ಕೇಂದ್ರ ಸರ್ಕಾರವು 'ಸಮುದ್ರ ಮಂಥನ' ಎಂಬ ಬೃಹತ್ ಯೋಜನೆಯನ್ನು ಘೋಷಿಸಿದೆ. ಇದರ ಮುಖ್ಯ ಉದ್ದೇಶ ಸಮುದ್ರದಾಳದಲ್ಲಿ ತೈಲ ಮತ್ತು ನೈಸರ್ಗಿಕ ಅನಿಲ ನಿಕ್ಷೇಪಗಳನ್ನು ಪತ್ತೆಹಚ್ಚಿ, ವಿದೇಶಿ ಅವಲಂಬನೆಯನ್ನು ಕಡಿಮೆ ಮಾಡಿ ದೇಶವನ್ನು ಕಚ್ಚಾತೈಲ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಿಸುವುದಾಗಿದೆ.
ಜಾಗತಿಕ ಅಸ್ಥಿರತೆ ಹಾಗೂ ಅವಲಂಬನೆಯಿಂದಾಗಿ ದೇಶದಲ್ಲಿ ತೈಲಾನಿಲ ತತ್ವಾರ ತಲೆದೋರದಂತೆ ತಪ್ಪಿಸುವ ಉದ್ದೇಶದಿಂದ, ಸಮುದ್ರದಾಳದಲ್ಲಿ ತೈಲ ಹಾಗೂ ನೈಸರ್ಗಿಕ ಅನಿಲದ ನಿಕ್ಷೇಪಗಳ ಅನ್ವೇಷಣೆಗೆ ಕೇಂದ್ರ ಸರ್ಕಾರ ಸಮುದ್ರ ಮಂಥನ ಎಂಬ ಯೋಜನೆ ಘೋಷಿಸಿದೆ. ಇದಕ್ಕಾಗಿ 84,084 ಕೋಟಿ ರು. ಮೀಸಲಿಡಲು ಸಚಿವ ಸಂಪುಟ ಅನುಮೋದನೆ ನೀಡಿದೆ.
25
ಏನಿದು ಸಮುದ್ರ ಮಂಥನ ಯೋಜನೆ?
ತೈಲ ಮತ್ತು ಅನಿಲ ಬೇಡಿಕೆ ಪೂರೈಸಲು ಭಾರತದ ಸಮುದ್ರ ವ್ಯಾಪ್ತಿಯಲ್ಲೇ ತೈಲ ಸಂಶೋಧನೆ ಉದ್ದೇಶ ಈ ಯೋಜನೆಗಿದೆ. ಇದಕ್ಕಾಗಿ 2031ರ ಸರ್ಕಾರ 43,200 ಕೋಟಿ ರು. ವಿನಿಯೋಗಿಸಲಿದೆ.
35
ಖಾಸಗಿ ಕಂಪನಿಯವರು ತೋಡುವ ಬಾವಿಗೆ 650 ಕೋಟಿ
ಉಳಿದ 10 ಸಾವಿರ ಕೋಟಿ ರು.ಅನ್ನು ತೈಲ ಮತ್ತು ಅನಿಲದ ಉತ್ಪಾದನೆಗೆ ಅಗತ್ಯವಿರುವ ಮೂಲಸೌಕರ್ಯ ನಿರ್ಮಾಣಕ್ಕೆ, 28,534 ಕೋಟಿ ರು.ಅನ್ನು ಕರಾವಳಿಯಾಚೆಗಿನ ದತ್ತಾಂಶ ಸಂಗ್ರಹಣೆಗೆ, 2 ಸಾವಿರ ಕೋಟಿ ರು.ಅನ್ನು ತೈಲ ಮತ್ತು ಅನಿಲ ಉತ್ಪಾದನೆ ಹಾಗೂ ಸೇವಾ ವಲಯಗಳ ಅಭಿವೃದ್ಧಿಗೆ ಮೀಸಲಿಡಲಾಗಿದೆ. ಖಾಸಗಿ ವಲಯ ತೋಡುವ ಪ್ರತಿ ಬಾವಿಗೆ ಸರ್ಕಾರ 650 ಕೋಟಿ ರು. ನೀಡಲಿದೆ. ಬಾವಿಯ ಆಳಕ್ಕೆ ತಕ್ಕಂತೆ ವೆಚ್ಚವೂ ಹೆಚ್ಚಲಿದೆ.
ಭಾರತವು ಸದ್ಯ ಅಗತ್ಯವಿರುವ ಕಚ್ಚಾತೈಲದ ಶೇ.88ರಷ್ಟನ್ನು ವಿದೇಶಗಳಿಂದ ತರಿಸಿಕೊಳ್ಳುತ್ತಿದೆ. ನೈಸರ್ಗಿಕ ಅನಿಲದ ವಿಷಯದಲ್ಲಿ ಈ ಪ್ರಮಾಣ ಶೇ.50ರಷ್ಟಿದೆ. ಈ ಅವಲಂಬನೆಯಿಂದಾಗಿ, ಮಧ್ಯಪ್ರಾಚ್ಯ ಸಂಘರ್ಷದಂತಹ ಸಂದರ್ಭಗಳಲ್ಲಿ ದೇಶ ತೈಲಾನಿಲ ಕೊರತೆಯನ್ನು ಅನುಭವಿಸುವಂತಾಗಿದೆ. ಜತೆಗೆ ಅವುಗಳ ಆಮದಿಗಾಗಿಯೇ ವಿದೇಶಿ ವಿನಿಮಯದ ಬಹುಪಾಲು ಖರ್ಚಾಗುತ್ತಿದೆ.
55
ಕಚ್ಚಾತೈಲ ಕ್ಷೇತ್ರದಲ್ಲಿ ಸ್ವಾವಲಂಬನೆ ಗುರಿ
ಹೀಗಿರುವಾಗ ಕಚ್ಚಾತೈಲ ಮತ್ತು ಅನಿಲ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ಉದ್ದೇಶದಿಂದ ಈ ಯೋಜನೆ ಆರಂಭಿಸಲಾಗಿದೆ. 60 ಕೋಟಿ ಮೆಟ್ರಿಕ್ ಟನ್ ತೈಲ ಉತ್ಪಾದಿಸುವ ಸಾಮರ್ಥ್ಯದ ಹೊಸ ನಿಕ್ಷೇಪಗಳು ಪತ್ತೆಯಾಗುವ ನಿರೀಕ್ಷೆಯಿದೆ. ಇದು ಹೂಡಿಕೆಯನ್ನು ಆಕರ್ಷಿಸುವುದರ ಜತೆಗೆ ಉದ್ಯೋಗವನ್ನೂ ಸೃಷ್ಟಿಸುತ್ತದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.