಳನ್ನು ಸಹ ಪಡೆಯುತ್ತಾರೆ.
 

ಶನಿ ಎರಡೂವರೆ ವರ್ಷಗಳ ಕಾಲ  ಕುಂಭ ರಾಶಿಯಲ್ಲಿಯೇ(Aquarius) ವಾಸಿಸಲಿದ್ದಾನೆ
ಶನಿ ಎರಡೂವರೆ ವರ್ಷಗಳಲ್ಲಿ ರಾಶಿ ಬದಲಾಯಿಸುತ್ತಾನೆ, ಅಂದರೆ, ಒಂದು ರಾಶಿಯಲ್ಲಿ ಎರಡೂವರೆ ವರ್ಷಗಳ ಕಾಲ ಇದ್ದ ನಂತರ, ಅವನು ಮತ್ತೊಂದು ರಾಶಿಗೆ ಹೋಗುತ್ತಾನೆ. ಇದರಿಂದ ಆ ರಾಶಿಯವರಿಗೆ ಏನಾಗುತ್ತೆ?

ಈ ರೀತಿಯಾಗಿ, ಶನಿ 30 ವರ್ಷಗಳ ನಂತರ ತಮ್ಮದೇ ಆದ ರಾಶಿಗೆ ಮರಳಿದ್ದಾನೆ. 12 ರಾಶಿಗಳಲ್ಲಿ, ಅವುಗಳ ಒಂದು ಚಕ್ರವನ್ನು ಪೂರ್ಣಗೊಳಿಸಲು ಮೂವತ್ತು ವರ್ಷಗಳನ್ನು ತೆಗೆದುಕೊಳ್ಳುತ್ತೆ. ಈ ಬಾರಿ ಇದು ಜನವರಿ 17 ರಂದು ಕುಂಭರಾಶಿಯನ್ನು ಪ್ರವೇಶಿಸಿದ್ದಾನೆ. ಇದರಿಂದ ಕುಂಭ ರಾಶಿ ಮೇಲೆ ಯಾವ ಪರಿಣಾಮ ಬೀರುತ್ತೆ ನೋಡೋಣ.

ಸಾಡೇ ಸಾತ್ನ(Saade saath) ಎರಡನೇ ಹಂತ ಪ್ರಾರಂಭವಾಗಲಿದೆ.

ಕುಂಭ ರಾಶಿಗೆ ಶನಿಯ ಈ ಪ್ರವೇಶವು ಸಾಡೇ ಸಾತ್ನ ಎರಡನೇ ಹಂತವನ್ನು ಪ್ರಾರಂಭಿಸುತ್ತೆ. ಜ್ಯೋತಿಷ್ಯದಲ್ಲಿ, ಸಾಡೇ ಸಾತ್‌ನ ಎರಡನೇ ಹಂತವನ್ನು ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಯಾಕಂದ್ರೆ ಇದನ್ನು ಮಾನಸಿಕವಾಗಿ, ಆರ್ಥಿಕವಾಗಿ, ದೈಹಿಕವಾಗಿ ನೋವಿನಿಂದ ಕೂಡಿದೆ ಎಂದು ಪರಿಗಣಿಸಲಾಗುತ್ತೆ. 

ಶನಿಯು ಅಶುಭವಾಗಿರುವ(Unlucky) ಅಥವಾ ಯಾರ ಕಾರ್ಯಗಳು ಸರಿಯಾಗಿಲ್ಲವೋ ಅಂತಹ ಜನರಿಗೆ ಸಾಡೇ ಸಾತ್ ಸಮಯದಲ್ಲಿ ಶನಿಯು ಹೆಚ್ಚಿನ ತೊಂದರೆ ನೀಡುತ್ತಾನೆ ಎಂದು ನಂಬಲಾಗಿದೆ. ಶನಿ ಕುಂಭ ರಾಶಿಯ ಅಧಿಪತಿಯಾಗಿದ್ದಾನೆ, ಆದ್ದರಿಂದ ಈ ಸಮಯವು ಅವರಿಗೆ ಅಷ್ಟು ನೋವಿನಿಂದ ಕೂಡಿರೋದಿಲ್ಲ. ಬದಲಾಗಿ, ಕೆಲವು ಸಂದರ್ಭಗಳಲ್ಲಿ, ಶನಿಯ ಈ ಆಗಮನವು ಕುಂಭ ರಾಶಿಯ ಜನರಿಗೆ ಪ್ರಯೋಜನಕಾರಿಯಾಗಲಿದೆ.

ಮೂರು ವಿಶೇಷ ನಕ್ಷತ್ರಪುಂಜಗಳಿವೆ

ಶನಿಯ ಮೂರು ನಕ್ಷತ್ರಪುಂಜಗಳು ವಿಶೇಷವಾಗಿವೆ. ಪುಷ್ಯ, ಉತ್ತರ ಭದ್ರಪ್ರದ ಮತ್ತು ಅನುರಾಧಾ, ಆದ್ದರಿಂದ ಈ ನಕ್ಷತ್ರದಲ್ಲಿ(Star) ಜನಿಸಿದವರು ಸಹ ಶನಿಯ ಪ್ರಭಾವಕ್ಕೆ ಒಳಗಾಗುತ್ತಾರೆ. 

ಶನಿಯ ಅಶುಭ ಪರಿಣಾಮವನ್ನು ಕಡಿಮೆ ಮಾಡಲು ಪ್ರತಿ ಶನಿವಾರ ಶನಿ ದೇವರಿಗೆ ಸಾಸಿವೆ ಎಣ್ಣೆಯನ್ನು ಅರ್ಪಿಸುವ ಸಂಪ್ರದಾಯವಿದೆ. ಹನುಮಂತನನ್ನು(Hanuman) ಪೂಜಿಸೋದು, ಶಿವನನ್ನು ಪೂಜಿಸೋದು, ಅರಳಿ ಮತ್ತು ಶಮಿ ಮರವನ್ನು ಪೂಜಿಸೋದು, ಎಂಟು ಮುಖಿ ರುದ್ರಾಕ್ಷಿಯನ್ನು ಧರಿಸೋದು ಶನಿ ದೋಷವನ್ನು ಕಡಿಮೆ ಮಾಡುತ್ತೆ.

ಕುಂಭ ರಾಶಿಗೆ ಶನಿ ಬಂದ ನಂತರ, ಜಗತ್ತಿನಲ್ಲಿ ಹರಡುವ ಅಶಾಂತಿಯನ್ನು ಕಡಿಮೆ ಮಾಡಬಹುದು. ಪೂಜಿಸುವ ಮತ್ತು ಒಳ್ಳೆಯ ಕೆಲಸ ಮಾಡುವ ಜನರು ಪ್ರಯೋಜನಗಳನ್ನು ಪಡೆಯುತ್ತಾರೆ. ಹಣದುಬ್ಬರದಿಂದ ಸಾರ್ವಜನಿಕರಿಗೆ ಸ್ವಲ್ಪ ಪರಿಹಾರದ ಲಕ್ಷಣಗಳಿವೆ. ಯುದ್ಧದ(War) ಪರಿಸ್ಥಿತಿಗಳು ಸುಧಾರಿಸುತ್ತವೆ.
 

click me!