Chandra Grahan ಸಮಯದಲ್ಲಿ ಹೀಗೆ ಮಾಡಿ, ಹಣದ ಸಮಸ್ಯೆಯಿಂದ ಮುಕ್ತರಾಗಿ!

By Suvarna NewsFirst Published May 14, 2022, 2:18 PM IST
Highlights

ಸಿಕ್ಕಾಪಟ್ಟೆ ಹಣದ ಸಮಸ್ಯೆಯೇ? ಹಾಗಿದ್ದರೆ ಇದೋ ಬಂದಿದೆ ಅವಕಾಶ. ಚಂದ್ರಗ್ರಹಣ ಸಂದರ್ಭದಲ್ಲಿ ನೀವು ಯಾವೆಲ್ಲ ಪರಿಹಾರ ಕ್ರಮಗಳನ್ನು ಕೈಗೊಂಡರೆ ಹಣದ ಸಮಸ್ಯೆಗಳಿಂದ ಪಾರಾಗಬಹುದು ಎಂಬುದನ್ನು ನಾವು ಹೇಳುತ್ತೇವೆ.

ವರ್ಷದ ಮೊದಲ ಚಂದ್ರಗ್ರಹಣ(Lunar Eclipse)ಕ್ಕೆ ಹೆಚ್ಚು ದಿನಗಳು ಉಳಿದಿಲ್ಲ. ಈ ಗ್ರಹಣವು ಮೇ 16ರಂದು ಸಂಭವಿಸುತ್ತದೆ. ಧಾರ್ಮಿಕ ದೃಷ್ಟಿಕೋನದಿಂದ ಗ್ರಹಣವನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಆದ್ದರಿಂದ, ಈ ಸಮಯದಲ್ಲಿ ಅನೇಕ ರೀತಿಯ ಕೆಲಸಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಹಾಗೆಯೇ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಣದ ಸಮಯದಲ್ಲಿ ಕೆಲವೊಂದು ಕ್ರಮಗಳನ್ನು ಕೈಗೊಂಡರೆ ಗ್ರಹಣದ ದುಷ್ಪರಿಣಾಮಗಳು ದೂರವಾಗುವುದಲ್ಲದೆ ಲಕ್ಷ್ಮಿ ದೇವಿಯ ಅನುಗ್ರಹವನ್ನು ಕೂಡಾ ಪಡೆಯಬಹುದು. ಇದರಿಂದ ಹಣದ ಸಮಸ್ಯೆಗಳು ದೂರವಾಗುತ್ತವೆ. ಈ ಪರಿಹಾರಗಳು ಯಾವೆಲ್ಲ ನೋಡೋಣ.

ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು, ಗ್ರಹಣದ ಸಮಯದಲ್ಲಿ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಿ..

  • ಗ್ರಹಣದ ಮೊದಲು ಸ್ನಾನ ಮಾಡಿ ಮತ್ತು ಹಳದಿ ಬಟ್ಟೆ(yellow cloths)ಗಳನ್ನು ಧರಿಸಿ.
  • ನಂತರ ಗ್ರಹಣ ಪ್ರಾರಂಭವಾದ ತಕ್ಷಣ ಉತ್ತರಾಭಿಮುಖವಾಗಿ ಮನೆಯ ಪೂಜಾ ಸ್ಥಳ(Pooja room)ದಲ್ಲಿ ಕುಳಿತುಕೊಳ್ಳಿ.
  • ನಿಮ್ಮ ಮುಂದೆ ಮರದ ಮಣೆಯನ್ನಿಟ್ಟು ಅದರ ಮೇಲೆ ತಟ್ಟೆಯನ್ನು ಇರಿಸಿ ಮತ್ತು ಅದರ ಮೇಲೆ ಸ್ವಸ್ತಿಕ ಅಥವಾ ಕುಂಕುಮದಿಂದ ಓಂ ಬಿಡಿಸಿ.
  • ನಂತರ ಮಾಡಿದ ಓಂ ಅಥವಾ ಸ್ವಸ್ತಿಕ ಚಿಹ್ನೆಯ ಮೇಲೆ ಮಹಾಲಕ್ಷ್ಮಿ ಯಂತ್ರ(Mahalakshmi Yantra)ವನ್ನು ಸ್ಥಾಪಿಸಿ.
  • ನಂತರ ಇನ್ನೊಂದು ತಟ್ಟೆಯನ್ನು ತೆಗೆದುಕೊಂಡು ಅದನ್ನು ಮಹಾಲಕ್ಷ್ಮಿ ಯಂತ್ರದ ಮುಂದೆ ಇರಿಸಿ. ಆ ತಟ್ಟೆಯಲ್ಲಿ ಶಂಖ(Conch)ವನ್ನು ಇರಿಸಿ.
  • ನಂತರ ಒಂದು ಹಿಡಿ ಅಕ್ಕಿಯನ್ನು ತೆಗೆದುಕೊಂಡು ಅದಕ್ಕೆ ಕೇಸರಿ(Saffron) ಬಣ್ಣ ಹಾಕಿ.
  • ನಂತರ ಆ ಕೇಸರಿ ಅನ್ನವನ್ನು ಶಂಖಕ್ಕೆ ಹಾಕಿ.
  • ಇದರ ನಂತರ, ಯಂತ್ರದ ಮುಂದೆ ತುಪ್ಪದ ದೀಪವನ್ನು ಬೆಳಗಿಸಿ ಮತ್ತು ಹರಳುಗಳ ಮಾಲೆಯೊಂದಿಗೆ ಕೆಳಗೆ ನೀಡಲಾದ ಮಂತ್ರವನ್ನು ಜಪಿಸಿ.
  • 'ಸಿದ್ಧಿ ಬುದ್ಧಿ ಪ್ರದೇ ದೇವಿ ಭುಕ್ತಿ ಮುಕ್ತಿ ಪ್ರದಾಯಿನಿ
  • ಮಂತ್ರಮೂರ್ತೇ ಮಹಾದೇವಿ ಮಹಾಲಕ್ಷ್ಮಿ ನಮೋಸ್ತುತೇ' 
  • ಚಂದ್ರಗ್ರಹಣದ ಅಂತ್ಯದ ನಂತರ, ಈ ಸಂಪೂರ್ಣ ವಸ್ತುವನ್ನು(ಶಂಖವನ್ನು) ನದಿ ಅಥವಾ ಯಾವುದೇ ಹರಿಯುವ ನೀರಿನಲ್ಲಿ ಎಸೆಯಿರಿ.
  • ಈ ಪರಿಹಾರವನ್ನು ಮಾಡುವುದರಿಂದ ಲಾಭದ ಸಾಧ್ಯತೆಗಳು ಹೆಚ್ಚಾಗುತ್ತವೆ.

    ವರ್ಷದ ಮೊದಲ ಚಂದ್ರಗ್ರಹಣ ವೀಕ್ಷಣೆ ಹೇಗೆ?

ವ್ಯಾಪಾರದಲ್ಲಿ ಯಶಸ್ಸನ್ನು ಪಡೆಯಲು, ಚಂದ್ರಗ್ರಹಣದ ಸಮಯದಲ್ಲಿ ಈ ಕ್ರಮಗಳನ್ನು ಕೈಗೊಳ್ಳಿ:

  • ಚಂದ್ರಗ್ರಹಣದ ಮೊದಲು ಸ್ನಾನ ಮಾಡಿ, ಬಿಳಿ(White) ಅಥವಾ ಕೆಂಪು(red) ಬಟ್ಟೆಗಳನ್ನು ಧರಿಸಿ.
  • ಇದರ ನಂತರ, ಮನೆಯ ಪೂಜಾ ಸ್ಥಳದಲ್ಲಿ ಶುದ್ಧವಾದ ಆಸನದ ಮೇಲೆ ಉತ್ತರ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳಿ.
  • ಗ್ರಹಣ ಸಂಭವಿಸಿದ ಕೂಡಲೇ ಮಲ್ಲಿಗೆ ಎಣ್ಣೆಯ ದೀಪವನ್ನು ಹಚ್ಚಿ.
  • ಇದರ ನಂತರ, ನಿಮ್ಮ ಬಲಗೈಯಲ್ಲಿ ರುದ್ರಾಕ್ಷಿಯ ಜಪಮಾಲೆಯನ್ನು ತೆಗೆದುಕೊಳ್ಳಿ ಮತ್ತು ನಿಮ್ಮ ಎಡಗೈಯಲ್ಲಿ 5 ಗೋಮತಿ ಚಕ್ರಗಳನ್ನು ತೆಗೆದುಕೊಳ್ಳಿ.
  • ನಂತರ ತಾಯಿ ಭಗವತಿ ಕಾಳಿ ಮತ್ತು ಶಿವನನ್ನು ಧ್ಯಾನಿಸುವಾಗ, 'ಓಂ ಕ್ರೀಂ ಕಾಳಿಕೇ ಸ್ವಾಹಾ ಓಂ' ಎಂಬ ಮಂತ್ರದ ಜಪಮಾಲೆಯನ್ನು ಪಠಿಸಿ.
  • ಪಠಣವನ್ನು ಪೂರ್ಣಗೊಳಿಸಿದ ನಂತರ, ಗೋಮತಿ ಚಕ್ರಗಳನ್ನು ಪೆಟ್ಟಿಗೆಯಲ್ಲಿ ಇರಿಸಿ.

    ಅಬ್ಬಬ್ಬಾ ಲಾಟ್ರಿ! ಇನ್ನೊಂದು ತಿಂಗಳ ಕಾಲ ಈ ಐದು ರಾಶಿಗಳಿಗೆ ಬುಧಾದಿತ್ಯ ಯೋಗ!
     
  • ಇದರ ನಂತರ 5 ಹೆಸರು ಕಾಳು ತೆಗೆದುಕೊಳ್ಳಿ. ನಂತರ ತಾಯಿ ಭಗವತಿ ಕಾಳಿ ಮತ್ತು ಭಗವಾನ್ ಶಿವನನ್ನು ಸ್ಮರಿಸುತ್ತಾ "ಓಂ ಕ್ರೀಂ ಕಾಲಿಕೇ ಸ್ವಾಹಾ ಓಂ" ಎಂಬ ಮಂತ್ರ ಪಠಿಸಿ.
  • ಮಂತ್ರವನ್ನು ಜಪಿಸಿದ ನಂತರ, ನೀವು ಗೋಮತಿ ಚಕ್ರವನ್ನು ಇರಿಸಿರುವ ಪೆಟ್ಟಿಗೆಯಲ್ಲಿ ಅವನ್ನು ಸಹ ಇರಿಸಿ. 
  • ಇದರ ನಂತರ, ಮಲ್ಲಿಗೆ ದೀಪವನ್ನು ನಂದಿಸಿ ಮತ್ತು ಅದರ ಎಣ್ಣೆಯನ್ನು ಪೆಟ್ಟಿಗೆಯಲ್ಲಿ ಹಾಕಿ.
  • ನಂತರ ಗ್ರಹಣ ಅವಧಿ ಮುಗಿದ ನಂತರ, ಈ ಪೆಟ್ಟಿಗೆಯನ್ನು ಮುಚ್ಚಿ ಮತ್ತು ಕಚೇರಿ ಅಥವಾ ವ್ಯಾಪಾರ ಸ್ಥಳದ ಪೂಜಾ ಸ್ಥಳದಲ್ಲಿ ಇರಿಸಿ.
     
click me!