Ind vs Zim: ಟೀಮ್ ಇಂಡಿಯಾದಲ್ಲಿ ಮೇಜರ್ ಸರ್ಜರಿ! 6 ಮಂದಿ ಔಟ್‌! ಜಿಂಬಾಬ್ವೆ ವಿರುದ್ಧ ಎಂಟ್ರಿ ಕೊಡಲಿದ್ದಾರೆ ಹೊಸ ಶೂಟರ್ಸ್‌!

Published : Jul 22, 2026, 08:56 PM IST

ಟಿ20 ವಿಶ್ವಕಪ್ ಗೆದ್ದ ನಂತರ ಸತತ ಸೋಲು ಕಂಡಿರುವ ಭಾರತ ತಂಡ, ಜಿಂಬಾಬ್ವೆ ಪ್ರವಾಸದ ಮೂಲಕ ಗೆಲುವಿನ ಹಾದಿಗೆ ಮರಳಲು ಸಜ್ಜಾಗಿದೆ. ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಹಲವು ಹಿರಿಯರಿಗೆ ವಿಶ್ರಾಂತಿ ನೀಡಿ,ಯುವ ಆಟಗಾರರಿಗೆ ಅವಕಾಶ ನೀಡಲಾಗಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

PREV
16
ಸಾಲು-ಸಾಲು ಸೋಲು!

ಮಾರ್ಚ್‌ನಲ್ಲಿ ನಡೆದ ಟಿ20 ವಿಶ್ವಕಪ್ ಗೆದ್ದು ಬೀಗಿದ್ದ ಟೀಮ್ ಇಂಡಿಯಾಗೆ ಆ ನಂತರದ ದಿನಗಳು ಅಷ್ಟೇನೂ ಶುಭಕರವಾಗಿರಲಿಲ್ಲ. ವಿಶ್ವಕಪ್ ಗೆದ್ದ ದಿನದಿಂದ ಹಿಡಿದು ಇದುವರೆಗೆ ಭಾರತ ತಂಡ ಒಂದೇ ಒಂದು ಟಿ20 ಪಂದ್ಯವನ್ನೂ ಗೆಲ್ಲಲು ಸಾಧ್ಯವಾಗಿಲ್ಲ. ಐರ್ಲೆಂಡ್ ವಿರುದ್ಧ 2-0 ಅಂತರದ ಸೋಲು ಹಾಗೂ ಇಂಗ್ಲೆಂಡ್ ವಿರುದ್ಧ 4-0 ಅಂತರದ ಮುಖಭಂಗ ಅನುಭವಿಸಿದ್ದ ಭಾರತ ತಂಡ, ಜಿಂಬಾಬ್ವೆ ಪ್ರವಾಸದ ಮೂಲಕ ಮತ್ತೆ ಗೆಲುವಿನ ಹಾದಿಗೆ ಮರಳಲು ಭರ್ಜರಿ ತಾಲೀಮು ನಡೆಸುತ್ತಿದೆ.

26
ಶ್ರೇಯಸ್ ಅಯ್ಯರ್ ಖಾತೆಗೆ ಅಪರೂಪದ ಕಹಿ ದಾಖಲೆ!

ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ನಾಯಕನಾಗಿ ತಾನು ಮುನ್ನಡೆಸಿದ ಮೊದಲ 7 ಟಿ20 ಪಂದ್ಯಗಳಲ್ಲಿ ಒಂದನ್ನೂ ಗೆಲ್ಲದ ಮೊದಲ ನಾಯಕ ಎಂಬ ಅನಗತ್ಯ ದಾಖಲೆ ಶ್ರೇಯಸ್ ಅಯ್ಯರ್ ಹೆಸರಿಗೆ ಸೇರಿದೆ. ಹೀಗಾಗಿ, ಜುಲೈ 23 ರಿಂದ ಆರಂಭವಾಗಲಿರುವ ಜಿಂಬಾಬ್ವೆ ವಿರುದ್ಧದ ಚೊಚ್ಚಲ ಪಂದ್ಯದಲ್ಲೇ ಗೆಲುವು ಸಾಧಿಸಿ, ತಮ್ಮ ಮೇಲಿರುವ ಕಳಂಕವನ್ನು ತೊಳೆದುಕೊಳ್ಳಲು ಅಯ್ಯರ್ ಕಾಯುತ್ತಿದ್ದಾರೆ.

36
ಜಿಂಬಾಬ್ವೆ ವಿರುದ್ಧದ ಪಂದ್ಯಗಳ ವೇಳಾಪಟ್ಟಿ!

ಭಾರತ ಮತ್ತು ಜಿಂಬಾಬ್ವೆ ನಡುವೆ ಒಟ್ಟು 3 ಟಿ20 ಪಂದ್ಯಗಳು ನಡೆಯಲಿದ್ದು, ಎಲ್ಲಾ ಪಂದ್ಯಗಳಿಗೂ ಹರಾರೆ ಕ್ರಿಕೆಟ್ ಮೈದಾನ ಆತಿಥ್ಯ ವಹಿಸಲಿದೆ.

ಮೊದಲ ಪಂದ್ಯ: ಜುಲೈ 23 (ಗುರುವಾರ)

ಎರಡನೇ ಪಂದ್ಯ: ಜುಲೈ 25 (ಶನಿವಾರ)

ಮೂರನೇ ಪಂದ್ಯ: ಜುಲೈ 26 (ಭಾನುವಾರ)

ಪಂದ್ಯದ ಸಮಯ: ಎಲ್ಲಾ ಮೂರೂ ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 4:30 ಕ್ಕೆ ಆರಂಭವಾಗಲಿದ್ದು, ಸಂಜೆ 4:00 ಗಂಟೆಗೆ ಟಾಸ್ ನಡೆಯಲಿದೆ.

46
ತಂಡದಿಂದ 6-7 ಪ್ರಮುಖರಿಗೆ ಹೊರಬಾಗಿಲು, ಯುವಕರಿಗೆ ಚಾನ್ಸ್!

ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾದ ಏಳು ಆಟಗಾರರನ್ನು ಜಿಂಬಾಬ್ವೆ ಪ್ರವಾಸದಿಂದ ಸಂಪೂರ್ಣವಾಗಿ ಹೊರಗಿಡಲಾಗಿದೆ.ಹೊರಗುಳಿದ ಪ್ರಮುಖ ಆಟಗಾರರು: ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ ಮತ್ತು ವರುಣ್ ಚಕ್ರವರ್ತಿ.

56
ಹಿರಿಯ ಆಟಗಾರರಿಗೆ ವಿಶ್ರಾಂತಿ!

ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು, ದೇಶಿಯ ಕ್ರಿಕೆಟ್ ಮತ್ತು ಐಪಿಎಲ್‌ನಲ್ಲಿ ಮಿಂಚಿದ ಯುವ ರಕ್ತಕ್ಕೆ ಭಾರತೀಯ ಆಯ್ಕೆ ಸಮಿತಿ ಮಣೆ ಹಾಕಿದೆ. ಸಿಡಿಲಸದೃಶ ಬ್ಯಾಟಿಂಗ್‌ಗೆ ಹೆಸರಾದ ರಿಂಕು ಸಿಂಗ್ ಮತ್ತು ವೇಗಿ ಮಾಯಾಂಕ್ ಯಾದವ್ ಮತ್ತೆ ಭಾರತ ತಂಡಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಜೊತೆಗೆ ಐಪಿಎಲ್ ತಾರೆ ಪ್ರಭಸಿಮ್ರನ್ ಸಿಂಗ್ ಅವರಿಗೂ ಕೂಡ ಚೊಚ್ಚಲ ಅವಕಾಶ ನೀಡಲಾಗಿದೆ.

66
ಜಿಂಬಾಬ್ವೆ ಪ್ರವಾಸಕ್ಕೆ ಭಾರತ T20I ತಂಡ!

ಶ್ರೇಯಸ್ ಅಯ್ಯರ್ (ನಾಯಕ), ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಇಶಾನ್ ಕಿಶನ್, ಶಿವಂ ದುಬೆ, ಸೂರ್ಯಾಂಶ್ ಶೆಡ್ಗೆ, ರಿಂಕು ಸಿಂಗ್, ಹರ್ಷ್ ದುಬೆ, ರವಿ ಬಿಷ್ಣೋಯ್, ಪ್ರಿನ್ಸ್ ಯಾದವ್, ಮಾಯಾಂಕ್ ಯಾದವ್, ಯಶ್ ದಯಾಳ್, ಪ್ರಭಸಿಮ್ರನ್ ಸಿಂಗ್. ನಿರಂತರ ಸೋಲುಗಳಿಂದ ಕಂಗೆಟ್ಟಿರುವ ಯಂಗ್ ಇಂಡಿಯಾ, ಜಿಂಬಾಬ್ವೆ ಮಣ್ಣಿನಲ್ಲಿ ಕಂಬ್ಯಾಕ್ ಮಾಡಿ ಹೊಸ ಇತಿಹಾಸ ಬರೆಯುತ್ತದೆಯೇ ಎಂದು ಕಾದು ನೋಡಬೇಕಿದೆ!

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories