ಟೀಂ ಇಂಡಿಯಾದ ಈ ಮಾಜಿ ನಾಯಕನಿಗಾಗಿ ಪ್ರಾಣ ನೀಡಲು ಸಿದ್ದವೆಂದ ಗೌತಮ್ ಗಂಭೀರ್..!

Suvarna News   | Asianet News
Published : May 04, 2020, 01:05 PM ISTUpdated : May 04, 2020, 01:17 PM IST

2 ವಿಶ್ವಕಪ್ ಫೈನಲ್ ಪಂದ್ಯದ ಹೀರೋ, ಕ್ರಿಕೆಟಿಗ ಕಂ ಸಂಸದ ಗೌತಮ್ ಗಂಭೀರ್ ತಾವಾಡಿದ ನಾಯಕರಲ್ಲಿ ಶ್ರೇಷ್ಠ ನಾಯಕ ಯಾರು ಎನ್ನುವುದರನ್ನು ಹೆಸರಿಸಿದ್ದಾರೆ. ಮುಂದುವರೆದು ಅವರಿಗೆ ತನ್ನ ಪ್ರಾಣ ನೀಡಲು ರೆಡಿ ಎಂದು ಗೌತಿ ಹೇಳಿದ್ದಾರೆ. ಕೇವಲ 14 ಟೆಸ್ಟ್ ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಿದ್ದರೂ ಅವರ ನಾಯಕತ್ವ ಗುಣ ಗಂಭೀರ್ ನೆನಪಿನಲ್ಲಿ ಅಚ್ಚಳಿಯದೇ ಉಳಿದಿದೆ. ಡೆಲ್ಲಿ  ಕ್ರಿಕೆಟಿ ಕನ್ನಡದ ನಾಯಕನಿಗೆ ಮನಸೋತಿದ್ದಾರೆ. ಯಾರು ಆ ಕ್ರಿಕೆಟಿಗ? ಗಂಭೀರ್ ಹೇಳಿದ್ದೇನು ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್. 

PREV
110
ಟೀಂ ಇಂಡಿಯಾದ ಈ ಮಾಜಿ ನಾಯಕನಿಗಾಗಿ ಪ್ರಾಣ ನೀಡಲು ಸಿದ್ದವೆಂದ ಗೌತಮ್ ಗಂಭೀರ್..!

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾನು ಉಳಿಯಲು ಸಾಧ್ಯವಾಗಿದ್ದೇ ಅನಿಲ್‌ ಕುಂಬ್ಳೆ ಅವರ ಸಹಾಯದಿಂದ. ಅವರಿಗಾಗಿ ಪ್ರಾಣ ನೀಡಲು ಸಹ ಸಿದ್ಧ ಎಂದ ಭಾರತದ ಮಾಜಿ ಕ್ರಿಕೆಟಿಗ, ಹಾಲಿ ಸಂಸದ ಗೌತಮ್‌ ಗಂಭೀರ್‌ 

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾನು ಉಳಿಯಲು ಸಾಧ್ಯವಾಗಿದ್ದೇ ಅನಿಲ್‌ ಕುಂಬ್ಳೆ ಅವರ ಸಹಾಯದಿಂದ. ಅವರಿಗಾಗಿ ಪ್ರಾಣ ನೀಡಲು ಸಹ ಸಿದ್ಧ ಎಂದ ಭಾರತದ ಮಾಜಿ ಕ್ರಿಕೆಟಿಗ, ಹಾಲಿ ಸಂಸದ ಗೌತಮ್‌ ಗಂಭೀರ್‌ 

210

‘2008ರಲ್ಲಿ ಆಸ್ಪ್ರೇಲಿಯಾ ವಿರುದ್ಧ ತವರಿನ ಸರಣಿ ವೇಳೆ ನಾನು, ಸೆಹ್ವಾಗ್‌ ಭೋಜನ ಸೇವಿಸುತ್ತಿದ್ದೆವು. ಆಗ ಕುಂಬ್ಳೆ ಬಂದು, ಸರಣಿಯ ಎಲ್ಲಾ ಪಂದ್ಯಗಳಲ್ಲೂ ನೀವಿಬ್ಬರೇ ಇನ್ನಿಂಗ್ಸ್‌ ಆರಂಭಿಸಲಿದ್ದೀರಿ. ಎಲ್ಲಾ ಪಂದ್ಯಗಳಲ್ಲಿ ಡಕೌಟ್‌ ಆದರೂ ಚಿಂತೆಯಿಲ್ಲ ಎಂದಿದ್ದರಂತೆ ಕುಂಬ್ಳೆ.

‘2008ರಲ್ಲಿ ಆಸ್ಪ್ರೇಲಿಯಾ ವಿರುದ್ಧ ತವರಿನ ಸರಣಿ ವೇಳೆ ನಾನು, ಸೆಹ್ವಾಗ್‌ ಭೋಜನ ಸೇವಿಸುತ್ತಿದ್ದೆವು. ಆಗ ಕುಂಬ್ಳೆ ಬಂದು, ಸರಣಿಯ ಎಲ್ಲಾ ಪಂದ್ಯಗಳಲ್ಲೂ ನೀವಿಬ್ಬರೇ ಇನ್ನಿಂಗ್ಸ್‌ ಆರಂಭಿಸಲಿದ್ದೀರಿ. ಎಲ್ಲಾ ಪಂದ್ಯಗಳಲ್ಲಿ ಡಕೌಟ್‌ ಆದರೂ ಚಿಂತೆಯಿಲ್ಲ ಎಂದಿದ್ದರಂತೆ ಕುಂಬ್ಳೆ.

310

ತನ್ನ ಸಹ ಆಟಗಾರರಿಗೆ ಕುಂಬ್ಳೆ ನೀಡಿದಷ್ಟು ಬೆಂಬಲವನ್ನು ಮತ್ತ್ಯಾವ ನಾಯಕರೂ ನೀಡಲು ಸಾಧ್ಯವಿಲ್ಲ’ವೆಂದ ಗೌತಮ್ ಗಂಭೀರ್

ತನ್ನ ಸಹ ಆಟಗಾರರಿಗೆ ಕುಂಬ್ಳೆ ನೀಡಿದಷ್ಟು ಬೆಂಬಲವನ್ನು ಮತ್ತ್ಯಾವ ನಾಯಕರೂ ನೀಡಲು ಸಾಧ್ಯವಿಲ್ಲ’ವೆಂದ ಗೌತಮ್ ಗಂಭೀರ್

410

ಎಡಗೈ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಆ ಟೆಸ್ಟ್ ಸರಣಿಯಲ್ಲಿ ದ್ವಿಶತಕ ಸಿಡಿಸಿ ಮಿಂಚಿದ್ದರು.

ಎಡಗೈ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಆ ಟೆಸ್ಟ್ ಸರಣಿಯಲ್ಲಿ ದ್ವಿಶತಕ ಸಿಡಿಸಿ ಮಿಂಚಿದ್ದರು.

510

ಆಗ ಡಿಆರ್‌ಎಸ್ ಪದ್ದತಿಯಿದ್ದರೆ ವೃತ್ತಿ ಜೀವನದ ಅಂತ್ಯದ ವೇಳೆಗೆ ಕುಂಬ್ಳೆ ಖಾತೆಯಲ್ಲಿ 900 ವಿಕೆಟ್‌ಗಳಿರುತ್ತಿದ್ದವು ಎಂದ ಗಂಭೀರ್.

ಆಗ ಡಿಆರ್‌ಎಸ್ ಪದ್ದತಿಯಿದ್ದರೆ ವೃತ್ತಿ ಜೀವನದ ಅಂತ್ಯದ ವೇಳೆಗೆ ಕುಂಬ್ಳೆ ಖಾತೆಯಲ್ಲಿ 900 ವಿಕೆಟ್‌ಗಳಿರುತ್ತಿದ್ದವು ಎಂದ ಗಂಭೀರ್.

610

ಯುವ ಕ್ರಿಕೆಟಿಗರು ಕುಂಬ್ಳೆ ಅವರನ್ನು ರೋಲ್ ಮಾಡೆಲ್ ಆಗಿ ಇಟ್ಟುಕೊಳ್ಳಬೇಕು ಎಂದು ಗಂಭೀರ್ ಸಲಹೆ ನೀಡಿದ್ದಾರೆ.

ಯುವ ಕ್ರಿಕೆಟಿಗರು ಕುಂಬ್ಳೆ ಅವರನ್ನು ರೋಲ್ ಮಾಡೆಲ್ ಆಗಿ ಇಟ್ಟುಕೊಳ್ಳಬೇಕು ಎಂದು ಗಂಭೀರ್ ಸಲಹೆ ನೀಡಿದ್ದಾರೆ.

710

ಅನಿಲ್ ಕುಂಬ್ಳೆ ಹಾಗೂ ಹರ್ಭಜನ್ ಸಿಂಗ್ ಭಾರತ ಕ್ರಿಕೆಟ್ ಜಗತ್ತಿಗೆ ಶ್ರೇಷ್ಠ ಸ್ಪಿನ್‌ ಜೋಡಿಗಳಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ ಎಂದ ಗೌತಿ.

ಅನಿಲ್ ಕುಂಬ್ಳೆ ಹಾಗೂ ಹರ್ಭಜನ್ ಸಿಂಗ್ ಭಾರತ ಕ್ರಿಕೆಟ್ ಜಗತ್ತಿಗೆ ಶ್ರೇಷ್ಠ ಸ್ಪಿನ್‌ ಜೋಡಿಗಳಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ ಎಂದ ಗೌತಿ.

810

ಕೇವಲ 14 ಪಂದ್ಯಗಳಲ್ಲಿ ಟೀಂ ಇಂಡಿಯಾ ಮುನ್ನಡೆಸಿದ್ದರೂ, ಕುಂಬ್ಳೆಯ ನಾಯಕತ್ವ ಗುಣ ಸಹ ಆಟಗಾರರಿಗೆ ಇಷ್ಟವಾಗಿತ್ತು. ಹಲವು ಕ್ರಿಕೆಟಿಗರು ಕುಂಬ್ಳೆಯನ್ನು ಭಾರತದ ಬೆಸ್ಟ್ ಕ್ಯಾಪ್ಟನ್‌ಗಳಲ್ಲಿ ಒಬ್ಬರು ಎಂದು ಒಪ್ಪಿಕೊಂಡಿದ್ದಾರೆ.

ಕೇವಲ 14 ಪಂದ್ಯಗಳಲ್ಲಿ ಟೀಂ ಇಂಡಿಯಾ ಮುನ್ನಡೆಸಿದ್ದರೂ, ಕುಂಬ್ಳೆಯ ನಾಯಕತ್ವ ಗುಣ ಸಹ ಆಟಗಾರರಿಗೆ ಇಷ್ಟವಾಗಿತ್ತು. ಹಲವು ಕ್ರಿಕೆಟಿಗರು ಕುಂಬ್ಳೆಯನ್ನು ಭಾರತದ ಬೆಸ್ಟ್ ಕ್ಯಾಪ್ಟನ್‌ಗಳಲ್ಲಿ ಒಬ್ಬರು ಎಂದು ಒಪ್ಪಿಕೊಂಡಿದ್ದಾರೆ.

910

ಗೌತಮ್ ಗಂಭೀರ್ 2007ರ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ಫೈನಲ್ ಪಂದ್ಯದಲ್ಲಿ ಕೆಚ್ಚೆದೆಯ ಅರ್ಧಶತಕ ಬಾರಿಸಿ ತಂಡ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಗಂಭೀರ್ ಪ್ರಮುಖ ಪಾತ್ರ ವಹಿಸಿದ್ದರು. 

ಗೌತಮ್ ಗಂಭೀರ್ 2007ರ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ಫೈನಲ್ ಪಂದ್ಯದಲ್ಲಿ ಕೆಚ್ಚೆದೆಯ ಅರ್ಧಶತಕ ಬಾರಿಸಿ ತಂಡ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಗಂಭೀರ್ ಪ್ರಮುಖ ಪಾತ್ರ ವಹಿಸಿದ್ದರು. 

1010

ಕೆಲ ದಿನಗಳ ಹಿಂದಷ್ಟೇ ಟೀಂ ಇಂಡಿಯಾ ಮಾಜಿ ವೇಗಿ ರುದ್ರ ಪ್ರತಾಪ್ ಸಿಂಗ್ ಕೂಡಾ ಕುಂಬ್ಳೆ ಅತ್ಯತ್ತಮ ನಾಯಕ ಎಂದು ಹೇಳಿದ್ದರು.

ಕೆಲ ದಿನಗಳ ಹಿಂದಷ್ಟೇ ಟೀಂ ಇಂಡಿಯಾ ಮಾಜಿ ವೇಗಿ ರುದ್ರ ಪ್ರತಾಪ್ ಸಿಂಗ್ ಕೂಡಾ ಕುಂಬ್ಳೆ ಅತ್ಯತ್ತಮ ನಾಯಕ ಎಂದು ಹೇಳಿದ್ದರು.

click me!

Recommended Stories