ಎಸ್ ರವೀಂದ್ರ ಅವರ ಪುತ್ರರ ವಿವಾಹ (2011): ನ್ಯೂಜಿಲೆಂಡ್ ಮೂಲದ ಉದ್ಯಮಿ ಎಸ್ ರವೀಂದ್ರ ಅವರು ಹೈದರಾಬಾದ್ನಲ್ಲಿ ತಮ್ಮ ಪುತ್ರರಿಗಾಗಿ ಆಯೋಜಿಸಿದ್ದ ವಿವಾಹವು ದಕ್ಷಿಣ ಭಾರತದ ಅತ್ಯಂತ ದುಬಾರಿ ವಿವಾಹಗಳಲ್ಲಿ ಒಂದಾಗಿದೆ. ವಧುಗಳು ಮನೀಷ್ ಮಲ್ಹೋತ್ರಾ ಅವರು ಡಿಸೈನ್ ಮಾಡಿರುವ ಬಟ್ಟೆ ಧರಿಸಿದ್ದರು ಮತ್ತು ಮಂಗಳ ಸೂತ್ರ ಕೋಟಿ ಮೌಲ್ಯದ್ದಾಗಿತ್ತು. ಸಮಾರಂಭವು ಬೆಂಗಾಲಿ, ರಾಜಸ್ಥಾನಿ, ಪಂಜಾಬಿ, ಜೋಧಾ ಅಕ್ಬರ್, ನೀರೊಳಗಿನ ಮತ್ತು ಅರೇಬಿಯನ್ ನೈಟ್ಸ್ ಸೇರಿದಂತೆ ವಿವಿಧ ಸಂಪ್ರದಾಯಗಳು ಮತ್ತು ವಿಚಾರಗಳನ್ನು ಪ್ರದರ್ಶಿಸಿತು. ಮದುವೆ ಆಮಂತ್ರಣಗಳನ್ನು ಮುತ್ತಿನಿಂದ ಪೋಣಿಸಿದ ಕವರ್ ನಲ್ಲಿ ಮಾಡಲಾಗಿತ್ತು. ನೂರಾರು ಕೋಟಿ ಖರ್ಚು ಮಾಡಲಾಗಿತ್ತು.