ಅಲ್ಲು ಅರ್ಜುನ್, ತ್ರಿವಿಕ್ರಮ್ ಈಗಾಗಲೇ `ಜುಲಾಯಿ`, `ಸನ್ನಾಫ್ ಸತ್ಯಮೂರ್ತಿ`, `ಅಲ ವೈಕುಂಠಪುರಮುಲೋ` ಚಿತ್ರಗಳ ಮೂಲಕ ಹ್ಯಾಟ್ರಿಕ್ ಹೊಡೆದಿದ್ದಾರೆ. ಈಗ ಮತ್ತೊಂದು ಹಿಟ್ಗೆ ರೆಡಿ ಆಗ್ತಿದ್ದಾರೆ. ಬನ್ನಿ ಮುಂದಿನ ಚಿತ್ರ ತ್ರಿವಿಕ್ರಮ್ ಜೊತೆ ಇರುತ್ತೆ ಅಂತ ನಿರ್ಮಾಪಕ ನಾಗವಂಶಿ ಮತ್ತು ಬನ್ನಿ ವಾಸು ಹೇಳಿದ್ದಾರೆ.
ಹಾರಿಕಾ ಅಂಡ್ ಹಾಸಿನಿ, ಗೀತಾ ಆರ್ಟ್ಸ್ ಕಾಂಬಿನೇಷನ್ನಲ್ಲಿ ಈ ಚಿತ್ರ ಇರಲಿದೆ. ಮುಂದಿನ ವರ್ಷ ಚಿತ್ರ ಆರಂಭವಾಗಲಿದೆಯಂತೆ. ಬೇಸಿಗೆಯಲ್ಲಿ ಶುರುವಾಗುವ ಸಾಧ್ಯತೆ ಇದೆ. ಚಿತ್ರಕಥೆ ಕೆಲಸ ನಡೀತಿದೆ, ತ್ರಿವಿಕ್ರಮ್ ಪೂರ್ವ ನಿರ್ಮಾಣ ಕಾರ್ಯಗಳಲ್ಲಿ ಬ್ಯುಸಿ ಇದ್ದಾರೆ ಅಂತ ತಿಳಿದುಬಂದಿದೆ.