ಇಂಗ್ಲೆಂಡ್ ವಿರುದ್ಧ ಸೇಡು ತೀರಿಸಿಕೊಳ್ಳಲು ಭಾರತಕ್ಕಿದೆ ಒಂದು ಅವಕಾಶ; ಬಲಿಷ್ಠರ ಮೇಲೆ ಭರವಸೆ

Published : Jul 12, 2026, 10:54 AM IST

ಇಂಗ್ಲೆಂಡ್ ವಿರುದ್ಧದ T20I ಸರಣಿಯಲ್ಲಿ ಸೋತ ಬಳಿಕ ಟೀಂ ಇಂಡಿಯಾ ಏಕದಿನ ಸರಣಿಗೆ ಸಜ್ಜಾಗಿದೆ. ತಂಡದ ಆತ್ಮವಿಶ್ವಾಸ ಹೆಚ್ಚಿಸಲು ಅನುಭವಿ ಆಟಗಾರರಾದ ಬರಲಿದ್ದಾರೆ. ಈ ಬಲಿಷ್ಠ ಆಟಗಾರರ ಆಗಮನದಿಂದ ತಂಡವು ಸೋಲಿಗೆ ಸೇಡು ತೀರಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.

PREV
16
T20I ಸೋಲು

ಸತತ ಎರಡನೇ T20I ಸೋಲು ಅನುಭವಿಸಿರುವ ಟೀಂ ಇಂಡಿಯಾ ಕಂ ಬ್ಯಾಕ್ ಮಾಡಲು ಸಿದ್ಧತೆ ಮಾಡಿಕೊಳ್ಳಬೇಕಿದೆ. ಈ ಸೋಲಿಗೆ ಸೇಡು ತೀರಿಸಿಕೊಳ್ಳಲು ಇಬ್ಬರು ಬಲಿಷ್ಠ ಆಟಗಾರರು ಬರಬೇಕಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಒಂದು ವೇಳೆ ಇವರಿಬ್ಬರ ಆಗಮನ ತಂಡದ ಆತ್ಮವಿಶ್ವಾಸ ಹೆಚ್ಚಳವಾಗುವ ಸಾಧ್ಯತೆಗಳಿವೆ.

26
ಇಂಗ್ಲೆಂಡ್ ವಿರುದ್ಧವೂ ಟೀಂ ಇಂಡಿಯಾಗೆ ಸೋಲು

ಐರ್ಲೆಂಡ್ ಸೋಲಿನ ಬಳಿಕ ಇಂಗ್ಲೆಂಡ್ ವಿರುದ್ಧವೂ ಟೀಂ ಇಂಡಿಯಾಗೆ ಸೋಲಾಯ್ತು. ಇಂಗ್ಲೆಂಡ್ ಐದು ಪಂದ್ಯಗಳ ಟಿ 20 ಐ ಸರಣಿಯನ್ನು 4-0 ಅಂತರದಿಂದ ಗೆದ್ದಿದೆ. ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು, ಆದರೆ ಉಳಿದ ನಾಲ್ಕು ಪಂದ್ಯಗಳಲ್ಲಿಯೂ ಭಾರತಕ್ಕೆ ಹತಾಶೆಯುಂಟಾಗುತ್ತದೆ. ಆದ್ರೆ ಈ ಇಬ್ಬರು ಆಟಗಾರು ಅಂತರರಾಷ್ಟ್ರೀಯ ಮತ್ತು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತಕ್ಕೆ ಸೋಲು ಆಗಲ್ಲ.

36
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ

ಟಿಟ್ವೆಂಟಿಯ ಸೋಲಿನ ನಂತ್ರ ಟೀಂ ಇಂಡಿಯಾ ಫ್ಯಾನ್ಸ್, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಮೇಲೆ ಭರವಸೆ ಇಟ್ಟಿದ್ದಾರೆ. ದೀರ್ಘಕಾಲದ ಗ್ಯಾಪ್ ನಂತ್ರ ಇಬ್ಬರು ಆಟಗಾರರು ಬ್ಲ್ಯೂ ಜೆರ್ಸಿಯಲ್ಲಿ ಜೊತೆಯಾಗಿ ಆಟವಾಡಲಿದ್ದಾರೆ. ಇವರಿಬ್ಬರ ಅನುಭವ ಟೀ ಇಂಡಿಯಾಗೆ ಲಾಭವಾಗಲಿದೆ.

46
ದಾಖಲೆಯ ಅನುಭವ

ಆರಂಭಿಕರಾಗಿ ರೋಹಿತ್ ಶರ್ಮಾ ಕಣಕ್ಕಿಳಿಸಿದ್ರೆ, ಇಂಗ್ಲೆಂಡ್ ಬೌಲರ್‌ಗಳನ್ನು ಮಣಿಸಲಿದ್ದಾರೆ. ಇವರ ಜೊತೆಯಲ್ಲಿಯೇ ವಿರಾಟ್ ಕೊಹ್ಲಿ ಅಂಗಳಕ್ಕಿಳಿದ್ರೆ ಇವರನ್ನು ತಡೆಯೋದು ಆಂಗ್ಲ ಬೌಲರ್‌ಗಳಿಗೆ ಕಷ್ಟಕರವಾಗಲಿದೆ. ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಹಿಂದಿನ ದಾಖಲೆಯ ಅನುಭವಗಳು ತಂಡಕ್ಕೆ ನೆರವಾಗಲಿವೆ.

56
ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ

ರೋಹಿತ್ ಮತ್ತು ವಿರಾಟ್ ಮಾತ್ರವಲ್ಲದೆ, ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ತಂಡಕ್ಕೆ ಮರಳಿರುವುದು ಕೂಡ ಭಾರತ ತಂಡಕ್ಕೆ ದೊಡ್ಡ ಸಮಾಧಾನ ತಂದಿದೆ. ನಾಯಕ ಶುಭ್‌ಮನ್ ಗಿಲ್, ಉಪನಾಯಕ ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ಅವರಂತಹ ಆಟಗಾರರಿಂದ ಉತ್ತಮ ಪ್ರದರ್ಶನವನ್ನು ನಿರೀಕ್ಷಿಸಬಹುದಾಗಿದೆ.

66
ಏಕದಿನ ಸರಣಿಗೆ ಭಾರತ ತಂಡ

ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಿವಂ ದುಬೆ, ಕುಲದೀಪ್ ಬೂಮ್ರಾ, ಜಸ್ಪ್ರಿತ್ ಯಾದವ್, ಜಸ್ಪ್ರಿತ್ ಬೂಮ್ರಾ ಸಿಂಗ್, ಗುರ್ನೂರ್ ಬ್ರಾರ್.

ವೇಳಾಪಟ್ಟಿ

ಜುಲೈ 14: ಮೊದಲ ಏಕದಿನ ಪಂದ್ಯ, ಎಡ್ಜ್‌ಬಾಸ್ಟನ್ (ಬರ್ಮಿಂಗ್ಹ್ಯಾಮ್) - ಮಧ್ಯಾಹ್ನ 3:30

ಜುಲೈ 16: ಎರಡನೇ ಏಕದಿನ ಪಂದ್ಯ, ಸೋಫಿಯಾ ಗಾರ್ಡನ್ಸ್ (ಕಾರ್ಡಿಫ್) - ಸಂಜೆ 5:30

ಜುಲೈ 19: ಮೂರನೇ ಏಕದಿನ ಪಂದ್ಯ, ಲಾರ್ಡ್ಸ್ (ಲಂಡನ್) - ಮಧ್ಯಾಹ್ನ 3:30

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories