ಸಿಕ್ಕಾಪಟ್ಟೆ ಹಣದ ಸಮಸ್ಯೆಯೇ? ಹಾಗಿದ್ದರೆ ಇದೋ ಬಂದಿದೆ ಅವಕಾಶ. ಚಂದ್ರಗ್ರಹಣ ಸಂದರ್ಭದಲ್ಲಿ ನೀವು ಯಾವೆಲ್ಲ ಪರಿಹಾರ ಕ್ರಮಗಳನ್ನು ಕೈಗೊಂಡರೆ ಹಣದ ಸಮಸ್ಯೆಗಳಿಂದ ಪಾರಾಗಬಹುದು ಎಂಬುದನ್ನು ನಾವು ಹೇಳುತ್ತೇವೆ.
ವರ್ಷದ ಮೊದಲ ಚಂದ್ರಗ್ರಹಣ(Lunar Eclipse)ಕ್ಕೆ ಹೆಚ್ಚು ದಿನಗಳು ಉಳಿದಿಲ್ಲ. ಈ ಗ್ರಹಣವು ಮೇ 16ರಂದು ಸಂಭವಿಸುತ್ತದೆ. ಧಾರ್ಮಿಕ ದೃಷ್ಟಿಕೋನದಿಂದ ಗ್ರಹಣವನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಆದ್ದರಿಂದ, ಈ ಸಮಯದಲ್ಲಿ ಅನೇಕ ರೀತಿಯ ಕೆಲಸಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಹಾಗೆಯೇ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಣದ ಸಮಯದಲ್ಲಿ ಕೆಲವೊಂದು ಕ್ರಮಗಳನ್ನು ಕೈಗೊಂಡರೆ ಗ್ರಹಣದ ದುಷ್ಪರಿಣಾಮಗಳು ದೂರವಾಗುವುದಲ್ಲದೆ ಲಕ್ಷ್ಮಿ ದೇವಿಯ ಅನುಗ್ರಹವನ್ನು ಕೂಡಾ ಪಡೆಯಬಹುದು. ಇದರಿಂದ ಹಣದ ಸಮಸ್ಯೆಗಳು ದೂರವಾಗುತ್ತವೆ. ಈ ಪರಿಹಾರಗಳು ಯಾವೆಲ್ಲ ನೋಡೋಣ.
ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು, ಗ್ರಹಣದ ಸಮಯದಲ್ಲಿ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಿ..
ಗ್ರಹಣದ ಮೊದಲು ಸ್ನಾನ ಮಾಡಿ ಮತ್ತು ಹಳದಿ ಬಟ್ಟೆ(yellow cloths)ಗಳನ್ನು ಧರಿಸಿ.
ನಂತರ ಗ್ರಹಣ ಪ್ರಾರಂಭವಾದ ತಕ್ಷಣ ಉತ್ತರಾಭಿಮುಖವಾಗಿ ಮನೆಯ ಪೂಜಾ ಸ್ಥಳ(Pooja room)ದಲ್ಲಿ ಕುಳಿತುಕೊಳ್ಳಿ.
ನಿಮ್ಮ ಮುಂದೆ ಮರದ ಮಣೆಯನ್ನಿಟ್ಟು ಅದರ ಮೇಲೆ ತಟ್ಟೆಯನ್ನು ಇರಿಸಿ ಮತ್ತು ಅದರ ಮೇಲೆ ಸ್ವಸ್ತಿಕ ಅಥವಾ ಕುಂಕುಮದಿಂದ ಓಂ ಬಿಡಿಸಿ.
ನಂತರ ಮಾಡಿದ ಓಂ ಅಥವಾ ಸ್ವಸ್ತಿಕ ಚಿಹ್ನೆಯ ಮೇಲೆ ಮಹಾಲಕ್ಷ್ಮಿ ಯಂತ್ರ(Mahalakshmi Yantra)ವನ್ನು ಸ್ಥಾಪಿಸಿ.
ನಂತರ ಇನ್ನೊಂದು ತಟ್ಟೆಯನ್ನು ತೆಗೆದುಕೊಂಡು ಅದನ್ನು ಮಹಾಲಕ್ಷ್ಮಿ ಯಂತ್ರದ ಮುಂದೆ ಇರಿಸಿ. ಆ ತಟ್ಟೆಯಲ್ಲಿ ಶಂಖ(Conch)ವನ್ನು ಇರಿಸಿ.
ನಂತರ ಒಂದು ಹಿಡಿ ಅಕ್ಕಿಯನ್ನು ತೆಗೆದುಕೊಂಡು ಅದಕ್ಕೆ ಕೇಸರಿ(Saffron) ಬಣ್ಣ ಹಾಕಿ.
ನಂತರ ಆ ಕೇಸರಿ ಅನ್ನವನ್ನು ಶಂಖಕ್ಕೆ ಹಾಕಿ.
ಇದರ ನಂತರ, ಯಂತ್ರದ ಮುಂದೆ ತುಪ್ಪದ ದೀಪವನ್ನು ಬೆಳಗಿಸಿ ಮತ್ತು ಹರಳುಗಳ ಮಾಲೆಯೊಂದಿಗೆ ಕೆಳಗೆ ನೀಡಲಾದ ಮಂತ್ರವನ್ನು ಜಪಿಸಿ.
'ಸಿದ್ಧಿ ಬುದ್ಧಿ ಪ್ರದೇ ದೇವಿ ಭುಕ್ತಿ ಮುಕ್ತಿ ಪ್ರದಾಯಿನಿ
ಮಂತ್ರಮೂರ್ತೇ ಮಹಾದೇವಿ ಮಹಾಲಕ್ಷ್ಮಿ ನಮೋಸ್ತುತೇ'
ಚಂದ್ರಗ್ರಹಣದ ಅಂತ್ಯದ ನಂತರ, ಈ ಸಂಪೂರ್ಣ ವಸ್ತುವನ್ನು(ಶಂಖವನ್ನು) ನದಿ ಅಥವಾ ಯಾವುದೇ ಹರಿಯುವ ನೀರಿನಲ್ಲಿ ಎಸೆಯಿರಿ.
ಈ ಪರಿಹಾರವನ್ನು ಮಾಡುವುದರಿಂದ ಲಾಭದ ಸಾಧ್ಯತೆಗಳು ಹೆಚ್ಚಾಗುತ್ತವೆ.