ಸುನಿಲ್ ಗವಾಸ್ಕರ್ ಮೇಲೆ ರೋಹಿತ್ ಶರ್ಮಾ ಗರಂ; ಬಿಸಿಸಿಐಗೆ ಕಂಪ್ಲೆಂಟ್ ಕೊಟ್ರಾ ಹಿಟ್‌ಮ್ಯಾನ್?

Published : Jan 29, 2025, 03:39 PM IST

ಹಿಟ್​ಮ್ಯಾನ್​ ರೋಹಿತ್​ ಶರ್ಮಾ ಮಾಜಿ ನಾಯಕ ಸುನಿಲ್​ ಗವಾಸ್ಕರ್​ ವಿರುದ್ಧ ಬಿಸಿಸಿಐಗೆ ದೂರು ನೀಡಿದ್ದಾರಂತೆ. ಏನಿದು ವಿಷಯ?

PREV
15
ಸುನಿಲ್ ಗವಾಸ್ಕರ್ ಮೇಲೆ ರೋಹಿತ್ ಶರ್ಮಾ ಗರಂ; ಬಿಸಿಸಿಐಗೆ ಕಂಪ್ಲೆಂಟ್ ಕೊಟ್ರಾ ಹಿಟ್‌ಮ್ಯಾನ್?

ಬಾರ್ಡರ್​-ಗವಾಸ್ಕರ್​ ಟ್ರೋಫಿ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 5 ಟೆಸ್ಟ್​ ಪಂದ್ಯಗಳನ್ನಾಡಿತ್ತು. ಮೊದಲ ಪಂದ್ಯದಲ್ಲಿ ಗೆದ್ದ ಭಾರತ, ಮುಂದಿನ 3 ಪಂದ್ಯಗಳಲ್ಲಿ ಸೋತಿತ್ತು. ರೋಹಿತ್​, ಕೊಹ್ಲಿ ಸೇರಿದಂತೆ ತಂಡದ ಕಳಪೆ ಪ್ರದರ್ಶನ ಸೋಲಿಗೆ ಕಾರಣ. ರೋಹಿತ್​ ಹೆಚ್ಚು ರನ್​ ಗಳಿಸಲಿಲ್ಲ. ನಾಯಕತ್ವದಲ್ಲೂ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳದ ಕಾರಣ ಕೊನೆಯ ಟೆಸ್ಟ್​ನಿಂದ ಅವರನ್ನು ಕೈಬಿಡಲಾಗಿತ್ತು. ರೋಹಿತ್​ ನಿವೃತ್ತಿ ಬಗ್ಗೆ ವದಂತಿಗಳಿದ್ದರೂ, ಅದನ್ನು ಅವರು ಅಲ್ಲಗಳೆದಿದ್ದಾರೆ.

25

ಆಸೀಸ್​ ವಿರುದ್ಧ ಸೋಲಿನ ಬಳಿಕ ಅಭಿಮಾನಿಗಳು, ಮಾಜಿ ಕ್ರಿಕೆಟಿಗರು ರೋಹಿತ್​ ಅವರನ್ನು ಟೀಕಿಸಿದ್ದರು. ಗವಾಸ್ಕರ್​ ಕೂಡಾ ರೋಹಿತ್​ ಬ್ಯಾಟಿಂಗ್​ ಬಗ್ಗೆ ಟೀಕೆ ಮಾಡಿದ್ದರು. "ರೋಹಿತ್​ ಫಾರ್ಮ್​ ಕಳೆದುಕೊಂಡಿದ್ದಾರೆ. ತಂಡದ ಹಿತಕ್ಕಾಗಿ ಬೇರೆಯವರು ನಾಯಕತ್ವ ವಹಿಸಬೇಕು. ಬುಮ್ರಾ ಉತ್ತಮ ನಾಯಕರಾಗಬಹುದಿತ್ತು" ಎಂದಿದ್ದರು.

35

ರೋಹಿತ್​ ಮತ್ತು ಕೊಹ್ಲಿ ರಣಜಿಯಲ್ಲಿ ಆಡಬೇಕು, ಇಲ್ಲದಿದ್ದರೆ ಬಿಸಿಸಿಐ ಕ್ರಮ ಕೈಗೊಳ್ಳಬೇಕು ಎಂದು ಗವಾಸ್ಕರ್​ ಹೇಳಿದ್ದರು. ಟೀಂ ಇಂಡಿಯಾ ಬಗ್ಗೆಯೂ ಅವರು ಟೀಕೆ ಮಾಡಿದ್ದರು. ಇದರಿಂದ ರೋಹಿತ್​ ಗವಾಸ್ಕರ್​ ವಿರುದ್ಧ ಬಿಸಿಸಿಐಗೆ ದೂರು ನೀಡಿದ್ದಾರೆ ಎನ್ನಲಾಗಿದೆ.

45

ಸುನಿಲ್ ಗವಾಸ್ಕರ್​ ಟೀಕೆಗಳಿಂದ ತನಗೆ ಒತ್ತಡ ಉಂಟಾಗಿದೆ ಎಂದು ರೋಹಿತ್ ಶರ್ಮಾ​ ಬಿಸಿಸಿಐ ಅಧಿಕಾರಿಗಳಿಗೆ ತಿಳಿಸಿದ್ದಾರಂತೆ

55
ರೋಹಿತ್​ ಶರ್ಮಾ

ಬಿಸಿಸಿಐ ಎಲ್ಲಾ ಆಟಗಾರರು ದೇಶಿ ಕ್ರಿಕೆಟ್​ ಆಡಬೇಕೆಂದು ಸೂಚಿಸಿದ ಬಳಿಕ ರೋಹಿತ್​ ರಣಜಿಯಲ್ಲಿ ಮುಂಬೈ ಪರ ಆಡಿದ್ದರು. ಆದರೆ, ಜಮ್ಮು ಮತ್ತು ಕಾಶ್ಮೀರ ವಿರುದ್ಧದ ಪಂದ್ಯದಲ್ಲಿ ಕೇವಲ 31 ರನ್​ ಗಳಿಸಿದ್ದರು. ಎರಡೂ ಇನ್ನಿಂಗ್ಸ್​ಗಳಲ್ಲಿ ಕೇವಲ 3 ಮತ್ತು 28 ರನ್​ ಗಳಿಸಿದ್ದರು. ಯಶಸ್ವಿ ಜೈಸ್ವಾಲ್​, ಶ್ರೇಯಸ್​ ಅಯ್ಯರ್​ ಕೂಡಾ ರನ್​ ಗಳಿಸಲು ವಿಫಲರಾಗಿದ್ದರು. ಜಮ್ಮು ವಿರುದ್ಧ ಮುಂಬೈ ಸೋತಿತ್ತು.

Read more Photos on
click me!

Recommended Stories