ಐಟಂ ಡಾನ್ಸ್​ನಿಂದಲೇ ಸದ್ದು ಮಾಡಿದ್ದ ಮುಮೈತ್​ ಖಾನ್‌ಗೆ ರಾಘವ ಲಾರೆನ್ಸ್ ವಾರ್ನಿಂಗ್ ನೀಡಿದ್ರಾ? ಅಂತದ್ದೇನಾಯ್ತು!

Published : Feb 27, 2025, 01:04 PM ISTUpdated : Feb 27, 2025, 01:05 PM IST

ಒಂದು ಕಾಲದಲ್ಲಿ ಐಟಂ ಹಾಡುಗಳಿಂದ ಮಿಂಚಿದ ಮುಮೈತ್ ಖಾನ್ ಅವರ ವೃತ್ತಿಜೀವನ ದಿಢೀರ್ ಕುಸಿಯಿತು. ಡ್ಯಾನ್ಸ್ ಮಾಸ್ಟರ್ ಲಾರೆನ್ಸ್ ಅವರು ಎಚ್ಚರಿಕೆ ನೀಡಿದ್ದರಿಂದಲೇ ಆಕೆಗೆ ಅವಕಾಶಗಳು ಕಡಿಮೆಯಾದವು ಎಂಬ ಮಾತುಗಳಿವೆ.

PREV
14
ಐಟಂ ಡಾನ್ಸ್​ನಿಂದಲೇ ಸದ್ದು ಮಾಡಿದ್ದ ಮುಮೈತ್​ ಖಾನ್‌ಗೆ ರಾಘವ ಲಾರೆನ್ಸ್ ವಾರ್ನಿಂಗ್ ನೀಡಿದ್ರಾ? ಅಂತದ್ದೇನಾಯ್ತು!

ಒಂದು ಕಾಲದಲ್ಲಿ ಮುಮೈತ್ ಖಾನ್ ಫುಲ್ ಫಾರ್ಮ್‌ನಲ್ಲಿ ಇದ್ದರು. ಎಷ್ಟರ ಮಟ್ಟಿಗೆ ಅಂದ್ರೆ ಆಕೆಯ ಐಟಂ ಹಾಡು ಬೇಕೆಂದು ಹೀರೋಗಳು ಕೇಳುತ್ತಿದ್ದರು. “ಇಪ್ಪಟ್ಟಿಕಿನ್ನೂ ನಾ ವಯಸ್ಸು ನಿಂಡಾ ಪದಹಾರೇ…” ಎಂದು ‘ಪೋಕಿರಿ’ಯಲ್ಲಿ ಮುಮೈತ್ ಕುಣಿದ ರೀತಿ ಯಾರಿಗೆ ತಾನೇ ಮರೆಯಲು ಸಾಧ್ಯ. ಇನ್ನು ‘ಯೋಗಿ’ಯಲ್ಲಿ “ಓರೋರಿ ಯೋಗಿ…” ಎಂದು ಮುದ್ದಿಸಿದ ರೀತಿಯನ್ನು ನೆನಪಿಸಿಕೊಂಡು ಕುಣಿಯುವವರಿದ್ದಾರೆ. ಹಾಗೆಯೇ ಆಕೆಯನ್ನು ಮುಖ್ಯ ಪಾತ್ರದಲ್ಲಿ ಹಾಕಿ ಸಿನಿಮಾ ಮಾಡಲು ನಿರ್ದೇಶಕರು, ನಿರ್ಮಾಪಕರು ಕಾತುರರಾಗಿದ್ದರು. ಆಪರೇಷನ್ ದುರ್ಯೋಧನ, ಮೈಸಮ್ಮ ಐಪಿಎಸ್, ಮಂಗತಾಯಾರು ಟಿಫಿನ್ ಸೆಂಟರ್, ಪುನ್ನಮಿನಾಗು” ಮುಂತಾದ ಚಿತ್ರಗಳಲ್ಲಿ ಮುಮೈತ್ ಖಾನ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಿ ಮೆಚ್ಚುಗೆ ಗಳಿಸಿದರು. ಐಟಂ ನಂಬರ್‌ಗಳಲ್ಲಿ ಆಕೆಗೆ ಸರಿಸಾಟಿಯೇ ಇರಲಿಲ್ಲ. ಮುಖ್ಯವಾಗಿ ಮುಮೈತ್ ತನ್ನ ಸೊಂಟವನ್ನು ಲಯಬದ್ಧವಾಗಿ ತಿರುಗಿಸುತ್ತಾ ಮಾಡುವ ‘ಬೆಲ್ಲಿ ಡ್ಯಾನ್ಸ್’ಗೆ ಅಪಾರ ಅಭಿಮಾನಿಗಳಿದ್ದಾರೆ.

ಒಂದು ಕಾಲದಲ್ಲಿ ಆಕೆಯ ಹಾಡುಗಳಿಗಾಗಿಯೇ ಸಿನಿಮಾಗೆ ಹೋದವರೂ ಇದ್ದಾರೆ. ಆದರೆ ಮುಮೈತ್ ಖಾನ್ ಇದ್ದಕ್ಕಿದ್ದಂತೆ ಡೌನ್ ಆದರು. ಒಮ್ಮೆಲೆ ಆಫರ್‌ಗಳು ಕಡಿಮೆಯಾದವು. ಹೊಸಬರು ಬಂದು ಆಕೆಯ ಜಾಗವನ್ನು ಆಕ್ರಮಿಸಿಕೊಂಡರು. ಆದರೆ ಆಕೆ ಡೌನ್ ಆಗಲು ಡ್ಯಾನ್ಸ್ ಮಾಸ್ಟರ್ ಲಾರೆನ್ಸ್ ಜಗಳವಾಡಿದ್ದೇ ಕಾರಣ ಎಂದು ತಮಿಳುನಾಡಿನಲ್ಲಿ ಹೇಳಿಕೊಳ್ಳುತ್ತಾರೆ.

24

ಆದರೆ ಮುಮೈತ್ ಸ್ಪೀಡಿಗೆ ಲಾರೆನ್ಸ್ ಚೆಕ್ ಹಾಕಿದರು ಎಂಬುದು ಫಿಲ್ಮ್ ಸರ್ಕಲ್ಸ್‌ನಲ್ಲಿ ಕೇಳಿಬರುವ ಮಾತು. ಆಗ ಡ್ಯಾನ್ಸರ್ ಮುಮೈತ್ ಖಾನ್‌ಗೆ ದಕ್ಷಿಣ ಭಾರತದಲ್ಲಿ ಬಹಳ ಬೇಡಿಕೆ ಇತ್ತು. ಮುಮೈತ್ ಐಟಂ ಸಾಂಗ್ ಇದೆ ಎಂದು ಹೇಳಿಕೊಳ್ಳುವುದು ನಿರ್ಮಾಪಕರು, ನಿರ್ದೇಶಕರಿಗೆ ಒಂದು ಕ್ರೇಜ್ ಆಗಿತ್ತು. ಇಷ್ಟೊಂದು ಕ್ರೇಜ್ ಸಂಪಾದಿಸಿಕೊಂಡ ಮುಂಬೈ ಬೆಡಗಿ 'ಮುಮೈತ್’ ಸೆಟ್‌ನಲ್ಲಿ ನಾನಾ ರೀತಿಯ ಡಿಮ್ಯಾಂಡ್‌ಗಳನ್ನು ಇಡುತ್ತಿದ್ದರು, ಮುಖ ಸಿಂಡರಿಸಿಕೊಳ್ಳುತ್ತಿದ್ದರು ಎನ್ನುತ್ತಾರೆ. ಅಷ್ಟು ಫಾರ್ಮ್‌ನಲ್ಲಿ ಇದ್ದಾಗ ಹಾಗೆ ಬಿಹೇವ್ ಮಾಡುವುದರಲ್ಲಿ ವಿಚಿತ್ರವೇನಿಲ್ಲ. ದೀಪ ಇರುವಾಗಲೇ ಮನೆ ಸರಿಪಡಿಸಿಕೊಳ್ಳಬೇಕು ಎಂಬಂತೆ ಡಿಮ್ಯಾಂಡ್ ಇರುವಾಗಲೇ ನಖರಾ ಮಾಡಬೇಕೆಂಬುದು ಸಿನಿಮಾ ಅವರ ನಿಘಂಟಿನಲ್ಲಿ ಮೊದಲ ಸೂತ್ರ. ಅದನ್ನು ಮುಮೈತ್ ಚಾಚೂ ತಪ್ಪದೆ ಪಾಲಿಸುತ್ತಿದ್ದರು.

34

ಸಿನಿಮಾ ಸೆಟ್ಸ್‌ಗೆ ತಡವಾಗಿ ಬರುವುದು, ಕಾಸ್ಟ್ಯೂಮ್‌ಗಳ ಹತ್ತಿರ ಜಗಳ ಮಾಡುವುದು... ಇತ್ಯಾದಿಗಳು ಮುಮೈತ್‌ಗೆ ಸಾಮಾನ್ಯವಾಗಿ ಹೋಗಿದ್ದವು. ಒಂದು ಕಾಲದಲ್ಲಿ ನಾಗಾರ್ಜುನರಂತಹ ಹೀರೋ ಕೂಡ ಮುಮೈತ್‌ಗಾಗಿ ಸೆಟ್‌ನಲ್ಲಿ ಕಾಯಬೇಕಾಗಿ ಬಂದಿದ್ದರಿಂದ ವಿಷಯ ತಿಳಿದ ನೃತ್ಯ ನಿರ್ದೇಶಕ, ಸಿನಿಮಾ ನಿರ್ದೇಶಕ ಲಾರೆನ್ಸ್.. ಮುಮೈತ್‌ಗೆ ಗಟ್ಟಿ ಡೋಸ್ ಕೊಟ್ಟರು. "ಇಷ್ಟವಿದ್ದರೆ ಹೇಳಿದ ಟೈಮ್‌ಗೆ ಬಾ... ನಾವು ಹೇಳಿದ ಕಾಸ್ಟ್ಯೂಮ್ಸ್ ಹಾಕಿಕೋ... ಇಲ್ಲದಿದ್ದರೆ ಹೋಗಿಬಿಡು" ಎಂದು ಗಟ್ಟಿಯಾಗಿ ಮಾತನಾಡಿದಾಗ ಮುಮೈತ್‌ಗೆ ಕೋಪ ಬಂತಂತೆ. ಎಲ್ಲರ ಮುಂದೆ ಹೀಗೆ ಹೇಳುತ್ತೀರಾ ಎಂದು ಆಕೆ ರೇಗಾಡಿದರಂತೆ. ಅದರಿಂದ ಸೆಟ್‌ನಲ್ಲಿ ಇಬ್ಬರ ಮಧ್ಯೆ ವಿವಾದ ಬಂತು. ಆ ನಂತರ ಆಕೆಯ ಐಟಂ ಸಾಂಗ್ಸ್‌ಗೆ ಲಾರೆನ್ಸ್ ಮಾಡುವುದಿಲ್ಲವೆಂದು ಹೇಳಿದ್ದಲ್ಲದೆ, ತನ್ನ ಸರ್ಕಲ್ ಅನ್ನು ಕೂಡ ಕಟ್ಟಿಹಾಕಿದರು ಎನ್ನುತ್ತಾರೆ. 

44

ಆಗ ಲಾರೆನ್ಸ್‌ಗೆ ಡ್ಯಾನ್ಸ್ ಮಾಸ್ಟರ್ ಆಗಿದ್ದ ಡಿಮ್ಯಾಂಡ್, ಇನ್‌ಫ್ಲುಯೆನ್ಸ್‌ನಿಂದ ಮುಮೈತ್ ಆಫರ್‌ಗಳು ಕಡಿಮೆಯಾದವು ಎಂದು ಹೇಳುತ್ತಾರೆ. ಆ ನಂತರ ಮುಮೈತ್ ಎಲ್ಲಿಯೂ ಈ ಟಾಪಿಕ್ ಮಾತನಾಡದೆ 'ಮಮ್' ಆಗಿಬಿಟ್ಟರು. ಲಾರೆನ್ಸ್ ನೃತ್ಯ ನಿರ್ದೇಶಕ ಆಗಿರುವುದರಿಂದ ಅವರೆಂದರೆ ತನಗೆ ಗೌರವವಿದೆಯೆಂದು, ಅವರು ಬೈದರೂ ಗುರುಭಾವದಿಂದ ಏನೂ ಅನ್ನಲಿಲ್ಲವೆಂದು ಯಾರಾದರೂ ಈ ಟಾಪಿಕ್ ಎತ್ತಿದರೆ ಹೇಳುತ್ತಿದ್ದರಂತೆ ಮುಮೈತ್. ಆದರೆ ಆಗಲೇ ಪರಿಸ್ಥಿತಿ ಕೈಮೀರಿ ಹೋಗಿತ್ತೆಂದು ಮುಮೈತ್ ಮೇಲೆ ಅಘೋಷಿತ ಬ್ಯಾನ್ ತರಹ ಇಂಡಸ್ಟ್ರಿ ಹಾಕಿತ್ತೆನ್ನುತ್ತಾರೆ. ಅದರಲ್ಲಿ ಭಾಗವಾಗಿ ರಾಯ್ ಲಕ್ಷ್ಮಿಯನ್ನು ಮುಮೈತ್ ಚೆನ್ನಾಗಿ ಪ್ರೋತ್ಸಾಹಿಸಿದರು ಎನ್ನುತ್ತಿದ್ದಾರೆ. ಇದರಲ್ಲಿ ಎಷ್ಟರ ಮಟ್ಟಿಗೆ ನಿಜವೋ ಗೊತ್ತಿಲ್ಲ ಆದರೆ ಮುಮೈತ್ ಮಾತ್ರ ಬಹಳ ಹಿಂದುಳಿದರು. ಎಷ್ಟರ ಮಟ್ಟಿಗೆ ಅಂದ್ರೆ ಈಗಲೂ ವಾಪಸ್ ಬಂದು ಮಿನಿಮಮ್ ಆಫರ್ಸ್ ತಂದುಕೊಳ್ಳಲು ಆಗದಷ್ಟು. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories