ಗುಮ್ಮಡಿ ವೆಂಕಟೇಶ್ವರ ರಾವ್ ಅವರ ಮಗಳು, ಗುಮ್ಮಡಿ ಶಾರದಾ ಒಂದು ಸಂದರ್ಶನದಲ್ಲಿ ಚಿರಂಜೀವಿ ಜೊತೆಗಿನ ಒಡನಾಟ, ಊರಿಗೆ ಮಾಡಿದ ಸಹಾಯದ ಬಗ್ಗೆ ಹೇಳಿದ್ದಾರೆ. ನಮ್ಮೂರ ಗುಡಿ ಶಿಥಿಲವಾಗಿತ್ತು. ಅಜ್ಜಿ, ಮುತ್ತಜ್ಜ ಕಟ್ಟಿಸಿದ ಗುಡಿ ಅದು. ರಸ್ತೆಗಿಂತ ಪೂರ್ಣವಾಗಿ ತಗ್ಗು ಗುಂಡಿಯಲ್ಲಿ ಸಿಲುಕಿಕೊಂಡಿತ್ತು. ಈ ದೇವಸ್ಥಾನದೊಳಗೆ ಮಳೆ ನೀರು ನುಗ್ಗುತ್ತಿತ್ತು. ಅದನ್ನ ರಿಪೇರಿ ಮಾಡೋಕೆ ಅಮ್ಮ, ಅಪ್ಪ ಪ್ರಯತ್ನಿಸಿದ್ದರು.