ನಾನು ಸಿಂಹ.. ಈ ಪ್ರಮಾಣದಲ್ಲಿ ಬೆಂಬಲ, ಪ್ರೀತಿ ಸಿಗಲು ಕಾರಣ ನನ್ನ ಅಪ್ಪ ಎಂದ ನಟ ನಾಗಾರ್ಜುನ!

First Published Oct 5, 2024, 11:12 AM IST

ನಾಗಾರ್ಜುನ ಫ್ಯಾಮಿಲಿಗೆ, ಸಮಂತಾಗೆ ಸಿನಿಮಾ ಇಡೀ ಇಂಡಸ್ಟ್ರಿ ಬೆಂಬಲವಾಗಿ ನಿಂತಿದೆ. ಹೀಗಾಗಿ ನಾಗಾರ್ಜುನ ಹೊಸ ಪೋಸ್ಟ್ ಹಾಕಿದ್ದಾರೆ. ಅದು ಸೆನ್ಸೇಷನ್ ಸೃಷ್ಟಿಸಿದೆ. 
 

ಕೊಂಡಾ ಸುರೇಖಾ ಅವರ ಕಾಮೆಂಟ್‌ಗಳು ರಾಜ್ಯದಲ್ಲಿ ಸಂಚಲನ ಮೂಡಿಸಿರುವುದು ಎಲ್ಲರಿಗೂ ತಿಳಿದಿದೆ. ಸಮಂತಾ ಮತ್ತು ನಾಗಚೈತನ್ಯ ವಿಚ್ಛೇದನದ ಬಗ್ಗೆ ಅವರು ಮಾಡಿದ ಆರೋಪಗಳು ಬಿಸಿಬಿಸಿ ಚರ್ಚೆಗೆ ಕಾರಣವಾಯಿತು. ರಾಜ್ಯ ರಾಜಕಾರಣವನ್ನೇ ಅಲುಗಾಡಿಸಿತು. ನಾಗಾರ್ಜುನ ಕುಟುಂಬ ಮತ್ತು ಸಮಂತಾ ಬಗ್ಗೆ ಅವರು ಮಾಡಿದ್ದ ಕಾಮೆಂಟ್‌ಗಳನ್ನು ಟಾಲಿವುಡ್ ಒಕ್ಕೊರಲಿನಿಂದ ಖಂಡಿಸಿತು. ಸಮಂತಾ ಬಗ್ಗೆ ಅವರು ಮಾಡಿದ್ದ ಕಾಮೆಂಟ್‌ಗಳನ್ನು ತೀವ್ರವಾಗಿ ಖಂಡಿಸಿದರು.

ಇಡೀ ಇಂಡಸ್ಟ್ರಿ ಈ ರೀತಿ ಒಗ್ಗಟ್ಟಿನಿಂದ ನಿಲ್ಲುವುದು ಇದುವರೆಗೆ ನಡೆದಿರಲಿಲ್ಲ. ಹೀಗಾಗಿ ಇದು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಯಿತು. ಅಷ್ಟೇ ಅಲ್ಲದೆ ರಾಜಕಾರಣದಲ್ಲೂ ಸಂಚಲನ ಮೂಡಿಸಿತು. ಸೆಲೆಬ್ರಿಟಿಗಳ ಸ್ಪಂದನೆ ಸಾಕಷ್ಟು ಪರಿಣಾಮ ಬೀರುತ್ತದೆ. ಅದು ಸುಲಭವಾಗಿ ಜನರನ್ನು ತಲುಪುತ್ತದೆ. ಅದು ಜನರ ಮೇಲೂ ಪರಿಣಾಮ ಬೀರುತ್ತದೆ. ಎಲ್ಲಾ ವರ್ಗದ ಜನರಿಂದಲೂ ನಾಗಾರ್ಜುನ ಕುಟುಂಬ ಮತ್ತು ಸಮಂತಾಗೆ ಬೆಂಬಲ ವ್ಯಕ್ತವಾಗುತ್ತಿದೆ.

Latest Videos


ಹಾಗಾಗಿಯೇ ಈ ವಿಷಯದಲ್ಲಿ ಕೊಂಡಾ ಸುರೇಖಾ ಕೂಡ ತಮ್ಮ ಹೇಳಿಕೆಯನ್ನು ಹಿಂಪಡೆದುಕೊಂಡರು. ಅದು ನನಗೆ ಗೊತ್ತಿಲ್ಲದೆ ಬಾಯಿಂದ ಬಂತು ಎಂದು ಹೇಳಿದರು. ಆದರೆ, ನಂತರ ಅವರು ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಹೋಗಿ ತಾವೇ ಗಾಳದಲ್ಲಿ ಸಿಕ್ಕಿಹಾಕಿಕೊಂಡರು. ಈ ವಿಷಯದಲ್ಲಿ ಇಡೀ ಇಂಡಸ್ಟ್ರಿ ಸ್ಪಂದಿಸಿದ್ದು ಸಾಕಷ್ಟು ಪರಿಣಾಮ ಬೀರಿತು. ಈ ಹಿನ್ನೆಲೆಯಲ್ಲಿ ನಾಗಾರ್ಜುನ ಇದೀಗ ಸ್ಪಂದಿಸಿದ್ದಾರೆ. ತಮಗೆ ಬೆಂಬಲ ಸಿಕ್ಕಿದ್ದಕ್ಕೆ ಅವರು ಸಂತೋಷ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ನಾಗಾರ್ಜುನ ಭಾವುಕ ಪೋಸ್ಟ್ ಹಾಕಿದ್ದಾರೆ. ನಾನು ಸಿಂಹ ಎಂದು ನಾಗಾರ್ಜುನ ಸ್ವತಃ ತಮ್ಮನ್ನು ಬಣ್ಣಿಸಿಕೊಂಡಿದ್ದಾರೆ. ಅದೇ ಸಮಯದಲ್ಲಿ ಈ ಪ್ರಮಾಣದಲ್ಲಿ ಬೆಂಬಲ, ಪ್ರೀತಿ ಸಿಗಲು ಕಾರಣ ಅಪ್ಪ ಎಎನ್‌ಆರ್‌ ಎಂದು ಹೇಳಿದ್ದಾರೆ.

ನಾಗಾರ್ಜುನ ಪೋಸ್ಟ್‌ನಲ್ಲಿ, ನಾನು ಯಾವಾಗಲೂ ಸ್ಟ್ರಾಂಗ್ ಪರ್ಸನ್ ಅಂತ ತಿಳ್ಕೊಂಡಿದ್ದೆ. ಆದ್ರೆ ನನ್ನ ಫ್ಯಾಮಿಲಿ ವಿಷ್ಯ ಬಂದಾಗ ನಾನು ಸಿಂಹ. ನಮ್ಮ ಇಡೀ ಟಾಲಿವುಡ್ ನಮಗೆ ಬೆಂಬಲವಾಗಿ ನಿಂತಿದ್ದಕ್ಕೆ ನನಗೆ ಸಂತೋಷವಾಗಿದೆ. ಇದು ನನ್ನ ತಂದೆಯವರ (ಎಎನ್‌ಆರ್) ಆಶೀರ್ವಾದ ಅಂತ ನಾನು ಭಾವಿಸುತ್ತೇನೆ ಅಂತ ನಾಗಾರ್ಜುನ ಹೇಳಿದ್ದಾರೆ. ಕೊಂಡಾ ಸುರೇಖಾ ತಮ್ಮ ಮೇಲೆ ಮಾಡಿದ ಆರೋಪಗಳ ವಿಷಯದಲ್ಲಿ ಇಡೀ ಚಿತ್ರರಂಗ ಸ್ಪಂದಿಸಿ ಖಂಡಿಸಿದ ಹಿನ್ನೆಲೆಯಲ್ಲಿ ತಮಗೆ ಸಿಕ್ಕ ಬೆಂಬಲದ ಬಗ್ಗೆ ನಾಗಾರ್ಜುನ ಸಂತೋಷ ವ್ಯಕ್ತಪಡಿಸಿ ಸೆನ್ಸೇಷನ್ ಪೋಸ್ಟ್ ಹಾಕಿದ್ದಾರೆ. ಇದು ವೈರಲ್ ಆಗಿದೆ. ಅಷ್ಟೇ ಅಲ್ಲದೆ ಇದು ನಾಗಾರ್ಜುನ  ಮಾಸ್ ರಿಯಾಕ್ಷನ್ ಅನ್ನ ತೋರಿಸುತ್ತೆ. ಅದೇ ಸಮಯದಲ್ಲಿ ಯಾರಿಗೂ ಬೈಯ್ಯೋ ಕೆಲಸ ಮಾಡಿಲ್ಲ. ಸಿಂಹದಂತೆ ಗರ್ಜಿಸುತ್ತೇನೆ ಅನ್ನೋ ಸೂಚನೆಯನ್ನೂ ನಾಗಾರ್ಜುನ ಈ ವೇಳೆ ನೀಡಿದ್ದಾರೆ.

ವಿವಾದ ಶುರುವಾಗಿದ್ದೆಲ್ಲಿ?: ಕೊಂಡಾ ಸುರೇಖಾ ಹೇಳಿದ್ದೇನು ಅಂತ ನೋಡಿದ್ರೆ, ಮೂರು ದಿನಗಳ ಹಿಂದೆ ಮಾಧ್ಯಮದವರ ಜೊತೆ ಮಾತನಾಡುವಾಗ ಕೆಟಿಆರ್ ಅವರನ್ನ ಟಾರ್ಗೆಟ್ ಮಾಡಿದ್ರು ಕೊಂಡಾ ಸುರೇಖಾ. ಅವರ ಕಾರಣದಿಂದಲೇ ಸಮಂತಾ, ನಾಗಚೈತನ್ಯ ವಿಚ್ಛೇದನ ಪಡೆದುಕೊಂಡ್ರು. ಎನ್ ಕನ್ವೆನ್ಷನ್‌ಗೆ ಕೆಟಿಆರ್ ಹೋದ್ರೆ ನಾಗಾರ್ಜುನ ತಡೆಯಬೇಕು ಅಂತ ರಿಕ್ವೆಸ್ಟ್ ಮಾಡಿದ್ರು. ತಡೆಯೋಕೆ ಆಗಲ್ಲ ಅಂದ್ರೆ ಸಮಂತಾಳನ್ನ ಕಳಿಸಿ ಅಂತ ಡಿಮ್ಯಾಂಡ್ ಮಾಡಿದ್ರು. ಹೀಗಾಗಿ ಸಮಂತಾಳನ್ನ ಕಳಿಸೋಕೆ ನಾಗಾರ್ಜುನ ಫ್ಯಾಮಿಲಿ ನಿರ್ಧಾರ ಮಾಡಿತು. ಆದ್ರೆ ಸಮಂತಾ ಹೋಗಲಿಲ್ಲ. ನೀನು ಹೋದ್ರೆ ಹೋಗು, ಇಲ್ಲ ಅಂದ್ರೆ ಫ್ಯಾಮಿಲಿ ಬಿಟ್ಟು ಹೋಗು ಅಂತ ವಿಚ್ಛೇದನ ನೀಡಿದ್ರು. ಸಮಂತಾ ವಿಚ್ಛೇದನಕ್ಕೆ ಕೆಟಿಆರ್ ಅವರೇ ಕಾರಣ ಅಂತ ಸೆನ್ಸೇಷನ್ ಆರೋಪ ಮಾಡಿದ್ರು ಸುರೇಖಾ.

ಈ ಹಿನ್ನೆಲೆಯಲ್ಲಿ ರಾಜಕೀಯ ನಾಯಕರು, ಸಿನಿಮಾ ಸೆಲೆಬ್ರಿಟಿಗಳು ಸ್ಪಂದಿಸಿದ್ದಾರೆ. ಅವರನ್ನ ಉದ್ದೇಶಿಸಿಯೇ ನಾಗಾರ್ಜುನ ಪೋಸ್ಟ್ ಹಾಕಿರೋದು ವಿಶೇಷ. ತಮಗೆ ಈ ಪ್ರಮಾಣದಲ್ಲಿ ಬೆಂಬಲ ಸಿಕ್ಕಿದ್ದಕ್ಕೆ ಸಂತೋಷ ಹಂಚಿಕೊಂಡಿದ್ದಾರೆ. ಇದೆಲ್ಲದರ ನಡುವೆ ಕೊಂಡಾ ಸುರೇಖಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ ನಾಗಾರ್ಜುನ. ಅತ್ತ ಕೆಟಿಆರ್ ಕೂಡ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಕೊಂಡಾ ಸುರೇಖಾ ವಿರುದ್ಧ ನಾಗಾರ್ಜುನ ನೂರು ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿರೋದು ಗಮನಾರ್ಹ. ಒಟ್ಟಾರೆ ನಾಗಾರ್ಜುನ ಫ್ಯಾಮಿಲಿ, ಸಮಂತಾ, ಚೈತೂ ವಿಚ್ಛೇದನ ಇದೀಗ ಸೆನ್ಸೇಷನ್ ಸೃಷ್ಟಿಸಿದೆ ಅನ್ನೋದೇನೋ ಸತ್ಯ.

click me!