IPL 2021: ತಮ್ಮ ಕೊನೆಯ ಐಪಿಎಲ್ ಪಂದ್ಯದ ಬಗ್ಗೆ ತುಟಿಬಿಚ್ಚಿದ ಎಂ ಎಸ್ ಧೋನಿ..!
First Published Oct 6, 2021, 1:25 PM ISTದುಬೈ: ಮಹೇಂದ್ರ ಸಿಂಗ್ ಧೋನಿ, ಭಾರತೀಯ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ನಾಯಕ. ಟಿ20 ವಿಶ್ವಕಪ್, ಏಕದಿನ ವಿಶ್ವಕಪ್ ಹಾಗೂ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದಂತಹ ಏಕೈಕ ನಾಯಕ. ಇಂತಹ ಯಶಸ್ವಿ ನಾಯಕ ಭಾರತದಲ್ಲೇ ವಿದಾಯದ ಪಂದ್ಯವನ್ನಾಡಬೇಕಿತ್ತು ಎಂದು ಹಲವು ಕ್ರಿಕೆಟ್ ಅಭಿಮಾನಿಗಳ ಹೆಬ್ಬಯಕೆ. ಸದ್ಯದ ಧೋನಿ ಫಾರ್ಮ್ ನೋಡಿದರೇ ಈ ಐಪಿಎಲ್ ಧೋನಿ ಪಾಲಿನ ಕಡೆಯ ಐಪಿಎಲ್ ಆಗಬಹುದು ಎಂದು ಕ್ರಿಕೆಟ್ ಪಂಡಿತರು ಲೆಕ್ಕಾಚಾರ ಹಾಕಲಾರಂಭಿಸಿದ್ದಾರೆ. ಹೀಗಿರುವಾಗಲೇ ಧೋನಿ ತಮ್ಮ ಕಡೆಯ ಐಪಿಎಲ್ ಪಂದ್ಯದ ಬಗ್ಗೆ ತುಟಿಬಿಚ್ಚಿದ್ದಾರೆ.