ವಿಕೆಟ್ ಪಡೆದ ಉತ್ಸಾಹದಲ್ಲಿ ಸಿರಾಜ್, ಡಕೆಟ್ ಮುಖಕ್ಕೆ ಹೋಗಿ ಕೆಲವು ಮಾತುಗಳನ್ನಾಡಿ ಕೂಗಾಡಿದ್ದಲ್ಲದೆ, ಅವರ ಭುಜಕ್ಕೂ ಡಿಕ್ಕಿ ಹೊಡೆದರು. ಡಕೆಟ್ ಏನೂ ಪ್ರತಿಕ್ರಿಯೆ ನೀಡದೆ ಸುಮ್ಮನೆ ಹೋದರು. ಸಿರಾಜ್ ನಡೆ ಟೀಕೆಗೆ ಗುರಿಯಾಯಿತು. ಕ್ರಿಕೆಟ್ನಲ್ಲಿ ವಿಕೆಟ್ ಪಡೆದರೆ ಆಕ್ರೋಶದಿಂದ ಆಚರಿಸಬಹುದು. ಆದರೆ ಇತರ ಆಟಗಾರರನ್ನು ಕೆಣಕುವ ರೀತಿ ಸಿರಾಜ್ ವರ್ತಿಸಿದ್ದು ತಪ್ಪು ಎಂದು ಹಲವರು ಹೇಳಿದ್ದಾರೆ.