ಇಂದು (ಆ.19) ಜಗತ್ತಿನಾದ್ಯಂತ ವಿಶ್ವ ಛಾಯಗ್ರಹಣ ದಿನವನ್ನಾಗಿ ಆಚರಿಸಲಾಗುತ್ತದೆ. ಇಂತಹ ಸಂದರ್ಭದಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದೇ ತಮ್ಮ 16 ವರ್ಷಗಳ ಸುದೀರ್ಘ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ದೇಶಕ್ಕೆ ಎಲ್ಲವನ್ನು ಗೆದ್ದುಕೊಟ್ಟ ಧೋನಿಯ ಸಾಧನೆಯನ್ನು ಈಗ ಮೆಲುಕು ಹಾಕೋಣ. 16 ವರ್ಷಗಳ ಕ್ರಿಕೆಟ್ ಜೀವನದ ಅತ್ಯುತ್ತಮ 10 ಫೋಟೋಗಳು ನಿಮಗಾಗಿ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಹೇಂದ್ರ ಸಿಂಗ್ ಧೋನಿಗೆ ರಾಷ್ಟ್ರಪತಿ ಭವನದಲ್ಲಿ ಪದ್ಮಭೂಷಣ ಪ್ರಶಸ್ತಿ ಪ್ರದಾನ ಮಾಡುತ್ತಿರುವ ಕ್ಷಣ(ನವದೆಹಲಿ ಏಪ್ರಿಲ್ 2, 2018)
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಹೇಂದ್ರ ಸಿಂಗ್ ಧೋನಿಗೆ ರಾಷ್ಟ್ರಪತಿ ಭವನದಲ್ಲಿ ಪದ್ಮಭೂಷಣ ಪ್ರಶಸ್ತಿ ಪ್ರದಾನ ಮಾಡುತ್ತಿರುವ ಕ್ಷಣ(ನವದೆಹಲಿ ಏಪ್ರಿಲ್ 2, 2018)
210
ಧೋನಿ(ಬಲಕ್ಕೆ) ಮತ್ತು ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಅಭಿನವ್ ಬಿಂದ್ರಾ(ಎಡಕ್ಕೆ) ಮೇಜರ್ ದೀಪಕ್ ರಾವ್(ಮಧ್ಯದಲ್ಲಿ) ಟೆರಿಟೋರಿಯಲ್ ಆರ್ಮಿಯ ಲೆಫ್ಟಿನೆಂಟ್ ಕರ್ನಲ್ ಹುದ್ದೆ ಗೌರವಕ್ಕೆ ಭಾಜನರಾದ ಬಳಿಕ ಸೆಲ್ಯೂಟ್ ಮಾಡುತ್ತಿರುವ ಕ್ಷಣ. ಉಗ್ರಗಾಮಿಗಳ ವಿರುದ್ಧ ಹೋರಾಟಕ್ಕೆ ಸೈನಿಕರಿಗೆ ತರಬೇತಿ ನೀಡುವ ಮೇಜರ್ ದೀಪಕ್ ರಾವ್ ಅವರಿಗೂ ಗೌರವಾರ್ಥವಾಗಿ ಲೆಫ್ಟಿನೆಂಟ್ ಕರ್ನಲ್ ನೀಡಿ ಗೌರವಿಸಲಾಯಿತು.(ನವೆಂಬರ್ 01, 2011 ನವದೆಹಲಿ)
ಧೋನಿ(ಬಲಕ್ಕೆ) ಮತ್ತು ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಅಭಿನವ್ ಬಿಂದ್ರಾ(ಎಡಕ್ಕೆ) ಮೇಜರ್ ದೀಪಕ್ ರಾವ್(ಮಧ್ಯದಲ್ಲಿ) ಟೆರಿಟೋರಿಯಲ್ ಆರ್ಮಿಯ ಲೆಫ್ಟಿನೆಂಟ್ ಕರ್ನಲ್ ಹುದ್ದೆ ಗೌರವಕ್ಕೆ ಭಾಜನರಾದ ಬಳಿಕ ಸೆಲ್ಯೂಟ್ ಮಾಡುತ್ತಿರುವ ಕ್ಷಣ. ಉಗ್ರಗಾಮಿಗಳ ವಿರುದ್ಧ ಹೋರಾಟಕ್ಕೆ ಸೈನಿಕರಿಗೆ ತರಬೇತಿ ನೀಡುವ ಮೇಜರ್ ದೀಪಕ್ ರಾವ್ ಅವರಿಗೂ ಗೌರವಾರ್ಥವಾಗಿ ಲೆಫ್ಟಿನೆಂಟ್ ಕರ್ನಲ್ ನೀಡಿ ಗೌರವಿಸಲಾಯಿತು.(ನವೆಂಬರ್ 01, 2011 ನವದೆಹಲಿ)
310
ಉತ್ತರ ಶ್ರೀನಗರದ ಬಾರಾಮುಲ್ಲಾ ಮಿಲಿಟರಿ ಹೆಡ್ಕ್ವಾರ್ಟರ್ಸ್ನಲ್ಲಿ ಲೆಫ್ಟಿನೆಂಟ್ ಕರ್ನಲ್ ಹುದ್ದೆ ಅಲಂಕರಿಸಿದ ಬಳಿಕ ಮಹೇಂದ್ರ ಸಿಂಗ್ ಸೇನಾ ಅಧಿಕಾರಿಗಳೊಂದಿಗೆ ಹೆಜ್ಜೆಹಾಕಿದ ಕ್ಷಣಗಳು.
ಉತ್ತರ ಶ್ರೀನಗರದ ಬಾರಾಮುಲ್ಲಾ ಮಿಲಿಟರಿ ಹೆಡ್ಕ್ವಾರ್ಟರ್ಸ್ನಲ್ಲಿ ಲೆಫ್ಟಿನೆಂಟ್ ಕರ್ನಲ್ ಹುದ್ದೆ ಅಲಂಕರಿಸಿದ ಬಳಿಕ ಮಹೇಂದ್ರ ಸಿಂಗ್ ಸೇನಾ ಅಧಿಕಾರಿಗಳೊಂದಿಗೆ ಹೆಜ್ಜೆಹಾಕಿದ ಕ್ಷಣಗಳು.
410
ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ ಐಸಿಸಿ ಅಧ್ಯಕ್ಷರಾಗಿದ್ದ ಅಲನ್ ಐಸಾಕ್ ಅವರಿಂದ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಟ್ರೋಫಿ ಪಡೆದುಕೊಳ್ಳುತ್ತಿರುವ ಕ್ಷಣ. (ಜೂನ್ 23, 2013 ಬರ್ಮಿಂಗ್ಹ್ಯಾಂ)
ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ ಐಸಿಸಿ ಅಧ್ಯಕ್ಷರಾಗಿದ್ದ ಅಲನ್ ಐಸಾಕ್ ಅವರಿಂದ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಟ್ರೋಫಿ ಪಡೆದುಕೊಳ್ಳುತ್ತಿರುವ ಕ್ಷಣ. (ಜೂನ್ 23, 2013 ಬರ್ಮಿಂಗ್ಹ್ಯಾಂ)
510
ಡರ್ಬನ್ನ ಮೋಸೆಸ್ ಮೊಬಿಡಾ ಸ್ಟೇಡಿಯಂನಲ್ಲಿ ಧೋನಿ ಫೋಟೋ ಜರ್ನಲಿಸ್ಟ್ವೊಬ್ಬರ ಕ್ಯಾಮರಾದಲ್ಲಿ ತಮ್ಮ ಕೌಶಲ್ಯವನ್ನು ಪ್ರದರ್ಶಿಸುತ್ತಿರುವ ಕ್ಷಣ(ಜನವರಿ 08, 2011 ದಕ್ಷಿಣ ಆಫ್ರಿಕಾ)
ಡರ್ಬನ್ನ ಮೋಸೆಸ್ ಮೊಬಿಡಾ ಸ್ಟೇಡಿಯಂನಲ್ಲಿ ಧೋನಿ ಫೋಟೋ ಜರ್ನಲಿಸ್ಟ್ವೊಬ್ಬರ ಕ್ಯಾಮರಾದಲ್ಲಿ ತಮ್ಮ ಕೌಶಲ್ಯವನ್ನು ಪ್ರದರ್ಶಿಸುತ್ತಿರುವ ಕ್ಷಣ(ಜನವರಿ 08, 2011 ದಕ್ಷಿಣ ಆಫ್ರಿಕಾ)
610
2011ರ ಏಕದಿನ ವಿಶ್ವಕಪ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಢಾಕಾದ ಬಂಗಬಂದು ಸ್ಟೇಡಿಯಂಗೆ ಟೀಂ ಇಂಡಿಯಾ ನಾಯಕ ಧೋನಿ ಸೈಕಲ್ ರಿಕ್ಷಾದಲ್ಲಿ ಪ್ರವೇಶ ಮಾಡುತ್ತಿರುವ ಕ್ಷಣ(ಫೆಬ್ರವರಿ 17, 2011 ಬಾಂಗ್ಲಾದೇಶ)
2011ರ ಏಕದಿನ ವಿಶ್ವಕಪ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಢಾಕಾದ ಬಂಗಬಂದು ಸ್ಟೇಡಿಯಂಗೆ ಟೀಂ ಇಂಡಿಯಾ ನಾಯಕ ಧೋನಿ ಸೈಕಲ್ ರಿಕ್ಷಾದಲ್ಲಿ ಪ್ರವೇಶ ಮಾಡುತ್ತಿರುವ ಕ್ಷಣ(ಫೆಬ್ರವರಿ 17, 2011 ಬಾಂಗ್ಲಾದೇಶ)
710
ಎಂ ಎಸ್ ಧೋನಿ ನೇತೃತ್ವದ ಟೀಂ ಇಂಡಿಯಾ ವಾಂಡರರ್ಸ್ ಕ್ರಿಕೆಟ್ ಮೈದಾನದಲ್ಲಿ ನಡದ ಚೊಚ್ಚಲ ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಮಣಿಸಿ ಚಾಂಪಿಯನ್ ಆದ ಕ್ಷಣ (ಸೆಪ್ಟೆಂಬರ್ 24, 2007 ಜೊಹಾನ್ಸ್ಬರ್ಗ್, ದಕ್ಷಿಣ ಆಫ್ರಿಕಾ)
ಎಂ ಎಸ್ ಧೋನಿ ನೇತೃತ್ವದ ಟೀಂ ಇಂಡಿಯಾ ವಾಂಡರರ್ಸ್ ಕ್ರಿಕೆಟ್ ಮೈದಾನದಲ್ಲಿ ನಡದ ಚೊಚ್ಚಲ ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಮಣಿಸಿ ಚಾಂಪಿಯನ್ ಆದ ಕ್ಷಣ (ಸೆಪ್ಟೆಂಬರ್ 24, 2007 ಜೊಹಾನ್ಸ್ಬರ್ಗ್, ದಕ್ಷಿಣ ಆಫ್ರಿಕಾ)
810
ವಾಂಖೆಡೆ ಮೈದಾನದಲ್ಲಿ 2011ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಧೋನಿ ಸಿಕ್ಸರ್ ಬಾರಿಸುವ ಮೂಲಕ ಸ್ಮರಣೀಯವಾಗಿ ದೇಶಕ್ಕೆ 28 ವರ್ಷಗಳ ಬಳಿಕ ಐಸಿಸಿ ಏಕದಿನ ವಿಶ್ವಕಪ್ ಗೆದ್ದ ಕ್ಷಣ. ಮತ್ತೊಂದು ತುದಿಯಲ್ಲಿ ಯುವರಾಜ್ ಸಿಂಗ್ ಕೂಡಾ ಈ ಸಂಭ್ರಮಿಸುತ್ತಿರುವುದು(ಏಪ್ರಿಲ್ 02, 2011 ಮುಂಬೈ)
ವಾಂಖೆಡೆ ಮೈದಾನದಲ್ಲಿ 2011ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಧೋನಿ ಸಿಕ್ಸರ್ ಬಾರಿಸುವ ಮೂಲಕ ಸ್ಮರಣೀಯವಾಗಿ ದೇಶಕ್ಕೆ 28 ವರ್ಷಗಳ ಬಳಿಕ ಐಸಿಸಿ ಏಕದಿನ ವಿಶ್ವಕಪ್ ಗೆದ್ದ ಕ್ಷಣ. ಮತ್ತೊಂದು ತುದಿಯಲ್ಲಿ ಯುವರಾಜ್ ಸಿಂಗ್ ಕೂಡಾ ಈ ಸಂಭ್ರಮಿಸುತ್ತಿರುವುದು(ಏಪ್ರಿಲ್ 02, 2011 ಮುಂಬೈ)
910
ಮರುದಿನ ಗೇಟ್ ವೇ ಆಫ್ ಇಂಡಿಯಾದ ಬ್ಯಾಕ್ಡ್ರಾಪ್ನಲ್ಲಿ ವಿಶ್ವಕಪ್ ಟ್ರೋಫಿಯೊಂದಿಗೆ ಫೋಸ್ ಕೊಡುತ್ತಿರುವ ಮಹಿ(ಏಪ್ರಿಲ್ 03, 2011 ಮುಂಬೈ)
ಮರುದಿನ ಗೇಟ್ ವೇ ಆಫ್ ಇಂಡಿಯಾದ ಬ್ಯಾಕ್ಡ್ರಾಪ್ನಲ್ಲಿ ವಿಶ್ವಕಪ್ ಟ್ರೋಫಿಯೊಂದಿಗೆ ಫೋಸ್ ಕೊಡುತ್ತಿರುವ ಮಹಿ(ಏಪ್ರಿಲ್ 03, 2011 ಮುಂಬೈ)
1010
2011ರ ಏಕದಿನ ವಿಶ್ವಕಪ್ ಗೆಲುವಿನ ಬಳಿಕ ಮುಂಬೈನ ವಾಂಖೆಡೆ ಮೈದಾನದಲ್ಲಿ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಮೇಲೆ ಧೋನಿ ವಿರಾಜಮಾನರಾಗಿ ಕುಳಿತ ಕ್ಷಣ.
2011ರ ಏಕದಿನ ವಿಶ್ವಕಪ್ ಗೆಲುವಿನ ಬಳಿಕ ಮುಂಬೈನ ವಾಂಖೆಡೆ ಮೈದಾನದಲ್ಲಿ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಮೇಲೆ ಧೋನಿ ವಿರಾಜಮಾನರಾಗಿ ಕುಳಿತ ಕ್ಷಣ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.