ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 5 ಟೆಸ್ಟ್ ಪಂದ್ಯಗಳನ್ನಾಡಿತ್ತು. ಮೊದಲ ಪಂದ್ಯದಲ್ಲಿ ಗೆದ್ದ ಭಾರತ, ಮುಂದಿನ 3 ಪಂದ್ಯಗಳಲ್ಲಿ ಸೋತಿತ್ತು. ರೋಹಿತ್, ಕೊಹ್ಲಿ ಸೇರಿದಂತೆ ತಂಡದ ಕಳಪೆ ಪ್ರದರ್ಶನ ಸೋಲಿಗೆ ಕಾರಣ. ರೋಹಿತ್ ಹೆಚ್ಚು ರನ್ ಗಳಿಸಲಿಲ್ಲ. ನಾಯಕತ್ವದಲ್ಲೂ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳದ ಕಾರಣ ಕೊನೆಯ ಟೆಸ್ಟ್ನಿಂದ ಅವರನ್ನು ಕೈಬಿಡಲಾಗಿತ್ತು. ರೋಹಿತ್ ನಿವೃತ್ತಿ ಬಗ್ಗೆ ವದಂತಿಗಳಿದ್ದರೂ, ಅದನ್ನು ಅವರು ಅಲ್ಲಗಳೆದಿದ್ದಾರೆ.