Published : Aug 02, 2020, 03:11 PM ISTUpdated : Aug 04, 2020, 03:48 PM IST
ರಾಜ್ಯಸಭಾ ಸಂಸದ ಮತ್ತು ಸಮಾಜವಾದಿ ಪಕ್ಷದ ಮಾಜಿ ಮುಖಂಡ ಅಮರ್ ಸಿಂಗ್ ನಿನ್ನೆ ಅಂದರೆ ಅಗಸ್ಟ್ 1ರಂದು ನಿಧನರಾದರು. ಅಮರ್ ಸಿಂಗ್ ಹಾಗೂ ಅಮಿತಾಬ್ ಬಚ್ಚನ್ಗೂ ತುಂಬಾ ನಿಕಟ ಸಂಪರ್ಕ ಇತ್ತು ಎಂದು ಪರಿಗಣಿಸಲಾಗಿತ್ತು. ಅಮರ ಸಿಂಗ್ ಅವರೇ ಜಯ ಬಚ್ಚನ್ರನ್ನು ಸಮಾಜವಾದಿ ಪಕ್ಷಕ್ಕೆ ಕರೆತಂದರು ಮತ್ತು ಅಮಿತಾಬ್ ಕೆಟ್ಟ ಕಾಲದಲ್ಲಿ ದಿವಾಳಿಯಾಗುವುದನ್ನು ರಕ್ಷಿಸಿದರು. ಆದರೆ ನಂತರ ಇಬ್ಬರ ಸಂಬಂಧ ಬಿರುಕು ಬಿಟ್ಟಿತು. ಅಮರ್ ಸಿಂಗ್ ಮತ್ತು ಅಮಿತಾಬ್ ಬಚ್ಚನ್ ಹೇಗೆ ಸ್ನೇಹಿತರಾದರು ಮತ್ತು ಇಬ್ಬರ ನಡುವಿನ ಅಸಮಾಧಾನಕ್ಕೆ ಕಾರಣವೇನು?
ಅಮಿತಾಬ್ ಬಚ್ಚನ್ 90 ರ ದಶಕದಲ್ಲಿ ತುಂಬಾ ಕಷ್ಷದ ಸ್ಥಿತಿಯಲ್ಲಿದ್ದರು. ಸಿನಿಮಾಗಳು ನಿರಂತರವಾಗಿ ಫ್ಲಾಪ್ ಆಗುತ್ತಿದ್ದವು. ಅವರ ಕಂಪನಿ ಎಬಿಸಿಎಲ್ ಕೂಡ ಮುಳುಗಿಹೋಯಿತು. ಪರಿಸ್ಥಿತಿ ತುಂಬಾ ಕೆಟ್ಟದಾಗಿದ್ದು, ಬಚ್ಚನ್ ಅವರ ಬಂಗಲೆಯ ಮಾರಾಟವಾಗುವ ಹಾಗೂ ನಟ ದಿವಾಳಿಯಾಗುವ ಪರಿಸ್ಥಿತಿ ಬಂದಿತ್ತು.
ಅಮಿತಾಬ್ ಬಚ್ಚನ್ 90 ರ ದಶಕದಲ್ಲಿ ತುಂಬಾ ಕಷ್ಷದ ಸ್ಥಿತಿಯಲ್ಲಿದ್ದರು. ಸಿನಿಮಾಗಳು ನಿರಂತರವಾಗಿ ಫ್ಲಾಪ್ ಆಗುತ್ತಿದ್ದವು. ಅವರ ಕಂಪನಿ ಎಬಿಸಿಎಲ್ ಕೂಡ ಮುಳುಗಿಹೋಯಿತು. ಪರಿಸ್ಥಿತಿ ತುಂಬಾ ಕೆಟ್ಟದಾಗಿದ್ದು, ಬಚ್ಚನ್ ಅವರ ಬಂಗಲೆಯ ಮಾರಾಟವಾಗುವ ಹಾಗೂ ನಟ ದಿವಾಳಿಯಾಗುವ ಪರಿಸ್ಥಿತಿ ಬಂದಿತ್ತು.
212
ಅಂತಹ ಸಮಯದಲ್ಲಿ, ಅಮರ್ ಸಿಂಗ್ ಸ್ನೇಹಕ್ಕೆ ಕೈ ಚಾಚಿದರು ಮತ್ತು ಅಮಿತಾಬ್ ಬಚ್ಚನ್ ಸಾಲದಿಂದ ಚೇತರಿಸಿಕೊಂಡರು. ಈ ಸ್ನೇಹ ಬಹಳ ಕಾಲ ಉಳಿಯಿತು.
ಅಂತಹ ಸಮಯದಲ್ಲಿ, ಅಮರ್ ಸಿಂಗ್ ಸ್ನೇಹಕ್ಕೆ ಕೈ ಚಾಚಿದರು ಮತ್ತು ಅಮಿತಾಬ್ ಬಚ್ಚನ್ ಸಾಲದಿಂದ ಚೇತರಿಸಿಕೊಂಡರು. ಈ ಸ್ನೇಹ ಬಹಳ ಕಾಲ ಉಳಿಯಿತು.
312
ಜಯ ಬಚ್ಚನ್ನ್ನು ಸಮಾಜವಾದಿ ಪಕ್ಷಕ್ಕೆ ಕರೆತಂದವರು ಅಮರ್ ಸಿಂಗ್. ಜಯ ನಾಲ್ಕು ಬಾರಿ ರಾಜ್ಯಸಭಾ ಸಂಸದೆಯಾಗಿದ್ದರು.
ಜಯ ಬಚ್ಚನ್ನ್ನು ಸಮಾಜವಾದಿ ಪಕ್ಷಕ್ಕೆ ಕರೆತಂದವರು ಅಮರ್ ಸಿಂಗ್. ಜಯ ನಾಲ್ಕು ಬಾರಿ ರಾಜ್ಯಸಭಾ ಸಂಸದೆಯಾಗಿದ್ದರು.
412
ಜಯ ಅವರ ರಾಜಕೀಯ ಪ್ರವೇಶವನ್ನು ಅಮಿತಾಬ್ ಆರಂಭದಲ್ಲೇ ವಿರೋಧಿಸಿದ್ದರು ಆದರೆ ಅಮರ್ ಸಿಂಗ್ ಅವರ ಮನವೊಲಿಸಿದರು ಎನ್ನಲಾಗಿದೆ.
ಜಯ ಅವರ ರಾಜಕೀಯ ಪ್ರವೇಶವನ್ನು ಅಮಿತಾಬ್ ಆರಂಭದಲ್ಲೇ ವಿರೋಧಿಸಿದ್ದರು ಆದರೆ ಅಮರ್ ಸಿಂಗ್ ಅವರ ಮನವೊಲಿಸಿದರು ಎನ್ನಲಾಗಿದೆ.
512
2010 ರಲ್ಲಿ, ಅಮರ್ ಸಿಂಗ್ಗೆ ಸಮಾಜವಾದಿ ಪಕ್ಷದಿಂದ ಹೊರಹಾಕಲಾಯಿತು. ಆ ಸಮಯದಲ್ಲಿ ಜಯರನ್ನು ಪಕ್ಷದಿಂದ ಹೊರಬರುವಂತೆ ಕೇಳಿಕೊಂಡರು. ಜಯ ಒಪ್ಪಲಿಲ್ಲ. ಇದರಿಂದ ಅವರ ಸ್ನೇಹದಲ್ಲಿ ಬಿರುಕು ಬಿಡಲು ಪ್ರಾರಂಭಿಸಿತು.
2010 ರಲ್ಲಿ, ಅಮರ್ ಸಿಂಗ್ಗೆ ಸಮಾಜವಾದಿ ಪಕ್ಷದಿಂದ ಹೊರಹಾಕಲಾಯಿತು. ಆ ಸಮಯದಲ್ಲಿ ಜಯರನ್ನು ಪಕ್ಷದಿಂದ ಹೊರಬರುವಂತೆ ಕೇಳಿಕೊಂಡರು. ಜಯ ಒಪ್ಪಲಿಲ್ಲ. ಇದರಿಂದ ಅವರ ಸ್ನೇಹದಲ್ಲಿ ಬಿರುಕು ಬಿಡಲು ಪ್ರಾರಂಭಿಸಿತು.
612
2012 ರಲ್ಲಿ ಅನಿಲ್ ಅಂಬಾನಿ ಮನೆಯ ಪಾರ್ಟಿಯಲ್ಲಿ ಅನೇಕ ಪ್ರಮುಖರು ಪಕ್ಷವನ್ನು ತಲುಪಿದ್ದರು ಹಾಜಾರಿದ್ದರು. ಆ ಸಮಯದಲ್ಲಿ. ಅಮರ್ ಸಿಂಗ್ ಹಾಗೂ ಜಯ ಬಚ್ಚನ್ ನಡುವೆ ವಿವಾದವಾಯಿತು. ಅವರ ನಡುವಿನ ಅಂತರಕ್ಕೆ ಇದು ಕಾರಣವಾಯಿತು. ಇದರ ನಂತರ, ಅಮರ್ ಸಿಂಗ್ ಬಚ್ಚನ್ ಕುಟುಂಬವನ್ನು ಹಲವಾರು ಬಾರಿ ಟೀಕೆಗೆ ಗುರಿಯಾಗಿಸಿದ್ದರು.
2012 ರಲ್ಲಿ ಅನಿಲ್ ಅಂಬಾನಿ ಮನೆಯ ಪಾರ್ಟಿಯಲ್ಲಿ ಅನೇಕ ಪ್ರಮುಖರು ಪಕ್ಷವನ್ನು ತಲುಪಿದ್ದರು ಹಾಜಾರಿದ್ದರು. ಆ ಸಮಯದಲ್ಲಿ. ಅಮರ್ ಸಿಂಗ್ ಹಾಗೂ ಜಯ ಬಚ್ಚನ್ ನಡುವೆ ವಿವಾದವಾಯಿತು. ಅವರ ನಡುವಿನ ಅಂತರಕ್ಕೆ ಇದು ಕಾರಣವಾಯಿತು. ಇದರ ನಂತರ, ಅಮರ್ ಸಿಂಗ್ ಬಚ್ಚನ್ ಕುಟುಂಬವನ್ನು ಹಲವಾರು ಬಾರಿ ಟೀಕೆಗೆ ಗುರಿಯಾಗಿಸಿದ್ದರು.
712
ಅಮರ್ ಸಿಂಗ್ ಈ ವರ್ಷದ ಫೆಬ್ರವರಿಯಲ್ಲಿ ವೀಡಿಯೊವನ್ನು ಬಿಡುಗಡೆ ಅಮಿತಾಬ್ ಬಚ್ಚನ್ಗೆ ಕ್ಷಮೆಯಾಚಿಸಿದರು. 'ಇಂದು ನನ್ನ ತಂದೆಯ ಪುಣ್ಯತಿಥಿ ಮತ್ತು ಅದರ ಬಗ್ಗೆ ನನಗೆ ಅಮಿತಾಬ್ರಿಂದ ಮೆಸೇಜ್ ಬಂದಿದೆ. ನನ್ನ ಜೀವನದ ಈ ಹಂತದಲ್ಲಿ, ನಾನು ಬದುಕು ಮತ್ತು ಸಾವಿನೊಂದಿಗೆ ಹೋರಾಡುತ್ತಿರುವಾಗ, ಅಮಿತ್ ಜಿ ಮತ್ತು ಅವರ ಕುಟುಂಬದ ಬಗ್ಗೆ ಮಿತಿ ಮೀರಿ ಮಾತನಾಡಿರುವುದಕ್ಕೆ ವಿಷಾದಿಸುತ್ತೇನೆ. ದೇವರು ಅವರ ಕುಟುಂಬವನ್ನು ಆಶೀರ್ವದಿಸಲಿ ಎಂದು' ವೀಡಿಯೊದಲ್ಲಿ ಹೇಳಿದ್ದರು.
ಅಮರ್ ಸಿಂಗ್ ಈ ವರ್ಷದ ಫೆಬ್ರವರಿಯಲ್ಲಿ ವೀಡಿಯೊವನ್ನು ಬಿಡುಗಡೆ ಅಮಿತಾಬ್ ಬಚ್ಚನ್ಗೆ ಕ್ಷಮೆಯಾಚಿಸಿದರು. 'ಇಂದು ನನ್ನ ತಂದೆಯ ಪುಣ್ಯತಿಥಿ ಮತ್ತು ಅದರ ಬಗ್ಗೆ ನನಗೆ ಅಮಿತಾಬ್ರಿಂದ ಮೆಸೇಜ್ ಬಂದಿದೆ. ನನ್ನ ಜೀವನದ ಈ ಹಂತದಲ್ಲಿ, ನಾನು ಬದುಕು ಮತ್ತು ಸಾವಿನೊಂದಿಗೆ ಹೋರಾಡುತ್ತಿರುವಾಗ, ಅಮಿತ್ ಜಿ ಮತ್ತು ಅವರ ಕುಟುಂಬದ ಬಗ್ಗೆ ಮಿತಿ ಮೀರಿ ಮಾತನಾಡಿರುವುದಕ್ಕೆ ವಿಷಾದಿಸುತ್ತೇನೆ. ದೇವರು ಅವರ ಕುಟುಂಬವನ್ನು ಆಶೀರ್ವದಿಸಲಿ ಎಂದು' ವೀಡಿಯೊದಲ್ಲಿ ಹೇಳಿದ್ದರು.
812
'ನಾನು ಅಮಿತಾಬ್ ಬಚ್ಚನ್ ಅವರನ್ನು ಭೇಟಿಯಾಗುವ ಮೊದಲೇ, ಅವರು ಮತ್ತು ಜಯ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಒಬ್ಬರು ಪ್ರತೀಕ್ಷಾದಲ್ಲಿ ಮತ್ತು ಇನ್ನೊಬ್ಬರು ಜನಕ್ ಎಂಬ ಬಂಗಲೆಯಲ್ಲಿ ವಾಸಿಸುತ್ತಿದ್ದರು' ಎಂದು 2017 ರಲ್ಲಿ, ಅಮರ್ ಸಿಂಗ್ ಸಂದರ್ಶನವೊಂದರಲ್ಲಿ ಹೇಳಿದ್ದರು.
'ನಾನು ಅಮಿತಾಬ್ ಬಚ್ಚನ್ ಅವರನ್ನು ಭೇಟಿಯಾಗುವ ಮೊದಲೇ, ಅವರು ಮತ್ತು ಜಯ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಒಬ್ಬರು ಪ್ರತೀಕ್ಷಾದಲ್ಲಿ ಮತ್ತು ಇನ್ನೊಬ್ಬರು ಜನಕ್ ಎಂಬ ಬಂಗಲೆಯಲ್ಲಿ ವಾಸಿಸುತ್ತಿದ್ದರು' ಎಂದು 2017 ರಲ್ಲಿ, ಅಮರ್ ಸಿಂಗ್ ಸಂದರ್ಶನವೊಂದರಲ್ಲಿ ಹೇಳಿದ್ದರು.
912
ಅಮರ್ ಸಿಂಗ್ ಜನವರಿ 27, 1956 ರಂದು ಯುಪಿಯಲ್ಲಿ ಜನಿಸಿದರು. ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯಸಭಾ ಸಂಸದರಾಗಿದ್ದರು. 6 ಜನವರಿ 2010 ರಂದು ಅವರು ಸಮಾಜವಾದಿ ಪಕ್ಷದ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿದರು. 2016 ರಲ್ಲಿ ಅವರು ಸಮಾಜವಾದಿ ಪಕ್ಷಕ್ಕೆ ಮರಳಿದರು.
ಅಮರ್ ಸಿಂಗ್ ಜನವರಿ 27, 1956 ರಂದು ಯುಪಿಯಲ್ಲಿ ಜನಿಸಿದರು. ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯಸಭಾ ಸಂಸದರಾಗಿದ್ದರು. 6 ಜನವರಿ 2010 ರಂದು ಅವರು ಸಮಾಜವಾದಿ ಪಕ್ಷದ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿದರು. 2016 ರಲ್ಲಿ ಅವರು ಸಮಾಜವಾದಿ ಪಕ್ಷಕ್ಕೆ ಮರಳಿದರು.
1012
ಒಂದು ಕಾಲದಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥರಾಗಿದ್ದ ಮುಲಾಯಂ ಸಿಂಗ್ ಯಾದವ್ರ ಬಲಗೈ ವ್ಯಕ್ತಿ ಎಂದು ಪರಿಗಣಿಸಲ್ಪಟ್ಟ ಅಮರ್ ಸಿಂಗ್ ಅವರನ್ನು ಮೊದಲು 1996 ರ ನವೆಂಬರ್ನಲ್ಲಿ ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಯಿತು.
ಒಂದು ಕಾಲದಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥರಾಗಿದ್ದ ಮುಲಾಯಂ ಸಿಂಗ್ ಯಾದವ್ರ ಬಲಗೈ ವ್ಯಕ್ತಿ ಎಂದು ಪರಿಗಣಿಸಲ್ಪಟ್ಟ ಅಮರ್ ಸಿಂಗ್ ಅವರನ್ನು ಮೊದಲು 1996 ರ ನವೆಂಬರ್ನಲ್ಲಿ ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಯಿತು.
1112
ಅಮರ್ ಸಿಂಗ್ ಜೊತೆ ಅಮಿತಾಬ್ ಫ್ಯಾಮಿಲಿ.
ಅಮರ್ ಸಿಂಗ್ ಜೊತೆ ಅಮಿತಾಬ್ ಫ್ಯಾಮಿಲಿ.
1212
ಜಯಾ, ಐಶ್ವರ್ಯಾ ಹಾಗೂ ಅಭಿಷೇಕ್ ಬಚ್ಚನ್ ಜೊತೆ ಅಮರ್ ಸಿಂಗ್.
ಜಯಾ, ಐಶ್ವರ್ಯಾ ಹಾಗೂ ಅಭಿಷೇಕ್ ಬಚ್ಚನ್ ಜೊತೆ ಅಮರ್ ಸಿಂಗ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.