
ಜೆಮ್ಶೆಡ್ಪುರ(ನ.03): ಇಂಡಿಯನ್ ಸೂಪರ್ ಲೀಗ್ 2019ರ ಟೂರ್ನಿಯಲ್ಲಿ ಮೊದಲ ಗೆಲುವಿನ ನಿರೀಕ್ಷೆಯಲ್ಲಿದ್ದ ಹಾಲಿ ಚಾಂಪಿಯನ್ ಬೆಂಗಳೂರು FCಗೆ ಮತ್ತೆ ನಿರಾಸೆಯಾಗಿದೆ. ಸತತ ಮೂರನೇ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಉಕ್ಕಿನ ನಗರಿ ಜೆಮ್ಶೆಡ್ಪುರದಲ್ಲಿ ಗೆಲುಲಿನ ಖಾತೆ ತೆರೆಯೋ ವಿಶ್ವಾಸದಲ್ಲಿದ್ದ ಬೆಂಗಳೂರು ಮತ್ತೆ ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಬೆಂಗಳೂರು ತಂಡದ ಗೋಲ್ ಕೀಪರ್ ಗುರುಪ್ರೀತ್ ಸಂದ್ ಹಾಗೂ ಜೆಮ್ಶೆಡ್ಪುರ ತಂಡದ ಸುಬ್ರತಾ ಪೌಲ್ ಅದ್ಭುತ ರಕ್ಷಣೆಯಿಂದ ಉಭಯ ತಂಡಗಳು ಗೋಲಿಲ್ಲದೆ ಡ್ರಾ ಮಾಡಿಕೊಂಡಿತು.
ಇದನ್ನೂ ಓದಿ: ISL ಗೋಲಿಲ್ಲದೆ ಡ್ರಾಗೊಂಡ ಬಿಎಫ್ಸಿ ಪಂದ್ಯ
ಗೋಲಿಲ್ಲದ ಪ್ರಥಮಾರ್ಧ
ಪ್ರಥಮಾರ್ಧದಲ್ಲಿ ಬೆಂಗಳೂರು ತಂಡ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು, ಆದರೆ ಸುಬ್ರತಾ ಪಾಲ್ ಬೆಂಗಳೂರಿನ ಗೋಲು ಗಳಿಕೆಗೆ ಅಡ್ಡಿಯಾದರು. ನಿಜವಾಗಿಯೂ ಬೆಂಗಳೂರು ಎಲ್ಲ ವಿಭಾಗಗಳಲ್ಲಿ ಪ್ರಭುತ್ವ ಸಾಧಿಸಿತ್ತು, ಆದರೆ ಆತಿಥೇಯ ಜೆಮ್ಶೆಡ್ಪುರ ಎಚ್ಚರಿಕೆಯ ಪ್ರದರ್ಶನ ನೀಡಿ ಹಾಲಿ ಚಾಂಪಿಯನ್ನರ ಮುನ್ನಡೆಗೆ ಅವಕಾಶ ನೀಡಲಿಲ್ಲ. ಮೊದಲು ಜುವಾನಾನ್ ಅವರಿಗೆ ಹೆಡರ್ ಮೂಲಕ ಗೋಲು ಗಳಿಸುವ ಅವಕಾಶ ಉತ್ತಮವಾಗಿತ್ತು, ಆದರೆ ಸುಬ್ರತಾ ಪಾಲ್ ಉತ್ತಮ ರೀತಿಯಲ್ಲಿ ತಡೆದು ತಂಡಕ್ಕೆ ನೆರವಾದರು.
ಇದನ್ನೂ ಓದಿ: ಬೆಂಗಳೂರು vs ಗೋವಾ ಪಂದ್ಯ 1-1 ಗೋಲುಗಳಲ್ಲಿ ಡ್ರಾ!.
ರಫಾಯೆಲ್ ಅಗಸ್ಟೊ ಅವರ ಹೆಡರ್ ಕೂಡ ಗೋಲಾಗಿ ಬದಲಾಗಲಿಲ್ಲ. ಹರ್ಮಾನ್ಜೋತ್ ಖಬ್ರಾ ಅವರಿಗೆ ಸಿಕ್ಕ ಅವಕಾಶ ಬೆಂಗಳೂರು ತಂಡದಲ್ಲಿ ಬೇರೆ ಯಾರಿಗೂ ಸಿಗಲಿಲ್ಲ. ಕೇವಲ ಆರು ಅಡಿಗಳ ಅಂತರದಲ್ಲಿ ಚೆಂಡನ್ನು ನಿಯಂತ್ರಿಸಿ ಸುಲಭವಾಗಿ ಗೋಲು ಗಳಿಸಬಹುದಿತ್ತು, ಅವರು ಗೋಲ್ ಬಾಕ್ಸ್ ಗೆ ಗುರಿ ಇಟ್ಟಿದ್ದರೂ ಪಾಲ್ ಅವರ ಕೈ ಸೇರಿತ್ತು. ಜೇಮ್ಶೆಡ್ಪುರ ಎಫ್ ಸಿ ತಂಡಕ್ಕೆ ಉತ್ತಮವಾಗಿ ಅವಕಾಶ ಸಿಕ್ಕಿದ್ದು ಸೆರ್ಗಿಯೋ ಕ್ಯಾಸ್ಟಲ್ ಮೂಲಕ, ಅವರು ಬಹಳ ದೂರದಿಂದ ಗೋಲ್ ಬಾಕ್ಸ್ ಗೆ ಗುರಿ ಇಟ್ಟು ತುಳಿದ ಚೆಂಡು ಬೆಂಗಳೂರು ಗೋಲ್ ಕೀಪರ್ ಗುರ್ಪ್ರೀತ್ ಸಿಂಗ್ ಸಂಧೂ ಅವರನ್ನು ವಂಚಿಸಿತ್ತು, ಆದರೆ ಬಾಕ್ಸ್ ನ ಅಂಚಿಗೆ ತಾಗಿ ಹೊರನಡೆಯಿತು.
ಮೊದಲ ಪಂದ್ಯದಲ್ಲಿ ಬೆಂಗಳೂರು ತಂಡ, ನಾರ್ಥ್ ಈಸ್ಟ್ ವಿರುದ್ದ ಗೋಲಿಲ್ಲದೆ ಡ್ರಾ ಸಾಧಿಸಿದರೆ, ಗೋವಾ ವಿರುದ್ಧದ ಎರಡನೇ ಪಂದ್ಯ ದಲ್ಲಿ ಅಂತಿಮ ಕ್ಷಣದಲ್ಲಿ ಗೋಲು ನೀಡಿ ಗೆಲುವಿನಿಂದ ವಂಚಿತವಾಗಿತ್ತು. ಇದೀಗ ಮೂರನೇ ಪಂದ್ಯದಲ್ಲಿ ಬೆಂಗಳೂರು, ಜೆಮ್ಶೆಡ್ಪುರ ವಿರುದ್ದ ಸೋಲು ಕಂಡಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.