ಸಂಜು ಸ್ಯಾಮ್ಸನ್ ಹಾಗೂ ಚಾರುಲತಾ ರಮೇಶ್ ಒಳ್ಳೆಯ ಸಿರಿತನ ಹೊಂದಿದ್ದರು. ಹೀಗಿದ್ದೂ ಸಿಂಪಲ್ ಆಗಿಯೇ ಮದುವೆಗೆ ಕಾಲಿಡುವ ಮೂಲಕ ಹಲವರ ಪಾಲಿಗೆ ಸ್ಪೂರ್ತಿಯಾದರು. ಇದರ ಜತೆಗೆ ಅದೇ ವರ್ಷ ಕೇರಳದಲ್ಲಿ ಪ್ರವಾಹ ಉಂಟಾಗಿತ್ತು. ಹೀಗಾಗಿ ಸಂಜು ಸ್ಯಾಮ್ಸನ್ 15 ಲಕ್ಷ ರುಪಾಯಿಗಳನ್ನು ಕೇರಳ ಮುಖ್ಯಮಂತ್ರಿ ಪ್ರವಾಹ ಪರಿಹಾರ ನಿಧಿಗೆ ಅರ್ಪಿಸುವ ಮೂಲಕ ಮಾದರಿಯಾಗಿದ್ದರು.