ದುಬೈಗೆ ಹಾರಲು ರೆಡಿಯಾದ ಧೋನಿ ಬೆಳೆದ ತರಕಾರಿಗಳು..!

Suvarna News   | Asianet News
Published : Jan 02, 2021, 04:33 PM IST

ರಾಂಚಿ: ಟೀಂ ಇಂಡಿಯಾ ಮಾಜಿ ನಾಯಕ ಎಂ. ಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಕೃಷಿಯತ್ತ ಮುಖಮಾಡಿರುವುದು ಎಲ್ಲರಿಗೂ ಗೊತ್ತೇ ಇದೆ. ಕೆಲ ದಿನಗಳ ಹಿಂದಷ್ಟೇ ಕಡಕ್‌ನಾಥ್ ಕೋಳಿ ಸಾಕಾಣಿಕೆಯನ್ನು ಧೋನಿ ಆರಂಭಿಸಿದ್ದರು. ಆದರೆ ಇದೀಗ ಹೊಸ ವಿಷಯ ಏನಪ್ಪಾ ಅಂದ್ರೆ, ಧೋನಿ ತಮ್ಮ ತೋಟದಲ್ಲಿ ಬೆಳೆದ ಬೆಳೆಗಳನ್ನು ದುಬೈಗೆ ಕಳಿಸಲು ಮುಂದಾಗಿದ್ದಾರೆ. ಈ ಕುರಿತಂತೆ ಮಾತುಕತೆ ನಡೆಯುತ್ತಿದೆ. ಅಷ್ಟಕ್ಕೂ ಧೋನಿ ತಮ್ಮ ಫಾರ್ಮ್‌ನಲ್ಲಿ ಏನೆಲ್ಲಾ ಬೆಳೆದಿದ್ದಾರೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.  

PREV
18
ದುಬೈಗೆ ಹಾರಲು ರೆಡಿಯಾದ ಧೋನಿ ಬೆಳೆದ ತರಕಾರಿಗಳು..!

ಮಹೇಂದ್ರ ಸಿಂಗ್ ಧೋನಿ ಕೃಷಿ ಮೇಲಿನ ಪ್ರೀತಿಯ ಬಗ್ಗೆ ಯಾರಿಗೂ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
 

ಮಹೇಂದ್ರ ಸಿಂಗ್ ಧೋನಿ ಕೃಷಿ ಮೇಲಿನ ಪ್ರೀತಿಯ ಬಗ್ಗೆ ಯಾರಿಗೂ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
 

28

ಇದೀಗ ಎಂ ಎಸ್‌ ಧೋನಿ ಹೌಸ್‌ನಲ್ಲಿ ಬೆಳೆದ ತರಕಾರಿಗಳನ್ನು ವಿದೇಶಕ್ಕೆ ರಫ್ತು ಮಾಡಲು ಸಿದ್ದತೆಗಳು ನಡೆಯುತ್ತಿವೆ.

ಇದೀಗ ಎಂ ಎಸ್‌ ಧೋನಿ ಹೌಸ್‌ನಲ್ಲಿ ಬೆಳೆದ ತರಕಾರಿಗಳನ್ನು ವಿದೇಶಕ್ಕೆ ರಫ್ತು ಮಾಡಲು ಸಿದ್ದತೆಗಳು ನಡೆಯುತ್ತಿವೆ.

38

ಧೋನಿ ಫಾರ್ಮ್‌ ಹೌಸ್‌ನಲ್ಲಿ ಬೆಳೆದ ತರಕಾರಿಗಳ ಮಾರಾಟಕ್ಕೆ ಸಂಬಂಧಿಸಿದಂತೆ ಮಾತುಕತೆಗಳು ಅಂತಿಮ ಹಂತದಲ್ಲಿವೆ ಎಂದು ವರದಿಯಾಗಿದೆ.

ಧೋನಿ ಫಾರ್ಮ್‌ ಹೌಸ್‌ನಲ್ಲಿ ಬೆಳೆದ ತರಕಾರಿಗಳ ಮಾರಾಟಕ್ಕೆ ಸಂಬಂಧಿಸಿದಂತೆ ಮಾತುಕತೆಗಳು ಅಂತಿಮ ಹಂತದಲ್ಲಿವೆ ಎಂದು ವರದಿಯಾಗಿದೆ.

48

ಜಾರ್ಖಂಡ್‌ನ ಕೃಷಿ ಇಲಾಖೆ ಧೋನಿ ಬೆಳೆದ ಹಣ್ಣು ಹಾಗೂ ತರಕಾರಿಗಳನ್ನು ದುಬೈಗೆ ಕಳಿಸಿಕೊಡುವ ವಿಚಾರದಲ್ಲಿ ಏಜೆನ್ಸಿಗಳ ಜತೆ ಮಾತುಕತೆ ನಡೆಸುತ್ತಿದೆ.

ಜಾರ್ಖಂಡ್‌ನ ಕೃಷಿ ಇಲಾಖೆ ಧೋನಿ ಬೆಳೆದ ಹಣ್ಣು ಹಾಗೂ ತರಕಾರಿಗಳನ್ನು ದುಬೈಗೆ ಕಳಿಸಿಕೊಡುವ ವಿಚಾರದಲ್ಲಿ ಏಜೆನ್ಸಿಗಳ ಜತೆ ಮಾತುಕತೆ ನಡೆಸುತ್ತಿದೆ.

58

ಎಂ ಎಸ್ ಧೋನಿ ಫಾರ್ಮ್‌ ಹೌಸ್ ಸುಮಾರು 43 ಎಕರೆಯಷ್ಟಿದ್ದು, ಈ ಪೈಕಿ 10 ಎಕರೆ ಜಾಗದಲ್ಲಿ ಧೋನಿ ತರಕಾರಿ ಹಾಗೂ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ.

ಎಂ ಎಸ್ ಧೋನಿ ಫಾರ್ಮ್‌ ಹೌಸ್ ಸುಮಾರು 43 ಎಕರೆಯಷ್ಟಿದ್ದು, ಈ ಪೈಕಿ 10 ಎಕರೆ ಜಾಗದಲ್ಲಿ ಧೋನಿ ತರಕಾರಿ ಹಾಗೂ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ.

68

ಧೋನಿ 10 ಎಕರೆ ಪ್ರದೇಶದಲ್ಲಿ ಸ್ಟ್ರಾಬೆರಿ, ಎಲೆಕೋಸ್, ಕೋಸುಗೆಡ್ಡೆ, ಬಟಾಣಿ, ಪಪ್ಪಾಯ, ಟಮ್ಯಾಟೋ ಮುಂತಾದ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

ಧೋನಿ 10 ಎಕರೆ ಪ್ರದೇಶದಲ್ಲಿ ಸ್ಟ್ರಾಬೆರಿ, ಎಲೆಕೋಸ್, ಕೋಸುಗೆಡ್ಡೆ, ಬಟಾಣಿ, ಪಪ್ಪಾಯ, ಟಮ್ಯಾಟೋ ಮುಂತಾದ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

78

ವಿದೇಶಕ್ಕೆ ಧೋನಿ ಬೆಳೆದ ತರಕಾರಿಗಳು ರಫ್ತಾಗುವುದರ ಜತೆಗೆ ಜಾರ್ಖಂಡ್‌ನ ರೈತರಿಗೂ ವಿದೇಶದಲ್ಲಿ ಮಾರುಕಟ್ಟೆ ಲಭ್ಯವಾದಂತೆ ಆಗಲಿದೆ.

ವಿದೇಶಕ್ಕೆ ಧೋನಿ ಬೆಳೆದ ತರಕಾರಿಗಳು ರಫ್ತಾಗುವುದರ ಜತೆಗೆ ಜಾರ್ಖಂಡ್‌ನ ರೈತರಿಗೂ ವಿದೇಶದಲ್ಲಿ ಮಾರುಕಟ್ಟೆ ಲಭ್ಯವಾದಂತೆ ಆಗಲಿದೆ.

88

ಈ ಹಿಂದೆ ಧೋನಿ ಕಡಕ್‌ನಾಥ್ ಕೋಳಿ ಸಾಕಾಣಿಕೆ ಸುದ್ದಿಯೂ ಸಾಕಷ್ಟು ವೈರಲ್ ಆಗಿದ್ದನ್ನು ಸ್ಮರಿಸಬಹುದಾಗಿದೆ. 

ಈ ಹಿಂದೆ ಧೋನಿ ಕಡಕ್‌ನಾಥ್ ಕೋಳಿ ಸಾಕಾಣಿಕೆ ಸುದ್ದಿಯೂ ಸಾಕಷ್ಟು ವೈರಲ್ ಆಗಿದ್ದನ್ನು ಸ್ಮರಿಸಬಹುದಾಗಿದೆ. 

click me!

Recommended Stories