ದಂತಚೋರ ವೀರಪ್ಪನ್. ಕನ್ನಡ ಹಾಗೂ ತಮಿಳುನಾಡಿನ ಜನಕ್ಕೆ ಡಾ.ರಾಜ್ಕುಮಾರ್ ಅಪಹರಣದ ಕಾರಣಕ್ಕಾಗಿಯೂ ಗೊತ್ತಿದ್ದಂತ ವ್ಯಕ್ತಿ. ಆನೆಗಳ ದಂತ ಕಳ್ಳಸಾಗಣೆ, ಶ್ರೀಗಂಧದ ಮರಗಳ ಕಳ್ಳತನ ಹಾಗೂ ಲೆಕ್ಕವಿಲ್ಲದಷ್ಟು ಕೊಲೆಗಳನ್ನು ಮಾಡಿರುವ ಆರೋಪವಿತ್ತು. ದಶಕಗಳ ಕಾಲ ಪೊಲೀಸರಿಂದ ಕಣ್ತಪ್ಪಿಕೊಂಡು ಅರಣ್ಯದಲ್ಲಿ ತಲೆಮರೆಸಿಕೊಂಡಿದ್ದ ಈತನನ್ನು 2004ರಲ್ಲಿ ಪೊಲೀಸರು ಎನ್ಕೌಂಟರ್ ಮಾಡಿ ಕೊಂದು ಹಾಕಿದರು.