ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅಶುಭ ಎಂದವ್ರು ಎಲ್ಲಿದ್ದೀರಾ? RCB ಗೆಲುವಿಗೆ ಇವ್ರ ಕಾಲ್ಗುಣ ಕಾರಣ: ವೀರಕಪುತ್ರ

Published : Jun 01, 2026, 03:53 PM IST

17 ವರ್ಷಗಳಿಂದ RCB ಟ್ರೋಫಿ ಗೆಲ್ಲಲಿಲ್ಲ ಎಂಬ ಕೊರಗು ಇತ್ತು. ಆಮೇಲೆ ಕಳೆದ ವರ್ಷ ಆರ್‌ಸಿಬಿ ಜೆರ್ಸಿ ಉದ್ಘಾಟನೆಗೆ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಆಗಮಿಸಿದ್ದರು. ಆದರೆ ಕೆಲವರು ಮಾತ್ರ ಅಶ್ವಿನಿ ಅವರಿಗೆ ಪತಿ ಇಲ್ಲ, ಅಶುಭ ಅಂತೆಲ್ಲ ಮನಸ್ಸಿನಲ್ಲಿರುವ ಕೊಳಕನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಾಕಿದ್ದರು.

PREV
15
ಸತತ ಎರಡು ಬಾರಿ ಗೆಲುವು!

ಕಳೆದ ವರ್ಷ ಹಾಗೂ ಈ ವರ್ಷ ಆರ್‌ಸಿಬಿ ಬ್ಯಾಕ್‌ ಟು ಬ್ಯಾಕ್‌ ಟ್ರೋಫಿ ಗೆದ್ದಿದ್ದನ್ನು ಇಡೀ ದೇಶವೇ ನೋಡಿದೆ. ಈ ಬಗ್ಗೆ ಸಾಮಾಜಿಕ ಹೋರಾಟಗಾರ, ವೀರಕಪುತ್ರ ಶ್ರೀನಿವಾಸ್‌ ಅವರು ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ.

25
ವೀರಕಪುತ್ರ ಶ್ರೀನಿವಾಸ್‌ ಹೇಳಿದ್ದೇನು?

ಹೌದಲ್ವಾ… ಇದು ಮರೆತೇ ಹೋಗಿತ್ತು.

ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಹಿಂದೊಮ್ಮೆ ಆರ್ಸಿಬಿಯ ಅನ್ಬಾಕ್ಸ್ ಈವೆಂಟ್‌ನಲ್ಲಿ ಭಾಗವಹಿಸಿದ್ದಾಗ, ಕೆಲವರು ಅವರ ವಿಧವೆ ಪಟ್ಟವನ್ನು ಹಿಡಿದು ಅವಮಾನಿಸಿದ್ದರು. “ಈಕೆ ಬಂದರೆ ಅಶುಭ” ಎಂದುಬಿಟ್ಟಿದ್ದರು. ಅಂದು ಅದೆಷ್ಟು ನೊಂದುಬಿಟ್ಟಿತೋ ಆ ಜೀವ. ಹಾಗಂತ ಇದು ಇವರೊಬ್ಬರ ವಿಷಯವಲ್ಲ. ಯಾವ್ ಯಾವುದೋ ಕಾರಣಕ್ಕೆ ಗಂಡನನ್ನು ಕಳೆದುಕೊಂಡವರೆಲ್ಲರೂ ವಯಸ್ಸಿನ ಹಂಗಿಲ್ಲದೆ ಇಂತಹ ನೋವುಗಳಿಗೆ ಒಳಗಾಗಿಬಿಟ್ಟಿದ್ದಾರೆ. ಎಲ್ಲೋ ಯಾಕೆ? ನಮ್ಮ ಮನೆಗಳಲ್ಲೇ ಇಂತಹ ಆಚರಣೆಗಳು ಇನ್ನೂ ಜೀವಂತವಾಗಿವೆ.

35
ತಾಯಿಯಾದ್ರೂ ಅಶುಭ ಎನ್ನುತ್ತೇವೆ!

ಗಂಡನನ್ನು ಕಳೆದುಕೊಂಡವಳು ನಮ್ಮ ತಾಯಿಯೇ ಆಗಿದ್ದರೂ ಆಕೆಯನ್ನು ನಾವು 'ಅಶುಭ'ದ ಮುದ್ರೆ ಹೊತ್ತಿ ಹೊರಗಿಟ್ಟುಬಿಡುತ್ತೇವೆ. ಇನ್ನೂ ವಿಚಿತ್ರವೆಂದರೆ ತಾಯಿಗಿಂತ ದೇವರಿಲ್ಲ ಎಂದೆಲ್ಲಾ ಬಡಬಡಿಸುವ ನಾವು, ಗಂಡ ಸತ್ತ ತಕ್ಷಣ ಅದೇ ತಾಯಿಯನ್ನು ಆಚರಣೆಗಳಿಂದ, ಶುಭಕಾರ್ಯಗಳಿಂದ, ಬದುಕಿನ ಮಧ್ಯದಿಂದ ದೂರ ತಳ್ಳಿಬಿಡುತ್ತೇವೆ. ದೇವತೆ ಪಟ್ಟವನ್ನು ಸಿದ್ದರಾಮಯ್ಯನವರ ಪಟ್ಟ ಬದಲಾದಷ್ಟು ಸಲೀಸಾಗಿ ಬದಲಾಯಿಸಿಬಿಡುತ್ತೇವೆ. ಅಂದರೆ ಆಕೆ ದೇವತೆಯಾಗಿರುವುದು ಗಂಡನಿದ್ದಾಗ ಮಾತ್ರವೇನಾ? ಗಂಡನಿಲ್ಲದಿದ್ದರೆ ಆಕೆಗೆ ಘನತೆಯೇ ಇಲ್ಲವೇ? ನೋಡಿ, ಎಷ್ಟು ಸೂಕ್ಷ್ಮವಾಗಿ, ಗಂಡಸ್ತನವನ್ನು ನಮ್ಮ ನಂಬಿಕೆಗಳೊಳಗೆ ಹೊಕ್ಕಿಸಿಬಿಟ್ಟಿದ್ದೇವೆ.

45
RCB 2 ಬಾರಿ ಕಪ್‌ ಗೆದ್ದಿದೆ

ಆದರೆ ಕೆಲವು ಸತ್ಯಗಳು ತಲೆಮೇಲೆ ಹೊಡೆದ್ಹಂಗೆ ನಮಗೆ ಎದುರಾಗಿಬಿಡುತ್ತವೆ. ನಾವು ಅವುಗಳನ್ನು ನಿರಾಕರಿಸಲು ಆಗುವುದೇ ಇಲ್ಲ. ಅಶ್ವಿನಿ ಮೇಡಂ ಕಾಲಿಟ್ಟ ನಂತರ ಹದಿನೇಳು ವರ್ಷ ಮರೀಚಿಕೆಯಾಗಿದ್ದ ಆರ್ಸಿಬಿ ಕನಸು ಸಾಕಾರಗೊಂಡಿದೆ. ಒಂದಲ್ಲ ಎರಡು ಸಲ ಆರ್ಸಿಬಿ ಕಪ್ ಗೆದ್ದು ಬೀಗಿದೆ. ಇದು ಕೇವಲ ಕ್ರಿಕೆಟ್ ಜಯವಲ್ಲ ಮೂಢನಂಬಿಕೆಗಳ ಮೇಲಿನ ಗೆಲುವೂ ಹೌದು.

55
ಆರ್ಸಿಬಿಯ ಗೆಲುವಿಗೆ ನಿಮ್ಮ ಕಾಲ್ಗುಣವೂ ಕಾರಣ

ಒಬ್ಬ ಮಹಿಳೆಯ ಮೌಲ್ಯ ಅವಳ ಮಂಗಳಸೂತ್ರದಲ್ಲಿಲ್ಲ ಅನ್ನೋದು ನಮಗೆ ಅದ್ಯಾವಾಗ ಅರ್ಥವಾಗುತ್ತೋ ಕಾಣೆ. ಮದುವೆ, ವಿಧವೆ, ಶುಭ, ಅಶುಭ… ಇವೆಲ್ಲಾ ನಾವು ಕಟ್ಟಿಕೊಂಡ ಕಥೆಗಳು. ಆ ಎಲ್ಲದರಾಚೆ, ಆಕೆಯೂ ನಮ್ಮ ನಿಮ್ಮಂತೆಯೇ ಒಂದು ಜೀವ ಅಥವಾ ನಮಗಿಂತ ಚೂರು ಹೆಚ್ಚೇ ತೂಕದ ಜೀವ ಅನ್ನೋದು ಅರ್ಥವಾದರೆ ಅದಕ್ಕಿಂತ ಹೆಚ್ಚಿನ ಉಪಕಾರ ಆಕೆಗೆ ನಾವೇನು ಮಾಡಬೇಕಿಲ್ಲ.

ಥ್ಯಾಂಕ್ಯೂ ಅಶ್ವಿನಿ ಮೇಡಂ…

ಆರ್ಸಿಬಿಯ ಗೆಲುವಿಗೆ ನಿಮ್ಮ ಕಾಲ್ಗುಣವೂ ಕಾರಣ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories