Navratri 2022: ಪೂಜೆಯಲ್ಲಿ ಕಳಸದ ಮೇಲೆ ತೆಂಗಿನಕಾಯಿ ಇಡುವುದೇಕೆ?

By Suvarna NewsFirst Published Sep 20, 2022, 11:38 AM IST
Highlights

ಶಾರದೀಯ ನವರಾತ್ರಿ 2022: ನವರಾತ್ರಿಯ ಸಮಯದಲ್ಲಿ ತೆಂಗಿನಕಾಯಿಯನ್ನು ಪೂಜೆಯ ವಿಶೇಷ ಭಾಗವೆಂದು ಪರಿಗಣಿಸಲಾಗುತ್ತದೆ. ಆದರೆ, ಕಲಶದ ಮೇಲೆ ತೆಂಗಿನಕಾಯಿ ಇಡಲು ಕೆಲವು ವಿಶೇಷ ಕಾರಣಗಳಿವೆ.

ಶಾರದೀಯ ನವರಾತ್ರಿ ಶೀಘ್ರದಲ್ಲೇ ಬರಲಿದೆ. ನವರಾತ್ರಿಯಲ್ಲಿ ತಾಯಿ ದುರ್ಗೆಯ ಒಂಬತ್ತು ರೂಪಗಳನ್ನು 9 ದಿನಗಳ ಕಾಲ ಪೂಜಿಸಲಾಗುತ್ತದೆ. ಈ ಬಾರಿಯ ನವರಾತ್ರಿಯು ಸೆಪ್ಟೆಂಬರ್ 26ರಿಂದ ಪ್ರಾರಂಭವಾಗಿ ಅಕ್ಟೋಬರ್ 4ರವರೆಗೆ ಇರಲಿದೆ. ಈ ಸಂದರ್ಭದಲ್ಲಿ ಘಟಸ್ಥಾಪನೆ ಮಾಡಲಾಗುತ್ತದೆ. ಅಂದರೆ ಕಳಸದ ಮೇಲೆ ತೆಂಗಿನಕಾಯಿಯಿಟ್ಟು ಪೂಜಿಸಲಾಗಿದೆ. ಕೇವಲ ನವರಾತ್ರಿಯಲ್ಲಲ್ಲ, ಬಹಳಷ್ಟು ಪೂಜೆಗಳಲ್ಲಿ ಹೀಗೆ ಕಳಸದ ಮೇಲೆ ತೆಂಗಿನಕಾಯಿಯಿಟ್ಟು ದೇವರನ್ನು ಆಹ್ವಾನಿಸಿ ಪೂಜಿಸಲಾಗುತ್ತದೆ. ಹಿಂದೂ ಧಾರ್ಮಿಕ ಕಾರ್ಯಗಳೆಂದರೆ ಅವುಗಳಲ್ಲಿ ತೆಂಗಿನಕಾಯಿಗೆ ಬಹಳ ಪ್ರಾಶಸ್ತ್ಯವಿದೆ. ತೆಂಗಿನಕಾಯಿ ಇಲ್ಲದೆ ಯಾವುದೇ ಪೂಜೆ ಅಪೂರ್ಣ ಎಂದು ನಂಬಲಾಗಿದೆ.  ಅದೇಕೆ ಕಳಸದ ಮೇಲೆ ತೆಂಗಿನಕಾಯಿಯನ್ನೇ ಇಡುತ್ತೇವೆ? ಪೂಜೆಯಲ್ಲಿ ತೆಂಗಿನಕಾಯಿಯ ಮಹತ್ವವೇನು ಎಂಬುದನ್ನು ನಾವಿಲ್ಲಿ ತಿಳಿಸುತ್ತೇವೆ. 

ಕಲಶದ ಮೇಲೆ ತೆಂಗಿನಕಾಯಿ ಇಡಲು ಕಾರಣ
ಧಾರ್ಮಿಕ ನಂಬಿಕೆಗಳ ಆಧಾರದ ಮೇಲೆ, ಕಲಶದ ಸ್ಥಾಪನೆಯು ಪೂಜೆಯಲ್ಲಿ ಬಹಳ ಮುಖ್ಯವಾದ ಕಾರ್ಯವಾಗಿದೆ. ನವರಾತ್ರಿಯಲ್ಲಿ ಕಲಶ ಸ್ಥಾಪನೆಗೆ ವಿಶೇಷ ನಿಯಮಗಳಿವೆ. ಶ್ರೀಫಲ ಎಂದು ಕರೆಯಲ್ಪಡುವ ತೆಂಗಿನಕಾಯಿಯನ್ನು ನವರಾತ್ರಿಯಲ್ಲಿ ಕಲಶದ ಮೇಲೆ ಇಟ್ಟು ಪೂಜಿಸಲಾಗುತ್ತದೆ. ಪೌರಾಣಿಕ ನಂಬಿಕೆಗಳ ಆಧಾರದ ಮೇಲೆ, ಒಮ್ಮೆ ವಿಷ್ಣು ಮತ್ತು ಲಕ್ಷ್ಮಿಯು ಭೂಮಿಯ ಮೇಲೆ ಕಾಣಿಸಿಕೊಂಡರು. ತಮ್ಮ ಜೊತೆಗೆ ಅವರು ಕಾಮಧೇನು ಹಸು ಮತ್ತು ತೆಂಗಿನ ಮರವನ್ನು ತಂದರು. ನಂಬಿಕೆಯ ಪ್ರಕಾರ, ಲಕ್ಷ್ಮಿ ದೇವಿ ಮತ್ತು ವಿಷ್ಣುವಿಗೆ ತೆಂಗಿನಕಾಯಿ ತುಂಬಾ ಇಷ್ಟ, ಆದ್ದರಿಂದ ಇದನ್ನು ಲಕ್ಷ್ಮಿ ದೇವಿಯ ಹೆಸರಿನ ನಂತರ ಶ್ರೀ ಅಂದರೆ ಶ್ರೀಫಲ ಎಂದು ಹೆಸರಿಸಲಾಯಿತು.

Hanuman Worship Tips: ಮಂಗಳವಾರ ಆಂಜನೇಯನನ್ನು ಈ ರೀತಿ ಪೂಜಿಸಿದ್ರೆ ಪ್ರಗತಿ ಖಚಿತ

ಗುರು ಗ್ರಹಕ್ಕೆ ಸಂಬಂಧಿಸಿದೆ..
ತೆಂಗಿನಕಾಯಿಯನ್ನು ಗುರು ಗ್ರಹದೊಂದಿಗೆ ಕೂಡಾ ಸಂಬಂಧಿಸಿ ನೋಡಲಾಗುತ್ತದೆ. ಧಾರ್ಮಿಕ ನಂಬಿಕೆಗಳಲ್ಲಿ ಮನೆಯ ಸಮೃದ್ಧಿಗೆ ಸಂಬಂಧಿಸಿದ ಗ್ರಹ ಇದು. ಆದ್ದರಿಂದ, ಪೂಜೆಯನ್ನು ಮಾಡುವಾಗ ನಂಬಿಕೆಯ ಪ್ರಕಾರ, ಗುರುವಿನ ಅನುಗ್ರಹವನ್ನು ಪಡೆಯಲು, ತೆಂಗಿನಕಾಯಿಯನ್ನು ಕಲಶದ ಮೇಲೆ ಇಡಲಾಗುತ್ತದೆ.

ಕಾಯಿಯ 3 ಕಣ್ಣುಗಳು
ಹಿಂದೂ ಧರ್ಮದಲ್ಲಿ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರನ್ನು ತ್ರಿದೇವ ಎಂದು ಕರೆಯಲಾಗುತ್ತದೆ. ತೆಂಗಿನಕಾಯಿಯ ಮೂರು ಕಣ್ಣುಗಳು ತ್ರಿದೇವನ ಸಂಕೇತವೆಂದು ಹೇಳಲಾಗುತ್ತದೆ. ನಂಬಿಕೆಯ ಪ್ರಕಾರ, ತ್ರಿದೇವನು ತೆಂಗಿನಕಾಯಿಯಲ್ಲಿ ವಾಸಿಸುತ್ತಾನೆ. ಅಲ್ಲದೆ, ತೆಂಗಿನಕಾಯಿಯು ಶಿವನ ನೆಚ್ಚಿನ ಫಲವಾಗಿದ್ದು, ಇದರಲ್ಲಿ ಕಾಣುವ ಮೂರು ಚುಕ್ಕೆಗಳು ಶಿವನ ಮೂರು ಕಣ್ಣುಗಳನ್ನು ಪ್ರತಿನಿಧಿಸುತ್ತವೆ ಎಂದೂ ಹೇಳಲಾಗುತ್ತದೆ. ಮೇಲಿನ ಈ ಮೂರು ಕಾರಣಗಳಿಗಾಗಿ, ಪೂಜೆ ಅಥವಾ ಧಾರ್ಮಿಕ ಕಾರ್ಯಕ್ರಮಗಳು ಬಂದಾಗ, ತೆಂಗಿನಕಾಯಿಯನ್ನು ಕಲಶದ ಮೇಲೆ ಇಟ್ಟು ಪೂಜಿಸಲಾಗುತ್ತದೆ.

ಮಂಗಳೂರು ಶಾರದೆಗೆ ವಾರಣಾಸಿ ಮುಸ್ಲಿಂ ಕುಟುಂಬ ನೇಯ್ದ ಸೀರೆ!

ಕಲಶದ ಮೇಲೆ ತೆಂಗಿನಕಾಯಿಯನ್ನು ಹೇಗೆ ಇಡುತ್ತಾರೆ?
ನಂಬಿಕೆಯ ಪ್ರಕಾರ, ನವರಾತ್ರಿಯಲ್ಲಿ ತೆಂಗಿನಕಾಯಿಯನ್ನು ಕಲಶದ ಮೇಲೆ ಇಡಲು ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಅವಶ್ಯಕ. 
ನೀವು ಕಲಶದ ಮೇಲೆ ತೆಂಗಿನಕಾಯಿಯನ್ನು ಇರಿಸಿದಾಗ, ಅದು ಪೂಜಿಸುವ ವ್ಯಕ್ತಿಯ ಕಡೆಗೆ ಮುಖ ಮಾಡಬೇಕು.
ಕಲಶವನ್ನು ಸ್ಥಾಪಿಸುವ ಸಮಯದಲ್ಲಿ, ತೆಂಗಿನಕಾಯಿಯ ಸುತ್ತ ಮಾವಿನ ಅಥವಾ ಅಶೋಕ ಎಲೆಗಳನ್ನು ಕಲಶದಲ್ಲಿ ಇರಿಸಿ.
ಕಲಶಕ್ಕೆ ನೀರನ್ನು ಸುರಿಯಿರಿ ಮತ್ತು ನಾಣ್ಯವನ್ನು ಹಾಕಿ ನಂತರ ಅದರ ಮೇಲೆ ತೆಂಗಿನಕಾಯಿಯನ್ನು ಇರಿಸಿ.
ಈ ರೀತಿ ತೆಂಗಿನಕಾಯಿಯನ್ನು ಪ್ರತಿಷ್ಠಾಪಿಸುವ ಮೂಲಕ, ಎಲ್ಲಾ ದೇವತೆಗಳಿಗೆ ಪೂಜೆ ಸ್ವೀಕಾರಾರ್ಹವಾಗುತ್ತದೆ ಮತ್ತು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಉಳಿಯುತ್ತದೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!