ಕೂಲಿ ಚಿತ್ರೀಕರಣದಲ್ಲಿ ಸತ್ಯರಾಜ್ ಅವರ ದೃಶ್ಯಗಳನ್ನು ತಡವಾಗಿ ಚಿತ್ರೀಕರಿಸಲಾಗಿದೆ. ಸತ್ಯರಾಜ್ ಮೊದಲ ದಿನ ಶೂಟಿಂಗ್ಗೆ ಬಂದಾಗ, ಅಲ್ಲಿಯವರೆಗೆ ರಜನಿಕಾಂತ್ ನಟಿಸಿದ ದೃಶ್ಯಗಳನ್ನು ತೋರಿಸಿದರಂತೆ ಲೋಕೇಶ್. ಆ ದೃಶ್ಯಗಳನ್ನು ನೋಡಿದ ಸತ್ಯರಾಜ್, ಕೆಲವರು ಹೀರೋ ಆಗಿ ನಟಿಸುತ್ತಾರೆ. ಆದರೆ ನಿಜ ಜೀವನದಲ್ಲೂ ಒಬ್ಬರು ಹೀರೋ ಆಗಿರಲು ಸಾಧ್ಯವಾದರೆ ಅದು ರಜನಿ ಮಾತ್ರ ಎಂದರಂತೆ. ಈ ಮಾಹಿತಿ ಹಂಚಿಕೊಂಡ ಲೋಕೇಶ್, ಈ ಚಿತ್ರದಲ್ಲಿ ಇಬ್ಬರೂ 37 ವರ್ಷಗಳ ನಂತರ ಒಂದಾಗಿದ್ದಾರೆ ಎಂದು ತಿಳಿಸಿದರು.