ಮನುಸ್ಮೃತಿಯ ಅಧ್ಯಾಯ 11 ರ ಪ್ರಕಾರ, ದೇವಾಲಯದ ಆಸ್ತಿ, ಕಾಣಿಕೆಗಳು ಅಥವಾ ದೇವರಿಗೆ ಅರ್ಪಿಸಿದ ಬೆಲೆಬಾಳುವ ವಸ್ತುಗಳನ್ನು ಕದಿಯುವುದು ಮಹಾ ಪಾಪ. ಅಂತಹ ಕಳ್ಳತನ ಚಿನ್ನದ ಕಳ್ಳತನಕ್ಕೆ ಸಮಾನ ಎಂದಿದೆ. ದೇವಾಲಯದ ದೇಣಿಗೆಗಳನ್ನು ದೇವರಿಗೆ ಅರ್ಪಿಸಿದ ಪವಿತ್ರ ಆಸ್ತಿ ಎಂದು ಪರಿಗಣಿಸಲಾಗುತ್ತದೆ ಹೀಗಾಗಿ ಇದು ಸಾಮಾನ್ಯ ಅಪರಾಧ ಅಲ್ಲ, ಕಳ್ಳತನಕ್ಕಿಂತ ದೊಡ್ಡ ಅಪರಾಧವಾಗಿದೆ.
ಮನುಸ್ಮೃತಿಯಲ್ಲಿ ಕಠಿಣ ಶಿಕ್ಷೆ
ಮನುಸ್ಮೃತಿಯಲ್ಲಿ ದೇಣಿಗೆ ಕಳ್ಳರಿಗೆ ಸಾಧ್ಯವಾದಷ್ಟು ಕಠಿಣ ಶಿಕ್ಷೆ ವಿಧಿಸುತ್ತದೆ. ಅದು ಸಾಮಾನ್ಯ ಜನರಿಗೆ ಕದ್ದ ಆಸ್ತಿಯ ಮೌಲ್ಯಕ್ಕಿಂತ ಹಲವಾರು ಪಟ್ಟು ದಂಡವಾದರೆ, ವ್ಯಾಪಾರಿಗಳಿಗೆ ಇನ್ನು ಕಠಿಣ ಶಿಕ್ಷೆಯೊಂದಿಗೆ ಭಾರೀ ದಂಡ ವಿಧಿಸಲಾಗುತ್ತದೆ. ಆಡಳಿತಗಾರರಿಗಂತೂ ಇನ್ನೂ ಹೆಚ್ಚು ಕಠಿಣವಾಗಿ ಶಿಕ್ಷೆ. ಅದರಲ್ಲೂ ದೇವಾಲಯದ ಆಸ್ತಿಯನ್ನು ದುರುಪಯೋಗಪಡಿಸಿಕೊಂಡ ಪುರೋಹಿತರು ಅಥವಾ ಟ್ರಸ್ಟಿಗಳಂತಹ ವಿದ್ವಾಂಸರನ್ನು ಅತ್ಯಂತ ತಪ್ಪಿತಸ್ಥರೆಂದು ಪರಿಗಣಿಸಿ ಅಂತಹ ಸಂದರ್ಭಗಳಲ್ಲಿ, ವಿಧಿಸಲಾದ ದಂಡಗಳು ಕದ್ದ ಆಸ್ತಿಯ ಮೌಲ್ಯಕ್ಕಿಂತ 64 ರಿಂದ 128 ಪಟ್ಟು ಹೆಚ್ಚಾಗಬಹುದು ಎಂದು ತಿಳಿಸುತ್ತದೆ. ಏಕೆಂದರೆ ಅವರು ಇತರರಿಗಿಂತ ಧಾರ್ಮಿಕ ಕರ್ತವ್ಯಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆಂದು ನಿರೀಕ್ಷಿಸಲಾಗಿತ್ತು.
ದಂಡ ಮತ್ತು ಆಸ್ತಿ ಮುಟ್ಟುಗೋಲು
ಯಾರೇ ಆಗಿರಲಿ ದೇಗುಲದ ಕಾಣಿಕೆ, ಆಸ್ತಿ ಕದ್ದವರಿಗೆ ಕಠಿಣ ಶಿಕ್ಷ ಕಟ್ಟಿಟ್ಟ ಬುತ್ತಿಯಾಗಿತ್ತು. ಇದರಲ್ಲಿ ಕದ್ದ ಆಸ್ತಿಯ ಮೌಲ್ಯಕ್ಕಿಂತ ಹಲವು ಪಟ್ಟು ದಂಡ ವಿಧಿಸುವುದು ಅಥವಾ ತೀವ್ರತರವಾದ ಪ್ರಕರಣಗಳಲ್ಲಿ ಅಪರಾಧಿಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಬಗ್ಗೆಯೂ ಮನಸ್ಮೃತಿ ತಿಳಿಸಿದೆ.
ಪವಿತ್ರವಾದ ಧಾರ್ಮಿಕ ಆಸ್ತಿಯನ್ನು ಒಳಗೊಂಡ ಕಳ್ಳತನದ ಪ್ರಕರಣಗಳಲ್ಲಿ ಕಠಿಣ ದೈಹಿಕ ಶಿಕ್ಷೆಯನ್ನು ವಿಧಿಸಲು ಮನುಸ್ಮೃತಿಯು ರಾಜನಿಗೆ ಅಧಿಕಾರ ನೀಡಿತು. ಐತಿಹಾಸಿಕ ವ್ಯಾಖ್ಯಾನಗಳು ಶಿಕ್ಷೆಯು ದೇಹದ ಅಂಗ ಕತ್ತರಿಸುವಿಕೆ ಮತ್ತು ಅತ್ಯಂತ ಗಂಭೀರ ಪ್ರಕರಣಗಳಲ್ಲಿ ಮರಣ ದಂಡನೆ ಒಳಪಡಿಸುವ ಬಗ್ಗೆಯೂ ಮನಸ್ಮೃತಿ ಸೂಚಿಸಿದೆ