Published : Jun 02, 2025, 05:45 PM ISTUpdated : Jun 02, 2025, 05:47 PM IST
ಚಿರಂಜೀವಿಸರ್ ಚಿತ್ರದಲ್ಲಿ ಒಬ್ಬ ಕಾಮಿಡಿ ನಟನಿಗೆ ಅನ್ಯಾಯ ಆಗಿದೆ. ಇದನ್ನು ನೆನಪು ಮಾಡಿಕೊಂಡ ನಟ ನನ್ನತಾಯಿ ಕಳೆದುಕೊಂಡಂತೆ ಭಾಸವಾಗಿತ್ತು ಎಂದು ಹಾಸ್ಯ ನಟನಿಗೆ ಸಹಾತ ಮಡಿದ್ದನ್ನು ಸ್ವತಃ ನಟನೇ ಬಾಯಿಬಿಟ್ಟು ಹೇಳಿದ್ದಾರೆ.
ಚಿರಂಜೀವಿ ಸರ್ ಯಾರಿಗಾದರೂ ಕಷ್ಟ ಬಂದರೆ ತಕ್ಷಣ ಸಹಾಯ ಮಾಡುತ್ತಾರೆ. ಇದು ಎಲ್ಲರಿಗೂ ಗೊತ್ತು. ತಮ್ಮ ಸಿನಿಮಾದಲ್ಲಿ ನಟಿಸೋರಿಗೆ ಯಾವ ತೊಂದರೆಯೂ ಆಗಬಾರದು ಅಂತ ಅವ್ರು ಬಯಸ್ತಾರೆ. ಆದರೆ, ತಮ್ಮ ಸಿನಿಮಾದಲ್ಲಿ ಒಬ್ಬ ಕಾಮಿಡಿ ನಟನಿಗೆ ಅನ್ಯಾಯ ಆಗಿದೆ ಅಂತ ಬೇಸರ ವ್ಯಕ್ತಪಡಿಸಿದ್ದಾರೆ.
26
ಆ ವಿಷ್ಯ ಚಿರು ಸರ್ಗೆ ಗೊತ್ತಾದ ತಕ್ಷಣ ಅವ್ರು ಏನ್ ಮಾಡಿದ್ರು ಅಂತ ಗೊತ್ತಾದ್ರೆ ಶಾಕ್ ಆಗ್ತೀರ. ಆ ನಟ ಯಾರು ಅಂತಂದ್ರೆ, ಇತ್ತೀಚಿಗೆ ಸುದ್ದಿಯಲ್ಲಿದ್ದ ಪೃಥ್ವಿರಾಜ್. ಖೈದಿ ನಂ. 150 ಚಿತ್ರದಲ್ಲಿ ಪೃಥ್ವಿರಾಜ್ ಬೇಸರಗೊಂಡಿದ್ರು. ಏನಾಯ್ತು? ಚಿರು ಸರ್ ಏನ್ ಮಾಡಿದ್ರು ಅಂತ ನೋಡೋಣ.
36
ಖೈದಿ ನಂ. 150 ಚಿತ್ರದಲ್ಲಿ ಪೃಥ್ವಿ ಒಂದೇ ಒಂದು ಸೀನ್ನಲ್ಲಿ ನಟಿಸಿದ್ರು. ಆದ್ರೆ ಆ ಸೀನ್ ಸರಿಯಾಗಿಲ್ಲ ಅಂತ ಡೈರೆಕ್ಟರ್ ವಿ.ವಿ. ವಿನಾಯಕ್ ಎಡಿಟಿಂಗ್ನಲ್ಲಿ ತೆಗೆದು ಹಾಕಿದ್ರು. ಇದರಿಂದ ಪೃಥ್ವಿ ಬೇಸರಗೊಂಡು ಓಪನ್ ಆಗಿ ಕಮೆಂಟ್ ಮಾಡಿದ್ರು.
'ನನ್ನ ಸೀನ್ ತೆಗೆದಿದ್ದು ತುಂಬಾ ಬೇಸರ ತಂದಿದೆ. ಅಮ್ಮ ತೀರಿಕೊಂಡಾಗ ಎಷ್ಟು ಬೇಜಾರಾಯ್ತೋ ಅಷ್ಟೇ ಬೇಜಾರಾಗಿದೆ” ಅಂತ ಪೃಥ್ವಿ ಹೇಳಿದ್ದರು. ಇದು ಚಿರು ಸರ್ಗೆ ಗೊತ್ತಾಯ್ತು. ಚಿರಂಜೀವಿ ಸರ್ ಒಂದು ಇಂಟರ್ವ್ಯೂನಲ್ಲಿ ಹೇಳಿದ್ದಾರೆ, “ಪೃಥ್ವಿ ಹೇಳಿದ್ದನ್ನು ಕೇಳಿ ತಕ್ಷಣ ಅವರಿಗೆ ಫೋನ್ ಮಾಡಿದೆ.
56
‘ಪೃಥ್ವಿ, ಬೇಜಾರ್ ಮಾಡ್ಕೋಬೇಡ. ನಿನ್ನ ಸೀನ್ ಸಿನಿಮಾದಲ್ಲಿ ಇರುತ್ತೆ ಅಂತ ಹೇಳಿದೆ. ಇಷ್ಟಕ್ಕೆಲ್ಲಾ ಅಮ್ಮ ತೀರಿಕೊಂಡಷ್ಟು ಬೇಜಾರಾಯ್ತು ಅಂತ ಹೇಳೋದು ಸರಿಯಲ್ಲ ಅಂತ ಬುದ್ಧಿ ಹೇಳಿದೆ’ ಅಂತ ಚಿರು ಸರ್ ಹೇಳಿದರು. ಈ ಚರ್ಚೆಯಾಗುವ ಮೊದಲೇ ಖೈದಿ ನಂ. 150 ಸಿನಿಮಾ ಸೆನ್ಸಾರ್ ಆಗಿತ್ತು. ಸೆನ್ಸಾರ್ ಆದ್ಮೇಲೆ ಸೀನ್ ಹಾಕೋದು ಕಷ್ಟ.
66
ಸಣ್ಣ ಸೀನ್ ಹಾಕಿದ್ರೂ ಮತ್ತೆ ಸೆನ್ಸಾರ್ ಮಾಡ್ಬೇಕು. ಅದು ಕಷ್ಟದ ಕೆಲಸ. ಆದ್ರೂ ಪೃಥ್ವಿ ಸೀನ್ ಹಾಕಿ ಅಂತ ವಿನಾಯಕ್ಗೆ ಹೇಳಿದೆ. ವಿನಾಯಕ್ ಆ ಸೀನ್ ಹಾಕಿದರು ಎಂದು ಚಿರಂಜೀವಿ ಅವರು ಹೇಳಿದ್ದರು. ಚಿರು ಸರ್ ದೊಡ್ಡ ಮನಸ್ಸಿನಿಂದ ಎಲ್ಲರ ಮನಸ್ಸು ಗೆದ್ದಿದ್ದಾರೆ. ಚಿರು ಸರ್ ರೀ-ಎಂಟ್ರಿ ಸಿನಿಮಾ ಆಗಿದ್ರಿಂದ ಪೃಥ್ವಿ ತಮ್ಮ ಪಾತ್ರ ಇರಲಿ ಅಂತ ಬಯಸಿದ್ದರು.