ಅಲ್ಲು ಅರ್ಜುನ್ ಅವರ ಪುಷ್ಪ-2 ಸಿನಿಮಾ ತಂಡಕ್ಕೆ ಚುಚ್ಚು ಮಾತಾಡಿದ್ದಾರೆ. ಘಟನೆ ಆದ ತಕ್ಷಣ ಬಾಧಿತ ಕುಟುಂಬಕ್ಕೆ ಭರವಸೆ ಕೊಡಬೇಕಿತ್ತು, ಅವರ ನೋವು ಹಂಚಿಕೊಳ್ಳಬೇಕಿತ್ತು. ಮೊಳೆಯಿಂದ ಬಗೆಹರಿಯುವ ವಿಚಾರಕ್ಕೆ ಕೊಡಲಿಯನ್ನು ಬಳಕೆ ಮಾಡಿದ್ದಾರೆ. ಅಲ್ಲು ಅರ್ಜುನ್ ಆಗಿರಲಿ, ಟೀಮ್ ಆಗಿರಲಿ, ಪ್ರೊಡ್ಯೂಸರ್ ಆಗಿರಲಿ, ಕುಟುಂಬಕ್ಕೆ ಸಾಂತ್ವನ ಹೇಳಿದ್ದರೆ ಚೆನ್ನಾಗಿತ್ತು. ಈ ಘಟನೆಗೆ ಎಲ್ಲರೂ ಹೊಣೆ, ಯಾರನ್ನೂ ದೂಷಿಸಕ್ಕಾಗಲ್ಲ. ಆದರೆ, ಅಲ್ಲು ಅರ್ಜುನ್ ಅವರನ್ನ ಒಬ್ಬಂಟಿ ಮಾಡಿದ್ದಾರೆ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.