ವೀರ ಧೀರ ಸೂರನ್ ಆಡಿಯೋ ಲಾಂಚ್ನಲ್ಲಿ ನಟ ಸೂರಜ್ ತಮ್ಮ ವೈಯಕ್ತಿಕ ಜೀವನದ ಕುರಿತು ಮಾತನಾಡಿದ್ದಾರೆ. ಮಕ್ಕಳು ಹುಟ್ಟಿದಾಗ ಪ್ರಶಸ್ತಿಗಳು ಬಂದ ಬಗ್ಗೆ ಅವರು ಹೇಳಿದ ಮಾತುಗಳು ವೈರಲ್ ಆಗಿವೆ.
ವೀರ ಧೀರ ಸೂರನ್ ಆಡಿಯೋ ಲಾಂಚ್ನಲ್ಲಿ ಸೂರಜ್ ಮಾತು: ವಿಕ್ರಮ್ ನಾಯಕನಾಗಿ ನಟಿಸಿರುವ ಸಿನಿಮಾ ವೀರ ಧೀರ ಸೂರನ್. ಈ ಚಿತ್ರವನ್ನು ಸಿದ್ದಾ ಚಿತ್ರದ ನಿರ್ದೇಶಕ ಅರುಣ್ ಕುಮಾರ್ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ನಟ ವಿಕ್ರಮ್, ಕಾಳಿ ಪಾತ್ರದಲ್ಲಿ ನಟಿಸಿದ್ದಾರೆ. ಅವರಿಗೆ ಜೋಡಿಯಾಗಿ ತುಷಾರಾ ವಿಜಯನ್, ಕಲೈವಾಣಿ ಪಾತ್ರದಲ್ಲಿ ನಟಿಸಿದ್ದಾರೆ. ಅಲ್ಲದೆ ಈ ಚಿತ್ರದಲ್ಲಿ ನಟ ಎಸ್.ಜೆ.ಸೂರ್ಯ, ಮಲಯಾಳಂ ನಟ ಸೂರಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಜಿವಿ ಪ್ರಕಾಶ್ ಕುಮಾರ್ ಸಂಗೀತ ನೀಡಿದ್ದಾರೆ.
ವೀರ ಧೀರ ಸೂರನ್ ಸಿನಿಮಾ ಮಾರ್ಚ್ 27ರಂದು ತೆರೆಗೆ ಬರಲಿದೆ. ಚಿತ್ರ ಬಿಡುಗಡೆಯಾಗಲಿರುವ ಹಿನ್ನೆಲೆಯಲ್ಲಿ ಚಿತ್ರದ ಪ್ರಮೋಷನ್ ಕಾರ್ಯಗಳು ಬಿರುಸಿನಿಂದ ಸಾಗುತ್ತಿದ್ದು, ಮಾ 20ರಂದು ಚೆನ್ನೈನ ವೇಲ್ಸ್ ಕಾಲೇಜಿನಲ್ಲಿ ಚಿತ್ರದ ಮ್ಯೂಸಿಕ್ ಮತ್ತು ಟ್ರೇಲರ್ ಬಿಡುಗಡೆ ಸಮಾರಂಭ ನಡೆಯಿತು. ಇದರಲ್ಲಿ ಚಿತ್ರತಂಡ ಭಾಗವಹಿಸಿತ್ತು. ಈ ಸಮಾರಂಭದಲ್ಲಿ ಮಲಯಾಳಂ ನಟ ಸೂರಜ್ ಮಾತನಾಡಿದ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಮಲಯಾಳಂನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಸೂರಜ್, ತಮಿಳಿನಲ್ಲಿ ವೀರ ಧೀರ ಸೂರನ್ ಸಿನಿಮಾ ಮೂಲಕ ಪರಿಚಯವಾಗುತ್ತಿದ್ದಾರೆ. ಇದರ ಆಡಿಯೋ ಲಾಂಚ್ನಲ್ಲಿ ಒಂದು ಇಂಟರೆಸ್ಟಿಂಗ್ ವಿಷಯವನ್ನು ಸೂರಜ್ ಹಂಚಿಕೊಂಡಿದ್ದಾರೆ. ಅದರ ಪ್ರಕಾರ ಅವರಿಗೆ ಮೊದಲ ಮಗು ಹುಟ್ಟಿದಾಗ, ಮೊದಲ ಬಾರಿಗೆ ಕೇರಳ ರಾಜ್ಯ ಸರ್ಕಾರದ ಪ್ರಶಸ್ತಿ ಸಿಕ್ಕಿತಂತೆ. ನಂತರ ಎರಡನೇ ಮಗು ಹುಟ್ಟಿದಾಗ ಅವರಿಗೆ ಎರಡನೇ ಬಾರಿಗೆ ಅತ್ಯುತ್ತಮ ನಟ ಕೇರಳ ರಾಜ್ಯ ಸರ್ಕಾರದ ಪ್ರಶಸ್ತಿ ಸಿಕ್ಕಿದೆ.
44
ಇದು ಚೆನ್ನಾಗಿದೆ ಅಲ್ವಾ... ಮೂರನೆಯದಾಗಿ ಅವರಿಗೆ ಹೆಣ್ಣು ಮಗು ಹುಟ್ಟಿದೆ. ಆಗ ಅವರಿಗೆ ಕೇರಳ ಸರ್ಕಾರದ ರಾಜ್ಯ ಪ್ರಶಸ್ತಿಯೊಂದಿಗೆ ಮೊದಲ ಬಾರಿಗೆ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿತಂತೆ. ಇನ್ನು ನನಗೆ ಆಸ್ಕರ್ ಪ್ರಶಸ್ತಿ ಸಿಕ್ಕರೆ ಅದಕ್ಕಾಗಿ ನಾನು ನಾಲ್ಕನೇ ಮಗುವನ್ನು ಪಡೆಯಲು ಸಿದ್ಧ ಎಂದು ಸೂರಜ್ ಹೇಳಿದ್ದನ್ನು ಕೇಳಿ ನಟ ಎಸ್.ಜೆ.ಸೂರ್ಯ, ಚೀಯಾನ್ ವಿಕ್ರಮ್, ನಿರ್ದೇಶಕ ಅರುಣ್ಕುಮಾರ್ ನಕ್ಕರು. ಅವರ ಈ ಮಾತು ವೈರಲ್ ಆಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.