ಬಿಗ್‌ಬಿ ದಿವಾಳಿಯಾಗುವುದರಿಂದ ರಕ್ಷಿಸಿದ್ದು ಈ ರಾಜಕೀಯ ನಾಯಕ

First Published Aug 2, 2020, 3:11 PM IST

ರಾಜ್ಯಸಭಾ ಸಂಸದ ಮತ್ತು ಸಮಾಜವಾದಿ ಪಕ್ಷದ ಮಾಜಿ ಮುಖಂಡ ಅಮರ್ ಸಿಂಗ್ ನಿನ್ನೆ ಅಂದರೆ ಅಗಸ್ಟ್‌ 1ರಂದು ನಿಧನರಾದರು. ಅಮರ್ ಸಿಂಗ್ ಹಾಗೂ ಅಮಿತಾಬ್ ಬಚ್ಚನ್‌ಗೂ ತುಂಬಾ ನಿಕಟ ಸಂಪರ್ಕ ಇತ್ತು ಎಂದು ಪರಿಗಣಿಸಲಾಗಿತ್ತು. ಅಮರ ಸಿಂಗ್ ಅವರೇ ಜಯ ಬಚ್ಚನ್‌ರನ್ನು ಸಮಾಜವಾದಿ ಪಕ್ಷಕ್ಕೆ  ಕರೆತಂದರು ಮತ್ತು ಅಮಿತಾಬ್  ಕೆಟ್ಟ ಕಾಲದಲ್ಲಿ ದಿವಾಳಿಯಾಗುವುದನ್ನು ರಕ್ಷಿಸಿದರು. ಆದರೆ  ನಂತರ ಇಬ್ಬರ ಸಂಬಂಧ ಬಿರುಕು ಬಿಟ್ಟಿತು.  ಅಮರ್ ಸಿಂಗ್ ಮತ್ತು ಅಮಿತಾಬ್ ಬಚ್ಚನ್ ಹೇಗೆ ಸ್ನೇಹಿತರಾದರು ಮತ್ತು ಇಬ್ಬರ ನಡುವಿನ ಅಸಮಾಧಾನಕ್ಕೆ ಕಾರಣವೇನು?

ಅಮಿತಾಬ್ ಬಚ್ಚನ್ 90 ರ ದಶಕದಲ್ಲಿ ತುಂಬಾ ಕಷ್ಷದ ಸ್ಥಿತಿಯಲ್ಲಿದ್ದರು. ಸಿನಿಮಾಗಳು ನಿರಂತರವಾಗಿ ಫ್ಲಾಪ್ ಆಗುತ್ತಿದ್ದವು. ಅವರ ಕಂಪನಿ ಎಬಿಸಿಎಲ್ ಕೂಡ ಮುಳುಗಿಹೋಯಿತು. ಪರಿಸ್ಥಿತಿ ತುಂಬಾ ಕೆಟ್ಟದಾಗಿದ್ದು, ಬಚ್ಚನ್ ಅವರ ಬಂಗಲೆಯ ಮಾರಾಟವಾಗುವ ಹಾಗೂ ನಟ ದಿವಾಳಿಯಾಗುವ ಪರಿಸ್ಥಿತಿ ಬಂದಿತ್ತು.
undefined
ಅಂತಹ ಸಮಯದಲ್ಲಿ, ಅಮರ್ ಸಿಂಗ್ ಸ್ನೇಹಕ್ಕೆ ಕೈ ಚಾಚಿದರು ಮತ್ತು ಅಮಿತಾಬ್ ಬಚ್ಚನ್ ಸಾಲದಿಂದ ಚೇತರಿಸಿಕೊಂಡರು. ಈ ಸ್ನೇಹ ಬಹಳ ಕಾಲ ಉಳಿಯಿತು.
undefined
ಜಯ ಬಚ್ಚನ್‌ನ್ನು ಸಮಾಜವಾದಿ ಪಕ್ಷಕ್ಕೆ ಕರೆತಂದವರು ಅಮರ್ ಸಿಂಗ್. ಜಯ ನಾಲ್ಕು ಬಾರಿ ರಾಜ್ಯಸಭಾ ಸಂಸದೆಯಾಗಿದ್ದರು.
undefined
ಜಯ ಅವರ ರಾಜಕೀಯ ಪ್ರವೇಶವನ್ನು ಅಮಿತಾಬ್ ಆರಂಭದಲ್ಲೇ ವಿರೋಧಿಸಿದ್ದರು ಆದರೆ ಅಮರ್ ಸಿಂಗ್ ಅವರ ಮನವೊಲಿಸಿದರು ಎನ್ನಲಾಗಿದೆ.
undefined
2010 ರಲ್ಲಿ, ಅಮರ್ ಸಿಂಗ್‌ಗೆ ಸಮಾಜವಾದಿ ಪಕ್ಷದಿಂದ ಹೊರಹಾಕಲಾಯಿತು. ಆ ಸಮಯದಲ್ಲಿ ಜಯರನ್ನು ಪಕ್ಷದಿಂದ ಹೊರಬರುವಂತೆ ಕೇಳಿಕೊಂಡರು. ಜಯ ಒಪ್ಪಲಿಲ್ಲ. ಇದರಿಂದ ಅವರ ಸ್ನೇಹದಲ್ಲಿ ಬಿರುಕು ಬಿಡಲು ಪ್ರಾರಂಭಿಸಿತು.
undefined
2012 ರಲ್ಲಿ ಅನಿಲ್ ಅಂಬಾನಿ ಮನೆಯ ಪಾರ್ಟಿಯಲ್ಲಿ ಅನೇಕ ಪ್ರಮುಖರು ಪಕ್ಷವನ್ನು ತಲುಪಿದ್ದರು ಹಾಜಾರಿದ್ದರು. ಆ ಸಮಯದಲ್ಲಿ. ಅಮರ್ ಸಿಂಗ್ ಹಾಗೂ ಜಯ ಬಚ್ಚನ್ ನಡುವೆ ವಿವಾದವಾಯಿತು. ಅವರ ನಡುವಿನ ಅಂತರಕ್ಕೆ ಇದು ಕಾರಣವಾಯಿತು. ಇದರ ನಂತರ, ಅಮರ್ ಸಿಂಗ್ ಬಚ್ಚನ್ ಕುಟುಂಬವನ್ನು ಹಲವಾರು ಬಾರಿ ಟೀಕೆಗೆ ಗುರಿಯಾಗಿಸಿದ್ದರು.
undefined
ಅಮರ್ ಸಿಂಗ್ ಈ ವರ್ಷದ ಫೆಬ್ರವರಿಯಲ್ಲಿ ವೀಡಿಯೊವನ್ನು ಬಿಡುಗಡೆ ಅಮಿತಾಬ್ ಬಚ್ಚನ್‌ಗೆ ಕ್ಷಮೆಯಾಚಿಸಿದರು. 'ಇಂದು ನನ್ನ ತಂದೆಯ ಪುಣ್ಯತಿಥಿ ಮತ್ತು ಅದರ ಬಗ್ಗೆ ನನಗೆ ಅಮಿತಾಬ್‌ರಿಂದ ಮೆಸೇಜ್‌ ಬಂದಿದೆ. ನನ್ನ ಜೀವನದ ಈ ಹಂತದಲ್ಲಿ, ನಾನು ಬದುಕು ಮತ್ತು ಸಾವಿನೊಂದಿಗೆ ಹೋರಾಡುತ್ತಿರುವಾಗ, ಅಮಿತ್ ಜಿ ಮತ್ತು ಅವರ ಕುಟುಂಬದ ಬಗ್ಗೆ ಮಿತಿ ಮೀರಿ ಮಾತನಾಡಿರುವುದಕ್ಕೆ ವಿಷಾದಿಸುತ್ತೇನೆ. ದೇವರು ಅವರ ಕುಟುಂಬವನ್ನು ಆಶೀರ್ವದಿಸಲಿ ಎಂದು' ವೀಡಿಯೊದಲ್ಲಿ ಹೇಳಿದ್ದರು.
undefined
'ನಾನು ಅಮಿತಾಬ್ ಬಚ್ಚನ್ ಅವರನ್ನು ಭೇಟಿಯಾಗುವ ಮೊದಲೇ, ಅವರು ಮತ್ತು ಜಯ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಒಬ್ಬರು ಪ್ರತೀಕ್ಷಾದಲ್ಲಿ ಮತ್ತು ಇನ್ನೊಬ್ಬರು ಜನಕ್ ಎಂಬ ಬಂಗಲೆಯಲ್ಲಿ ವಾಸಿಸುತ್ತಿದ್ದರು' ಎಂದು 2017 ರಲ್ಲಿ, ಅಮರ್ ಸಿಂಗ್ ಸಂದರ್ಶನವೊಂದರಲ್ಲಿ ಹೇಳಿದ್ದರು.
undefined
ಅಮರ್ ಸಿಂಗ್ ಜನವರಿ 27, 1956 ರಂದು ಯುಪಿಯಲ್ಲಿ ಜನಿಸಿದರು. ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯಸಭಾ ಸಂಸದರಾಗಿದ್ದರು. 6 ಜನವರಿ 2010 ರಂದು ಅವರು ಸಮಾಜವಾದಿ ಪಕ್ಷದ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿದರು. 2016 ರಲ್ಲಿ ಅವರು ಸಮಾಜವಾದಿ ಪಕ್ಷಕ್ಕೆ ಮರಳಿದರು.
undefined
ಒಂದು ಕಾಲದಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥರಾಗಿದ್ದ ಮುಲಾಯಂ ಸಿಂಗ್ ಯಾದವ್‌ರ ಬಲಗೈ ವ್ಯಕ್ತಿ ಎಂದು ಪರಿಗಣಿಸಲ್ಪಟ್ಟ ಅಮರ್ ಸಿಂಗ್ ಅವರನ್ನು ಮೊದಲು 1996 ರ ನವೆಂಬರ್‌ನಲ್ಲಿ ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಯಿತು.
undefined
ಅಮರ್‌ ಸಿಂಗ್‌ ಜೊತೆ ಅಮಿತಾಬ್‌ ಫ್ಯಾಮಿಲಿ.
undefined
ಜಯಾ, ಐಶ್ವರ್ಯಾ ಹಾಗೂ ಅಭಿಷೇಕ್‌ ಬಚ್ಚನ್‌ ಜೊತೆ ಅಮರ್‌ ಸಿಂಗ್‌.
undefined
click me!