ಭಾರತದಲ್ಲಿ ಬಾಯ್ಕಾಟ್ ಟರ್ಕಿ ತೀವ್ರಗೊಳ್ಳುತ್ತಿದೆ. ವ್ಯಾಪಾರಿಗಳು, ವರ್ತಕರು, ರೈತರು ಸೇರಿದಂತೆ ಹಲವರು ಟರ್ಕಿ ಜೊತೆ ತಮ್ಮ ತಮ್ಮ ಉತ್ಪನ್ನ, ಆಮದು, ರಫ್ತುಗಳನ್ನು ನಿಲ್ಲಿಸಿದ್ದಾರೆ. ಒಂದಡೆ ಭಾರತದ ವಿಶ್ವವಿದ್ಯಾಲಯಗಳು ಟರ್ಕಿ ಜೊತೆಗೆ ಶೈಕ್ಷಣಿಕ ಒಪ್ಪಂದ ರದ್ದುಗೊಳಿಸಿದೆ. ಇತ್ತ ಭಾರತ ಸರ್ಕಾರ ಕೂಡ ವಿಮನ ನಿಲ್ದಾಣಗಲ್ಲಿ ಟರ್ಕಿ ನೀಡುತ್ತಿದ್ದ ಸೇವೆಗೂ ನಿರ್ಬಂಧ ಹೇರಿದೆ. ಇನ್ನು ಹಲವು ವ್ಯಾಪಾರ ವಹಿವಾಟುಗಳು ಸ್ಥಗಿತಗೊಂಡಿದೆ. ಈ ಎಲ್ಲಾ ಬೆಳವಣಿಗೆಯಿಂದ ಟರ್ಕಿ ಆತಂಕಗೊಡಿದೆ. ಆದರೆ ಉದ್ಯಮಿ ಮುಕೇಶ್ ಅಂಬಾನಿ ಹಾಗೂ ಫ್ಲಿಪ್ಕಾರ್ಟ್ ಕೊಟ್ಟ ಹೊಡೆತಕ್ಕೆ ಟರ್ಕಿ ಕಂಗಾಲಾಗಿದೆ.