ಬೆಂಗಳೂರಿನಲ್ಲಿ ಜಾಹೀರಾತು ಪ್ರದರ್ಶನ ನಿಷೇಧ:
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಯಾವುದೇ ಮಾದರಿಯ ಜಾಹೀರಾತು ಪ್ರದರ್ಶನ ಮಾಡಬಾರದು ಎಂದು ನ್ಯಾಯಾಲಯವು ಕಟ್ಟುನಿಟ್ಟಿನ ಸೂಚನೆಯನ್ನು ನೀಡಲಾಗಿದೆ. ಆದ್ದರಿಂದ ಬಿಬಿಎಂಪಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಜಾಹೀರಾತು ಪ್ರದರ್ಶನವನ್ನು ನಿಷೇಧಿಸಿದ್ದು, ಯಾರೇ ಜಾಹೀರಾತು ಪ್ರದರ್ಶನದ ಬ್ಯಾನರ್, ಬಂಟಿಂಗ್ಸ್ ಹಾಕಿದ್ದರೂ ಅವುಗಳನ್ನು ತೆರವು ಮಾಡುತ್ತದೆ. ಜೊತೆಗೆ, ಜಾಹೀರಾತು ಪ್ರದರ್ಶನ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಸೂಲಿ ಜೊತೆಗೆ ಇತರೆ ಕ್ರಮ ಜರುಗಿಸುತ್ತದೆ. ಆದರೂ, ಬಿಬಿಎಂಪಿ ಕೆಲವೊಂದು ಸ್ಕೈವಾಕ್, ಬಸ್ ತಂಗುದಾಣ, ಶೌಚಾಲಯ ಸೇರಿದಂತೆ ಇತರೆ ನಿರ್ಮಾಣಗಳನ್ನು ಮಾಡಲು ಹಣ ಹೂಡಿಕೆ ಮಾಡುವ ಸಂಸ್ಥೆಗಳಿಗೆ ತಮ್ಮ ಜಾಹೀರಾತು ಪ್ರದರ್ಶನಕ್ಕೆ ವಾಮ ಮಾರ್ಗದ ಮೂಲಕ ಅವಕಾಶ ಮಾಡಿಕೊಟ್ಟಿದೆ. ಇದರಲ್ಲಿ ಪಾಲಿಕೆ ಅಧಿಕಾರಿಗಳು ಕೂಡ ಶಾಮೀಲಾಗಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.