ಸೈಕಲ್ ಚಕ್ರ ತಯಾರಿಸ್ತಿದ್ದ ಸಣ್ಣ ಕಂಪೆನಿಯ ಯುವಕ ಬಿಲಿಯನೇರ್‌ ಅಂಬಾನಿ ಕುಟುಂಬದ ಅಳಿಯ!

First Published Dec 14, 2023, 9:55 AM IST

ಮುಕೇಶ್ ಅಂಬಾನಿ ಭಾರತ ಮತ್ತು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ. ಬರೋಬ್ಬರಿ 798800 ಕೋಟಿ ರೂ. ಮೌಲ್ಯದ ಆಸ್ತಿ ಅಂಬಾನಿ ಕುಟುಂಬದ ಬಳಿಯಿದೆ. ಅಂಬಾನಿ ತಮ್ಮ ಮಕ್ಕಳನ್ನು ಸಹ ಹೆಸರಾಂತ ಉದ್ಯಮಿಗಳೊಂದಿಗೇ ಮದುವೆ ಮಾಡಿಸಿದ್ದಾರೆ. ಆದರೆ, ಸೈಕಲ್ ಚಕ್ರ ತಯಾರಿಸ್ತಿದ್ದ ಸಣ್ಣ ಕಂಪೆನಿಯ ಯುವಕ, ಬಿಲಿಯನೇರ್‌ ಅಂಬಾನಿ ಕುಟುಂಬದ ಅಳಿಯ ಆಗಿದ್ಹೇಗೆ?

ಮುಕೇಶ್ ಅಂಬಾನಿ ಭಾರತ ಮತ್ತು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ. ಬರೋಬ್ಬರಿ 798800 ಕೋಟಿ ರೂ. ಮೌಲ್ಯದ ಆಸ್ತಿ ಅಂಬಾನಿ ಕುಟುಂಬದ ಬಳಿಯಿದೆ. ಮುಕೇಶ್ ಅಂಬಾನಿ ಮತ್ತು ಅವರ ಸಹಾಯಕರು ರಸೆಲ್ ಮೆಹ್ತಾ, ವೀರೇನ್ ಮರ್ಚೆಂಟ್ ಮತ್ತು ಇತರರ ಕುಟುಂಬವನ್ನು ಒಳಗೊಂಡಿರುವ ಭಾರತದ ಕೆಲವು ಶ್ರೀಮಂತ ಕುಟುಂಬಗಳೊಂದಿಗೆ ಸಂಬಂಧ ಹೊಂದಿದ್ದಾರೆ. 

ಮುಕೇಶ್ ಅಂಬಾನಿ ಭಾರತದ ಶ್ರೀಮಂತರಲ್ಲಿ ಒಬ್ಬರಾದ ಪೊದ್ದಾರ್ ಕುಟುಂಬದೊಂದಿಗೆ ಸಂಬಂಧವನ್ನು ಹೊಂದಿದ್ದಾರೆ ಎಂಬುದು ಬಹುತೇಕರಿಗೆ ತಿಳಿದಿಲ್ಲ.

Latest Videos


ಫೋರ್ಬ್ಸ್ ಪ್ರಕಾರ, ಅರವಿಂದ್ ಪೊದ್ದಾರ್ ಮತ್ತು ಕುಟುಂಬ ಪ್ರಸ್ತುತ 30351 ಕೋಟಿ ರೂ. ಗಿಂತ ಹೆಚ್ಚು ನಿವ್ವಳ ಮೌಲ್ಯವನ್ನು ಹೊಂದಿದೆ. ಅರವಿಂದ್ ಪೊದ್ದಾರ್ ಮತ್ತು ಅಂಬಾನಿ ಕುಟುಂಬಕ್ಕೆ ಹೇಗೆ ಸಂಬಂಧವಿದೆ ಎಂಬ ಕುರಿತಾದ ಮಾಹಿತಿ ಇಲ್ಲಿದೆ.

ಅರವಿಂದ್ ಪೊದ್ದಾರ್ ಅವರ ಮಗ ರಾಜೀವ್ ಪೊದ್ದಾರ್ ಮನೋಜ್ ಮೋದಿಯವರ ಮಗಳನ್ನು ಮದುವೆಯಾಗಿದ್ದಾರೆ. ಮನೋಜ್ ಮೋದಿ, ರಿಲಯನ್ಸ್‌ ಇಂಡಸ್ಟ್ರೀಸ್‌ನಲ್ಲಿ ಮುಕೇಶ್ ಅಂಬಾನಿಯ ಬಲಗೈ ಎಂದೇ ಗುರುತಿಸಿಕೊಂಡಿದ್ದಾರೆ. ಅಂಬಾನಿಯ ರಿಲಯನ್ಸ್‌ ಗ್ರೂಪ್‌ನ ಹಲವು ಪ್ರಮುಖ ನಿರ್ಧಾರಗಳನ್ನು ಮನೋಜ್ ಮೋದಿ ತೆಗೆದುಕೊಳ್ಳುತ್ತಾರೆ. 

ಮುಕೇಶ್ ಅಂಬಾನಿಯವರ ಮೆಚ್ಚುಗೆಯ ಉಡುಗೊರೆಯಾಗಿ ಆಂಟಿಲಿಯಾ ಬಳಿ 1500 ಕೋಟಿ ರೂ. ಮನೆಯನ್ನು ಸಹ ಮನೋಜ್‌ ಮೋದಿ ಪಡೆದಿದ್ದಾರೆ.

ಅರವಿಂದ್ ಪೊದ್ದಾರ್ ಕುಟುಂಬವು ಕೃಷಿ, ಗಣಿಗಾರಿಕೆ ಮತ್ತು ನಿರ್ಮಾಣ ವಾಹನಗಳಿಗೆ ಉಪಕರಣಗಳು ಮತ್ತು ಆಫ್-ರೋಡ್ ಟೈರ್‌ಗಳನ್ನು ಒದಗಿಸುವ ಬಾಲಕೃಷ್ಣ ಇಂಡಸ್ಟ್ರೀಸ್‌ನ ನಿಯಂತ್ರಣವನ್ನು ಹೊಂದಿದೆ. 

ಅರವಿಂದ್ ಪೊದ್ದಾರ್ ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದರೆ. ರಾಜೀವ್ ಪೊದ್ದಾರ್ ಅವರು ಜಂಟಿ ವ್ಯವಸ್ಥಾಪಕ ನಿರ್ದೇಶಕರ ಸ್ಥಾನವನ್ನು ಹೊಂದಿದ್ದಾರೆ. ಮನೋಜ್ ಮೋದಿ ಅವರ ಪುತ್ರಿ ಮತ್ತು ರಾಜೀವ್ ಪೊದ್ದಾರ್ ಅವರ ಪತ್ನಿ ಖುಷ್ಬೂ ಪೊದ್ದಾರ್ ಅವರ ಕಂಪನಿಯಲ್ಲಿ ಜಂಟಿ ವ್ಯವಸ್ಥಾಪಕ ನಿರ್ದೇಶಕಿಯೂ ಆಗಿದ್ದಾರೆ. 

ಬಾಲಕೃಷ್ಣ ಇಂಡಸ್ಟ್ರೀಸ್ 1951 ರಲ್ಲಿ ಟೈರ್ ತಯಾರಿಕೆಯ ವ್ಯವಹಾರವನ್ನು ಆರಂಭಿಸಿತು. ಇದು 1963ರಲ್ಲಿ ತನ್ನ ಮೊದಲ ಬೈಸಿಕಲ್ ಟೈರ್‌ಗಳನ್ನು ತಯಾರಿಸಿತು. ಸಂಸ್ಥೆಯು 1990ರ ದಶಕದಲ್ಲಿ ಆಫ್-ರೋಡ್ ಟೈರ್‌ಗಳನ್ನು ತಯಾರಿಸುವ ಕ್ಷೇತ್ರವನ್ನು ಪ್ರವೇಶಿಸಿತು. ಅದು ಈಗ ಯುರೋಪ್ ಮತ್ತು ಅಮೆರಿಕದ ದೇಶಗಳಿಗೆ ಸರಬರಾಜು ಮಾಡುತ್ತಿದೆ.

ಫೋರ್ಬ್ಸ್ ಪಟ್ಟಿಯ ಪ್ರಕಾರ ಅರವಿಂದ್ ಪೊದ್ದಾರ್ ಪ್ರಸ್ತುತ 59ನೇ ಶ್ರೀಮಂತ ಭಾರತೀಯರಾಗಿದ್ದಾರೆ. ಬಿಲಿಯನೇರ್ ಸಂಸ್ಥೆಯು 2021ರಲ್ಲಿ ಪಶ್ಚಿಮ ರಾಜ್ಯವಾದ ಮಹಾರಾಷ್ಟ್ರದಲ್ಲಿ ಕೃಷಿ ಮತ್ತು ಕೈಗಾರಿಕಾ ಟೈರ್‌ಗಳನ್ನು ತಯಾರಿಸಲು ತನ್ನ ಹೊಸ ಕಾರ್ಖಾನೆಯನ್ನು ತೆರೆಯಿತು.

ಇತರ ಬಿಲಿಯನೇರ್‌ಗಳಿಗಿಂತ ಭಿನ್ನವಾಗಿ, ಅರವಿಂದ್ ಪೊದ್ದಾರ್ ಮತ್ತು ಅವರ ಕುಟುಂಬವು ಮಾಧ್ಯಮಗಳ ಕಣ್ಣಿನಿಂದ ದೂರವಿರುತ್ತಾರೆ. ಹೀಗಾಗಿ ಬಹುತೇಕರಿಗೆ ಇವರ ಬಗ್ಗೆ ತಿಳಿದಿಲ್ಲ.

click me!