ಭೂಮಿ ಅಗೆಯುವಾಗ ನಿಧಿ ಅಥವಾ ಚಿನ್ನ ಸಿಕ್ಕರೆ, 1971ರಲ್ಲಿ ರೂಪಿಸಲಾದ ಟ್ರೆಷರ್ ಆಕ್ಟ್ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಈ ಕಾನೂನಿನ ಪ್ರಕಾರ ನಿಧಿ ಸಿಕ್ಕಿದ ವ್ಯಕ್ತಿ ಅದರ ಬಗ್ಗೆ ಪೊಲೀಸರಿಗೆ ಅಥವಾ ಅಧಿಕಾರಿಗಳಿಗೆ ತಿಳಿಸಬೇಕು. ನಂತರ ಅಧಿಕಾರಿಗಳು ಅದನ್ನು ವಶಪಡಿಸಿಕೊಂಡು ಸರ್ಕಾರಿ ಖಜಾನೆಗೆ ಜಮೆ ಮಾಡುತ್ತಾರೆ. ಒಂದು ವೇಳೆ ಆ ವಸ್ತುವಿಗೆ ಪುರಾತತ್ವ ಮಹತ್ವವಿದ್ದರೆ, ಅದನ್ನು ಅಧ್ಯಯನಕ್ಕಾಗಿ ಪುರಾತತ್ವ ಇಲಾಖೆಗೆ ಕಳುಹಿಸಲಾಗುತ್ತದೆ.