ತಾಯಿಗೇ ಶಾಪ ನೀಡಿದ ಸೂರ್ಯನ ರಥದ ಸಾರಥಿ ಅರುಣ

By Suvarna NewsFirst Published Dec 6, 2022, 4:56 PM IST
Highlights

ಸೂರ್ಯದೇವನು ಏಳು ಕುದುರೆಗಳು ಎಳೆಯುವ ರಥದಲ್ಲಿ ಚಲಿಸುವುದು ಗೊತ್ತೇ ಇದೆ. ಈ ರಥದ ಸಾರಥಿಯ ಹೆಸರನ್ನೂ ನೀವು ಕೇಳಿರಬಹುದು. ಅರುಣ ಎಂದವನ ಹೆಸರು. ಈ ಅರುಣ ಯಾರು ಬಲ್ಲಿರಾ?

ಪ್ರತಿಯೊಬ್ಬ ದೇವರಿಗೂ ತನ್ನದೇ ಆದ ವಿಶೇಷ ವಾಹನವಿದೆ. ಮಹಾದೇವನ ವಾಹನ ನಂದಿ, ದುರ್ಗೆಯ ವಾಹನ ಸಿಂಹ, ಶ್ರೀ ಗಣೇಶನ ವಾಹನ ಇಲಿ, ಸುಬ್ರಹ್ಮಣ್ಯನ ವಾಹನ ನವಿಲು.. ಹಾಗೆಯೇ ಸೂರ್ಯದೇವನ ವಾಹನವು ಏಳು ಕುದುರೆಗಳನ್ನು ಹೊಂದಿರುವ ರಥವಾಗಿದೆ.

ಪುರಾಣಗಳ ಪ್ರಕಾರ, ಭಗವಾನ್ ಸೂರ್ಯದೇವನು ಪಂಚದೇವತೆಗಳಲ್ಲಿ ಮತ್ತು ಗ್ರಹಗಳಲ್ಲಿ ಒಳಗೊಂಡಿರುವ ಏಕೈಕ ದೇವತೆ. ಅವನನ್ನು ಗ್ರಹಗಳ ರಾಜ ಎಂದೂ ಕರೆಯುತ್ತಾರೆ. ಸೂರ್ಯದೇವನ ಪ್ರಭಾವದಿಂದ ಜೀವನದಲ್ಲಿ ಸುಖ ದುಃಖಗಳು ಬರುತ್ತಲೇ ಇರುತ್ತವೆ. ಸೂರ್ಯದೇವನು ಯಾವಾಗಲೂ ಏಳು ಕುದುರೆಗಳ ರಥದ ಮೇಲೆ ಸವಾರಿ ಮಾಡುತ್ತಾನೆ. ಅವನ ರಥ ಒಂದು ಕ್ಷಣವೂ ನಿಲ್ಲುವುದಿಲ್ಲ. ಆದರೆ ಈ ರಥವನ್ನು ಓಡಿಸುವವರ ಬಗ್ಗೆ ನಿಮಗೆ ತಿಳಿದಿದೆಯೇ? ಇಂದು ನಾವು ನಿಮಗೆ ಸೂರ್ಯದೇವನ ರಥವನ್ನು ಓಡಿಸುವ ಸಾರಥಿಯ ಬಗ್ಗೆ ಹೇಳುತ್ತಿದ್ದೇವೆ.

ಅರುಣ ಸೂರ್ಯನ ಸಾರಥಿ
ಮಹಾಭಾರತದ ಪ್ರಕಾರ, ಸೂರ್ಯ ದೇವರ ರಥವನ್ನು ಓಡಿಸುವ ಸಾರಥಿಯ ಹೆಸರು ಅರುಣ. ಅವನು ವಿಷ್ಣುವಿನ ವಾಹನವಾದ ಗರುಡದೇವನ ಸಹೋದರ. ಆತ ಮಹರ್ಷಿ ಕಶ್ಯಪ ಮತ್ತು ವಿನಿತಾ ದಂಪತಿಯ ಮಗ. ದಂತಕಥೆಯ ಪ್ರಕಾರ, ವಿನಿತಾ ತನ್ನ ಪತಿ ಮಹರ್ಷಿ ಕಶ್ಯಪರಿಂದ ಇಬ್ಬರು ಬಲಿಷ್ಠ ಪುತ್ರರ ವರವನ್ನು ಬಯಸಿದಳು. ಮಹರ್ಷಿ ಕಶ್ಯಪ ವಿನಿತಾಗೆ ಎರಡು ಮೊಟ್ಟೆಗಳನ್ನು ಕೊಟ್ಟು 'ಈ ಮೊಟ್ಟೆಗಳಿಂದ ನೀವು ಇಬ್ಬರು ಬಲಿಷ್ಠ ಪುತ್ರರನ್ನು ಪಡೆಯುತ್ತೀರಿ' ಎಂದು ಹೇಳಿದರು.

ಸ್ವರ್ಗದಲ್ಲಿದ್ದರೂ ತಲೆ ಕೆಳಗೆ ನೇತಾಡುವ ತ್ರಿಶಂಕು! ಏನಿದು Trishanku Swarga?

ಅರುಣ ತನ್ನ ತಾಯಿ ವಿನಿತಾಗೆ ಶಾಪ ಯಾಕೆ ಕೊಟ್ಟ?
ಬಹಳ ಹೊತ್ತಿನ ನಂತರವೂ ಮಕ್ಕಳು ಆ ಮೊಟ್ಟೆಗಳಿಂದ ಹೊರಬರದಿದ್ದಾಗ ಕುತೂಹಲದಿಂದ ವಿನಿತಾ ಸಮಯಕ್ಕೆ ಮುನ್ನವೇ ಒಂದು ಮೊಟ್ಟೆ ಒಡೆದಳು. ಅರುಣ ಆ ಮೊಟ್ಟೆಯಿಂದ ಹೊರಬಂದ. ಆದರೆ ಅಕಾಲಿಕವಾಗಿ ಮೊಟ್ಟೆ ಒಡೆದ ಕಾರಣ ಅವನಿಗೆ ಕಾಲುಗಳಿರಲಿಲ್ಲ. ಕೋಪಗೊಂಡ ಅವನು ತನ್ನ ತಾಯಿಯನ್ನು ದಾಸಿಯಾಗುವಂತೆ ಶಪಿಸಿದನು. ಇದರ ನಂತರ, ಅರುಣನು ಕಠಿಣ ತಪಸ್ಸು ಮಾಡಿದನು ಮತ್ತು ಭಗವಾನ್ ಸೂರ್ಯದೇವನ ರಥದ ಸಾರಥಿಯಾದನು.

ಅರುಣನಿಗೂ ವಿಷ್ಣುವಿನ ವಾಹನ ಗರುಡನಿಗೂ ಏನು ಸಂಬಂಧ?
ಮಹಾಭಾರತದ ಪ್ರಕಾರ, ಶಕ್ತಿಶಾಲಿ ಗರುಡನು ವಿನಿತೆಯ ಎರಡನೇ ಮೊಟ್ಟೆಯಿಂದ ಜನಿಸಿದನು. ಈ ರೀತಿಯಲ್ಲಿ ಅರುಣ ಮತ್ತು ಗರುಡ ಒಂದೇ ಸಹೋದರರು. ಅರುಣನ ಶಾಪದಿಂದಾಗಿ, ಅವನ ತಾಯಿ ತನ್ನ ಮಲ ಮಗಳು ಕದ್ರುವಿನ ದಾಸಿಯಾದಾಗ, ಗರುಡನು ಅವಳನ್ನು ಗುಲಾಮಗಿರಿಯಿಂದ ಮುಕ್ತಗೊಳಿಸಿದನು. ಅವನ ಪರಾಕ್ರಮವನ್ನು ಕಂಡು ವಿಷ್ಣುವು ಅವನನ್ನು ತನ್ನ ವಾಹನವನ್ನಾಗಿ ಮಾಡಿಕೊಂಡನು.

Hindu Wedding: ಗೋಧೂಳಿ ಮದ್ವೆ ಮಹೂರ್ತ ಯಾಕಿಡ್ತಾರೆ ಗೊತ್ತಾ?

ಸಂಪತಿ ಮತ್ತು ಜಟಾಯು ಅರುಣನ ಮಕ್ಕಳು
ರಾಮಾಯಣದಲ್ಲಿ ಎರಡು ರಣಹದ್ದು ಪಕ್ಷಿಗಳ ವಿವರಣೆಯೂ ಇದೆ, ಅವುಗಳ ಹೆಸರು ಜಟಾಯು ಮತ್ತು ಸಂಪತಿ. ಇವರಿಬ್ಬರೂ ಅರುಣನ ಮಕ್ಕಳು ಎನ್ನಲಾಗಿದೆ. ಧರ್ಮಗ್ರಂಥಗಳ ಪ್ರಕಾರ, ಅರುಣನ ಹೆಂಡತಿಯ ಹೆಸರು ಶಯೇನಿ. ಅರುಣ ಮತ್ತು ಶಯೇನಿಗೆ ಇಬ್ಬರು ಮಕ್ಕಳಿದ್ದರು - ಸಂಪತಿ ಮತ್ತು ಜಟಾಯು. ರಾವಣನು ಸೀತಾದೇವಿಯನ್ನು ಅಪಹರಿಸುತ್ತಿರುವಾಗ, ಜಟಾಯು ಅವನನ್ನು ತಡೆಯಲು ಪ್ರಯತ್ನಿಸಿದನು, ಅವನು ಯುದ್ಧದ ಸಮಯದಲ್ಲಿ ಮರಣ ಹೊಂದಿದನು. ಮತ್ತೊಂದೆಡೆ, ರಾಕ್ಷಸ ರಾಜ ರಾವಣನು ಸೀತಾದೇವಿಯನ್ನು ಅಪಹರಿಸಿ ಲಂಕಾ ನಗರಕ್ಕೆ ಕರೆದೊಯ್ದನೆಂದು ವಾನರರಿಗೆ ಹೇಳಿದವನು ಸಂಪತಿ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!