ಅಧ್ಯಾತ್ಮ ಗುರು ಶ್ರೀ ಶ್ರೀ ರವಿಶಂಕರ ಗುರೂಜಿ ಅವರ ಬಯೋಪಿಕ್ ‘ವೈಟ್’ ಸೆಟ್ಟೇರಲು ಸಿದ್ಧವಾಗಿದೆ. ಇದರಲ್ಲಿ ಬಾಲಿವುಡ್ ನಟ ವಿಕ್ರಾಂತ್ ಮಾಸಿ ಅವರು ರವಿಶಂಕರ ಗುರೂಜಿ ಪಾತ್ರ ನಿರ್ವಹಿಸಲಿದ್ದು, ಆ ಪಾತ್ರದಲ್ಲಿ ನಟಿಸಲು ಸೂಕ್ತ ತಯಾರಿ ನಡೆಸುತ್ತಿದ್ದಾರೆ.
25
ಕೊಲಂಬಿಯಾದ ಶೀತಲ ಸಮರಕ್ಕೆ ಪೂರ್ಣ ವಿರಾಮ ಹಾಡಿದ ಗುರೂಜಿ ಅವರ ಬದುಕಿನ ಘಟನೆ ಮುಖ್ಯ ಕಥಾನಕವಾಗಿ ಮೂಡಿಬರಲಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವಿಕ್ರಾಂತ್ ಮಾಸಿ, ಇದು ಅವರ ಜೀವನ ಮತ್ತು ವಿಶ್ವ ಇತಿಹಾಸದ ಒಂದು ಪ್ರಮುಖ ಭಾಗ.
35
ಕೊಲಂಬಿಯಾದಲ್ಲಿ ಮತ್ತು ವಿಶ್ವ ಶಾಂತಿಯನ್ನು ಪುನಃಸ್ಥಾಪಿಸುವಲ್ಲಿ ಅವರ ಕೊಡುಗೆಯ ಬಗ್ಗೆ ಭಾರತದಲ್ಲಿ ಅನೇಕರಿಗೆ ತಿಳಿದಿಲ್ಲ ಎಂಬುದು ದುರದೃಷ್ಟಕರ. ಈ ಚಿತ್ರದ ಮೂಲಕ ಆ ವಿಷಯಗಳನ್ನು ಹೇಳುತ್ತಿದ್ದೇವೆ.
ಅವರ ಪಾತ್ರವನ್ನು ಮಾಡುತ್ತಿರುವುದೇ ಒಂದು ಗೌರವ. ನಾನು ಅವರಂತಾಗಲು ಸಾಧ್ಯವೇ ಇಲ್ಲ. ಆದರೆ ನಟನಾಗಿ ಅವರನ್ನು ಜೀವಿಸಲು ಪ್ರಯತ್ನಿಸುತ್ತೇನೆ. ಈ ಪಾತ್ರ ಮಾಡಲು ಹೆಮ್ಮೆ ಇದೆ ಎಂದಿದ್ದಾರೆ.
55
ಬಾಲಿವುಡ್ ನಿರ್ದೇಶಕ ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡುತ್ತಿದ್ದಾರೆ. ಬಾಲಿವುಡ್ ನಿರ್ಮಾಪಕರಾದ ಮಹಾವೀರ್ ಜೈನ್ ಹಾಗೂ ಸಿದ್ಧಾರ್ಥ್ ಆನಂದ್ ಈ ಸಿನಿಮಾಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಆಗಸ್ಟ್ನಲ್ಲಿ ಚಿತ್ರೀಕರಣ ಆರಂಭವಾಗಲಿದೆ.