Drugs Case: 4 ಗಂಟೆ ಅಫೀಸರ್ ವಾಂಖೆಡೆ ವಿಚಾರಣೆ, ಡ್ರಗ್ಸ್ ಪಾರ್ಟಿ ತನಿಖೆ ಕಥೆ ಏನು ?

Published : Oct 28, 2021, 12:02 PM ISTUpdated : Oct 28, 2021, 04:03 PM IST

ಬರೋಬ್ಬರಿ 4 ಗಂಟೆಗಳ ಕಾಲ ಸಮೀರ್(Sameer Wankhede) ವಿಚಾರಣೆ ? ಡ್ರಗ್ಸ್ ಕೇಸ್(Drugs Case) ಪ್ರಕರಣವನ್ನು ತನಿಖೆ ಮಾಡೋದ್ಯಾರು ? ತನಿಖೆ ತಂಡದ ನೇತೃತ್ವ ಸಮೀರ್ ಕೈ ತಪ್ಪುತ್ತಾ ?

PREV
19
Drugs Case: 4 ಗಂಟೆ ಅಫೀಸರ್ ವಾಂಖೆಡೆ ವಿಚಾರಣೆ, ಡ್ರಗ್ಸ್ ಪಾರ್ಟಿ ತನಿಖೆ ಕಥೆ ಏನು ?

ಮುಂಬೈ ವಲಯದ NCB ಮುಖ್ಯಸ್ಥ ಸಮೀರ್ ವಾಂಖೆಡೆ(Sameer Wankhede) ಅವರನ್ನು ದೆಹಲಿಯಲ್ಲಿ(Delhi) ವಿಚಾರಣೆ ನಡೆಸಲಾಗಿತ್ತು. 25 ಕೋಟಿ ಹಣ ಪಡೆದಿರುವ ಆರೋಪದಲ್ಲಿ ಬರೋಬ್ಬರಿ 4 ಗಂಟೆಗಳ ಕಾಲ ವಿಚಾರಣೆ ಮಾಡಲಾಗಿತ್ತು.

29

ಡ್ರಗ್ಸ್-ಆನ್-ಕ್ರೂಸ್ ಪ್ರಕರಣದ ತನಿಖಾಧಿಕಾರಿಯಾಗಿ ಅವರ ವಿರುದ್ಧ 25 ಕೋಟಿ ಡೀಲ್ ಅಥವಾ ಬೇರೆ ಸಾಕ್ಷಿ ಅಥವಾ ಮಾಹಿತಿ ಸಿಗುವವರೆಗೆ ಅವರೇ ಈ ಕೇಸ್‌ನ ತನಿಖಾಧಿಕಾರಿಯಾಗಿರುತ್ತಾರೆ ಎಂದು ಉತ್ತರ ಪ್ರದೇಶದ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ ಉಪ ಮಹಾನಿರ್ದೇಶಕ ಜ್ಞಾನೇಶ್ವರ್ ಸಿಂಗ್ ಹೇಳಿದ್ದಾರೆ.

39

ವಾಂಖೆಡೆ ವಿರುದ್ಧ ಬಂದಿರುವ ಹಣ ಪಡೆವ ಆರೋಪಗಳ ಕುರಿತು ಇಲಾಖಾ ವಿಜಿಲೆನ್ಸ್ ತನಿಖೆಗೆ ಸಂಬಂಧಿಸಿದಂತೆ ಸಂಸ್ಥೆಯು ವಾಂಖೆಡೆ ಹೇಳಿಕೆಯನ್ನು ದಾಖಲಿಸಿಕೊಂಡಿದೆ.

49

ಐವರು ಸದಸ್ಯರ ವಿಜಿಲೆನ್ಸ್ ತನಿಖಾ ತಂಡ ಬುಧವಾರ ಮುಂಬೈ ತಲುಪಿದ್ದು, ತನಿಖೆ ಆರಂಭಿಸಿದೆ. ಇದು ಎನ್‌ಸಿಬಿಯ ಮುಂಬೈ ಕಚೇರಿಯಿಂದ ಕೆಲವು ದಾಖಲೆಗಳು ಮತ್ತು ರೆಕಾರ್ಡಿಂಗ್‌ಗಳನ್ನು ಸಂಗ್ರಹಿಸಿದೆ.

59

ವಾಂಖೆಡೆ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗುತ್ತಿದೆ. ಸೂಕ್ಷ್ಮ ವಿಚಾರಣೆಯಾಗಿದೆ. ತನಿಖೆಗೆ ಸಂಬಂಧಿಸಿದ ನೈಜ-ಸಮಯದ ಮಾಹಿತಿಯನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ, ನಾವು ಎಲ್ಲಾ ವಿವರಗಳನ್ನು ಹಂಚಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಸಿಂಗ್ ಹೇಳಿದ್ದಾರೆ.

69

ಆರ್ಯನ್ ಖಾನ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಂಖೆಡೆ ತನ್ನನ್ನು ಖಾಲಿ ಪೇಪರ್‌ಗಳಿಗೆ ಸಹಿ ಮಾಡಿಸಿದ್ದಾನೆ ಎಂದು ಪ್ರಭಾಕರ್ ಸೈಲ್ ಮಾಡಿದ ಆರೋಪಗಳ ಬಗ್ಗೆ ಕೇಂದ್ರೀಯ ಸಂಸ್ಥೆ ವಿಜಿಲೆನ್ಸ್ ವಿಚಾರಣೆಯನ್ನು ಪ್ರಾರಂಭಿಸಿದೆ.

79

ಕೆಲವು ಏಜೆನ್ಸಿ ಅಧಿಕಾರಿಗಳು 25 ಕೋಟಿ ಸುಲಿಗೆ ಬಿಡ್ ಮಾಡಿದ್ದಾರೆ ಎಂದು ಸೈಲ್ ಆರೋಪಿಸಿದ್ದಾರೆ. ಕೆಲವು ಸಂಭಾಷಣೆಗಳನ್ನು ಕೇಳಿದ ಆಧಾರದ ಮೇಲೆ ಅವರು ಹೀಗೆ ಹೇಳಿದ್ದಾಗಿ ಸ್ಪಷ್ಟಪಡಿಸಿದ್ದಾರೆ.

89

ಪ್ರಭಾಕರ್ ಸೈಲ್ ಮತ್ತು ಕೆಪಿ ಗೋಸಾವಿ ಅವರನ್ನು ಕೂಡ ವಿಚಾರಣೆ ನಡೆಸಲಾಗುವುದು. ಆದರೆ ಅವರ ಸಂಪರ್ಕ ಸಂಖ್ಯೆಗಳು ಅಥವಾ ವಿಳಾಸಗಳ ಮೂಲಕ ಅವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ ಎಂದು ಸಿಂಗ್ ಹೇಳಿದ್ದಾರೆ.

99

ನಾವು ಅವರನ್ನು ಸಂಪರ್ಕಿಸಲು ನಮ್ಮ ಕೈಲಾದಷ್ಟು ಪ್ರಯತ್ನಿಸಿದ್ದೇವೆ ಆದರೆ ಸಾಧ್ಯವಾಗಲಿಲ್ಲ. ಅವರು ಎರಡು ದಿನಗಳಲ್ಲಿ ಬಂದು ವಿಚಾರಣೆಗೆ ಸೇರಬಹುದು. ಬಾಂದ್ರಾ (ಪಶ್ಚಿಮ) ನಲ್ಲಿರುವ ಸಿಆರ್‌ಪಿಎಫ್ ಮೆಸ್‌ನಲ್ಲಿ ತಂಗಿರುವ ವಿಶೇಷ ತನಿಖಾ ತಂಡಕ್ಕೆ ಸಾಕ್ಷ್ಯವನ್ನು ನೀಡಲು ಮಾಧ್ಯಮಗಳ ಮೂಲಕ ನಾನು ಅವರಿಗೆ ಹೇಳಲು ಬಯಸುತ್ತೇನೆ  ಎಂದು ಸಿಂಗ್ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories