Raichur: ಡೆತ್‌ನೋಟ್‌ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ; ಶವ ನೋಡದಿದ್ದರೆ ದೆವ್ವವಾಗಿ ಕಾಡುತ್ತೇನೆಂದು ಬೆದರಿಕೆ..!

Published : Oct 02, 2022, 01:02 PM IST

ರಾಯಚೂರು ಜಿಲ್ಲೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಐದು ಪುಟ ಡೆತ್‌ ನೋಟ್‌ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ. ಅಲ್ಲದೆ, ಡೆತ್‌ ನೋಟ್‌ ಕೊನೆಯಲ್ಲಿ ಶವ ನೋಡಲು ಬರಲು ಸೂಚನೆಯನ್ನೂ ನೀಡಿದ್ದಾಳೆ. ತನ್ನ ಶವ ನೋಡಲು ಫ್ರೆಂಡ್ಸ್ ಬರಲಿಲ್ಲ ಅಂದ್ರೆ ದೆವ್ವವಾಗಿ ಕಾಡುತ್ತೇನೆ ಎಂದು ಬರೆದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ರಾಯಚೂರು ಜಿಲ್ಲೆ ಸಿಂಧನೂರು ಪಟ್ಟಣದಲ್ಲಿ ಈ ಘಟನೆ ನಡೆದಿದೆ.

PREV
15
Raichur: ಡೆತ್‌ನೋಟ್‌ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ; ಶವ ನೋಡದಿದ್ದರೆ ದೆವ್ವವಾಗಿ ಕಾಡುತ್ತೇನೆಂದು ಬೆದರಿಕೆ..!

ರಾಯಚೂರು ಜಿಲ್ಲೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಐದು ಪುಟ ಡೆತ್‌ ನೋಟ್‌ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ. ಅಲ್ಲದೆ, ಡೆತ್‌ ನೋಟ್‌ ಕೊನೆಯಲ್ಲಿ ಶವ ನೋಡಲು ಬರಲು ಸೂಚನೆಯನ್ನೂ ನೀಡಿದ್ದಾಳೆ. ತನ್ನ ಶವ ನೋಡಲು ಫ್ರೆಂಡ್ಸ್ ಬರಲಿಲ್ಲ ಅಂದ್ರೆ ದೆವ್ವವಾಗಿ ಕಾಡುತ್ತೇನೆ ಎಂದು ಬರೆದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ರಾಯಚೂರು ಜಿಲ್ಲೆ ಸಿಂಧನೂರು ಪಟ್ಟಣದಲ್ಲಿ ಈ ಘಟನೆ ನಡೆದಿದೆ.

 

25

ರಾಯಚೂರು ಜಿಲ್ಲೆಯ ಸಿಂಧನೂರಿನ ಗಣೇಶ ವಿಸರ್ಜನೆ ಮಾಡುವ ಕೆರೆಯಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ. ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿನಿಯನ್ನು ಸರ್ವೋದಯ ಶಾಲೆಯ 16 ವರ್ಷದ ಸಾರಿಕಾ ಎಂದು ಗುರುತಿಸಲಾಗಿದೆ. ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾಗೆ, ಆತ್ಮಹತ್ಯೆ ಪ್ರಕರಣ ಸಂಬಂಧ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

 

35

ಹಲವು ಗೆಳೆಯ ಗೆಳತಿಯರ ಹೆಸರನ್ನು ಡೆತ್‌ನೋಟ್‌ನಲ್ಲಿ ಬರೆದಿರುವ ವಿದ್ಯಾರ್ಥಿನಿ ನಾನು ನಿಮ್ಮೆಲ್ಲರನ್ನೂ ಮಿಸ್‌ ಮಾಡಿಕೊಳ್ಳುತ್ತೇನೆ ಎಂದಿದ್ದಾಳೆ. I Love you gus so much ಎಂದೂ ಬರೆದುಕೊಂಡಿದ್ದಾಳೆ. 

45

''Hi Guys Sorry, ನಾನು ನಿಮ್ಮೆಲ್ಲರನ್ನೂ ಬಿಟ್ಟು ಹೋಗುತ್ತೀನಿ ಎಂದು ಬೇಜಾರ್‌ ಆಗಬೇಡಿ ಪ್ಲೀಸ್‌. ಯಾಕೆಂದ್ರೆ, ನಿಮಗಿಂತ ನನಗೆ ಫುಲ್‌ ಬೇಜಾರ್ ಆಗಿದೆ'' ಎಂದೂ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಡೆತ್‌ನೋಟ್‌ನಲ್ಲಿ ಬರೆದಿದ್ದಾಳೆ. 

55

ನನ್ನದು ಒಂದೇ ಆಸೆ. ನನ್ನ ಶವ ನೋಡೋಕೆ ಎಲ್ಲರೂ ಬನ್ನಿ ಪ್ಲೀಸ್‌. ಇಲ್ಲಾಮದ್ರೆ ನಾನು ದೆವ್ವ ಆಗಿ ಬರುತ್ತೀನಿ ನೋಡಿ ಎಂದೂ ಡೆತ್‌ನೋಟ್‌ನಲ್ಲಿ 16 ವರ್ಷದ ಮೃತ ವಿದ್ಯಾರ್ಥಿನಿ ಬರೆದುಕೊಂಡಿದ್ದಾಳೆ. 

Read more Photos on
click me!

Recommended Stories