ಆದರೆ, ತನ್ನ ಪಾತ್ರಕ್ಕಿಂತ ಜಗಪತಿ ಬಾಬು ಮಾಡಿದ ಬಸಿರೆಡ್ಡಿ ಪಾತ್ರ ಚೆನ್ನಾಗಿದೆ ಅಂತ ಎನ್.ಟಿ.ಆರ್ ಹೇಳಿದ್ದರಂತೆ. ಇದೇ ವಿಚಾರ ಮುಂದಿಟ್ಟುಕೊಂಡು ಜಗಪತಿ ಬಾಬು ಅವರನ್ನ ದಿನಾ ಕಾಲೆಳೆಯುತ್ತಿದ್ದರು. ಒಂದು ಸಂದರ್ಶನದಲ್ಲಿ ಜಗಪತಿ ಬಾಬು ಮಾತಾಡ್ತಾ, 'ಅರವಿಂದ ಸಮೇತ ಚಿತ್ರದಲ್ಲಿ ನನ್ನದು ತುಂಬಾ ಅದ್ಭುತವಾದ ಪಾತ್ರ. ಕಥೆಗೆ ಚೆನ್ನಾಗಿ ವರ್ಕ್ ಆಗಿದೆ. ದುರಾದೃಷ್ಟವಶಾತ್ ನನ್ನದು ಆಕ್ರಮಣಕಾರಿ ಪಾತ್ರ, ತಾರಕ್ ನಿಷ್ಕ್ರಿಯ ಪಾತ್ರ ಮಾಡಿದರು' ಎಂದು ಹೇಳಿದರು.